ಕನ್ನಡ ಚಿತ್ರರಂಗದ ಖ್ಯಾತನಾಮರಾದ ಎಸ್ ನಾರಾಯಣ್, ಕ್ರೇಜಿಸ್ಟಾರ್ ರವಿಚಂದ್ರನ್, ದಿನೇಶಬಾಬು, ರಾಜೇಂದ್ರಸಿಂಗ್ ಬಾಬು, ಓಂ ಸಾಯಿಪ್ರಕಾಶ್, ಸೇರಿದಂತೆ ಅನೇಕರ ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದರು.
ಧಾರವಾಡ (ಡಿ.27): ಕನ್ನಡ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕ ಸುಭಾಷ್ ಕಡಕೋಳ ಇಂದು ಧಾರವಾಡದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
61 ವರ್ಷದ ಸುಭಾಷ್ ಅವರು, ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ನರಳುತ್ತಿದ್ದರು. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದವರಾದ ಸುಭಾಷ್ 35 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.
ಕನ್ನಡ ಚಿತ್ರರಂಗದ ಖ್ಯಾತನಾಮರಾದ ಎಸ್ ನಾರಾಯಣ್, ಕ್ರೇಜಿಸ್ಟಾರ್ ರವಿಚಂದ್ರನ್, ದಿನೇಶಬಾಬು, ರಾಜೇಂದ್ರಸಿಂಗ್ ಬಾಬು, ಓಂ ಸಾಯಿಪ್ರಕಾಶ್, ಸೇರಿದಂತೆ ಅನೇಕರ ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದರು.
ಕನ್ನಡದ ಖ್ಯಾತ ಚಿತ್ರಗಳಾದ ನಮ್ಮೂರ ಮಂದಾರ ಹೂವೇ, ಗೋಪಿ, ನೀಲಕಂಠ, ದುರ್ಗಾಶಕ್ತಿ, ಮೋಹಿನಿ, ಹೊಸರಾಗ, ಮೊಗ್ಗಿನ ಮನಸ್ಸು, ಹಿಮಪಾತ, ಪುಟ್ನಂಜ ಸೇರಿದಂತೆ ಇತರೆ ಹೆಸರಾಂತ ಚಿತ್ರಗಳಿಗೂ ಸುಭಾಷ್ ಕಲಾ ನಿರ್ದೇಶಕರಾಗಿ ದುಡಿದಿದ್ದರು.
