Asianet Suvarna News Asianet Suvarna News

‘ಬಿಜೆಪಿಗೆ ತಾಕತ್ತಿದ್ರೆ ರಾಮಮಂದಿರ ನಿರ್ಮಾಣಕ್ಕೆ ಕೋರ್ಟ್​ ಆದೇಶ ತರಲಿ’

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ಏನದು ಸವಾಲ್?  

Asaduddin Owaisi challenge BJP to bring ordinance and build Ram Temple
Author
Bengaluru, First Published Oct 29, 2018, 9:36 PM IST

ನವದೆಹಲಿ, (ಅ.29): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ತಾಕತ್ತಿದ್ದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಧಿಕೃತವಾಗಿ ಕೋರ್ಟ್​ ಆದೇಶ ತರಲಿ ಎಂದು ಅಸಾದುದ್ದೀನ್​​​ ಓವೈಸಿ ಸವಾಲ್​​ ಹಾಕಿದ್ದಾರೆ.

ಇಂದು [ಸೋಮವಾರ] ಮಾಧ್ಯಮಗಳ ಜೊತೆ ಮಾತನಾಡಿದ ಹೈದರಬಾದ್​​ ಸಂಸದ, ಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ, ಬಿಜೆಪಿಗೆ ತಾಖತ್ತಿದ್ದರೆ ಕೋರ್ಟ್​ನಿಂದ ಮಂದಿರ ನಿರ್ಮಾಣಕ್ಕೆ ಆದೇಶ ತರಲಿ ಎಂದು ಸವಾಲ್​​ ಹಾಕಿದ್ದಾರೆ.

ಲೋಕಸಭಾ ಚುನಾವಣೆ: ಬಿಜೆಪಿ ಗೆಲ್ಲಲು ರಾಮಮಂದಿರ ನಿರ್ಮಾಣ ಅನಿವಾರ್ಯನಾ?

2019ರ ಜನವರಿಯ ವರೆಗೆ ಅಯೋಧ್ಯ ರಾಮ ಜನ್ಮಭೂಮಿ ಪ್ರಕರಣವನ್ನು ಸುಪ್ರೀಂಕೋರ್ಟ್​​ ಮುಂದೂಡಿದೆ. ಈ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು. 

ಬಿಜೆಪಿ ನಾಯಕರ ಆದೇಶದಂತೆ ದೇಶ ನಡೆಯುವುದಿಲ್ಲ. ಭಾರತ ಇಲ್ಲಿನ ಸಂವಿಧಾನದ ಆಧಾರದ ಮೇಲೆ ನಡೆಯುತ್ತದೆ ಎಂದು ಓವೈಸಿ ಬಿಜೆಪಿ ವಿರುದ್ಧ ಕಿಡಿಕಾರಿದರು.

Follow Us:
Download App:
  • android
  • ios