‘ಬಿಜೆಪಿಗೆ ತಾಕತ್ತಿದ್ರೆ ರಾಮಮಂದಿರ ನಿರ್ಮಾಣಕ್ಕೆ ಕೋರ್ಟ್ ಆದೇಶ ತರಲಿ’
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ಏನದು ಸವಾಲ್?
ನವದೆಹಲಿ, (ಅ.29): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ತಾಕತ್ತಿದ್ದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಧಿಕೃತವಾಗಿ ಕೋರ್ಟ್ ಆದೇಶ ತರಲಿ ಎಂದು ಅಸಾದುದ್ದೀನ್ ಓವೈಸಿ ಸವಾಲ್ ಹಾಕಿದ್ದಾರೆ.
ಇಂದು [ಸೋಮವಾರ] ಮಾಧ್ಯಮಗಳ ಜೊತೆ ಮಾತನಾಡಿದ ಹೈದರಬಾದ್ ಸಂಸದ, ಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಬಿಜೆಪಿಗೆ ತಾಖತ್ತಿದ್ದರೆ ಕೋರ್ಟ್ನಿಂದ ಮಂದಿರ ನಿರ್ಮಾಣಕ್ಕೆ ಆದೇಶ ತರಲಿ ಎಂದು ಸವಾಲ್ ಹಾಕಿದ್ದಾರೆ.
ಲೋಕಸಭಾ ಚುನಾವಣೆ: ಬಿಜೆಪಿ ಗೆಲ್ಲಲು ರಾಮಮಂದಿರ ನಿರ್ಮಾಣ ಅನಿವಾರ್ಯನಾ?
2019ರ ಜನವರಿಯ ವರೆಗೆ ಅಯೋಧ್ಯ ರಾಮ ಜನ್ಮಭೂಮಿ ಪ್ರಕರಣವನ್ನು ಸುಪ್ರೀಂಕೋರ್ಟ್ ಮುಂದೂಡಿದೆ. ಈ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು.
ಬಿಜೆಪಿ ನಾಯಕರ ಆದೇಶದಂತೆ ದೇಶ ನಡೆಯುವುದಿಲ್ಲ. ಭಾರತ ಇಲ್ಲಿನ ಸಂವಿಧಾನದ ಆಧಾರದ ಮೇಲೆ ನಡೆಯುತ್ತದೆ ಎಂದು ಓವೈಸಿ ಬಿಜೆಪಿ ವಿರುದ್ಧ ಕಿಡಿಕಾರಿದರು.