ಘೋಷಿಸಿದ್ದ ಶ್ರತಿ ಹರಿಹರಿಹರನ್ ಪರ ಬ್ಯಾಟಿಂಗ್ ಮಾಡಿದ ನಟ ಚೇತನ್​ ಅವರ ಸಿನಿಮಾ ಜೀವನಕ್ಕೆ ಮೀಟೂ ಅಭಿಯಾನ ಕುತ್ತು ತಂದಿದೆ. ಏನದು ಅಂತೀರಾ? ಇಲ್ಲಿದೆ ಡಿಟೇಲ್ಸ್.

ಬೆಂಗಳೂರು, [ಅ.29]: ನಟ ಅರ್ಜುನ್​ ವಿರುದ್ಧ ಮೀಟೂ ಆರೋಪಕ್ಕೆ ನಟ ಚೇತನ್ ಕೈಜೋಡಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

Add Asianetnews Kannada as a Preferred SourcegooglePreferred

ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ಅವರು ಫಿಲಂ ಚೇಂಬರ್ ಗೆ ನಟ ಚೇತನ್ ವಿರುದ್ಧ ದೂರು ನೀಡಿದ್ದಾರೆ. ಚೇತನ್ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅಭಿನಯದ ‘ಪ್ರೇಮಬರಹ’ ಚಿತ್ರಕ್ಕೆ 10 ಲಕ್ಷ ರೂ. ಮುಂಗಡವಾಗಿ ಪಡೆದಿದ್ದರು. 

#MeToo ಗೆ ಟ್ವಿಸ್ಟ್! ಶೃತಿ, ಚೇತನ್ ವಿರುದ್ಧ ಉದ್ಯಮಿಯಿಂದ ಸ್ಫೋಟಕ ಮಾಹಿತಿ!

ಈಗ ಮುಂಗಡ ಹಣವನ್ನ ವಾಪಸ್ ಕೊಡದೇ ಚೇತನ್ ಸತಾಯಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ಈ ಹಣವನ್ನ ವಾಪಸ್ ಕೊಡಿಸುವಂತೆ ಫಿಲಂ ಚೇಂಬರ್ ಗೆ ಶಿವಾರ್ಜುನ್ ದೂರು ಸಲ್ಲಿಸಿದ್ದಾರೆ.

ಅರ್ಜುನ್ ಸರ್ಜಾ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ ನಟ ಚೇತನ್!

ನಟಿ ಶ್ರುತಿ ಹರಿಹರನ್​ ಮಾಡಿದ್ದ #MeToo ಆರೋಪ ಅವರನ್ನಷ್ಟೇ ಅಲ್ಲ, ಬದಲಾಗಿ ಅವರ ಬೆನ್ನಿಗೆ ನಿಂತವರನ್ನೂ ಬಿಡದೇ ಸುತ್ತಿಕೊಳ್ಳುತ್ತಿದೆ. ಅರ್ಜುನ್​ ಸರ್ಜಾ ಮೇಲಿನ ಲೈಂಗಿಕ ಆರೋಪ ಸಂಬಂಧ ನಟ ಚೇತನ್​ ತಮ್ಮ ಫೈಯರ್​ ಸಂಸ್ಥೆ ಮೂಲಕ ಶ್ರುತಿ ಬೆನ್ನಿಗೆ ನಿಂತಿದ್ದರು. ಇದರಿಂದ ಅವರು ಸರ್ಜಾ ಕುಟುಂಬದವರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ಅವರ ಮೇಲೆ ಹಲವು ಆರೋಪಗಳು ಕೇಳಿಬಂದಿದ್ವು.