ಪೊಲೀಸರ ಗುಂಡಿಗೆ ಬಲಿಯಾದ ತಿವಾರಿ ಕುಟುಂಬಕ್ಕೆ 40 ಲಕ್ಷ ನಗದು: ಸಿಎಂ ಯೋಗಿ ಭರವಸೆ
ಸೋಮವಾರ ಇಲ್ಲಿ ತಮ್ಮನ್ನು ಭೇಟಿಯಾದ ವಿವೇಕ್ ಅವರ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ನೆರವು ಪ್ರಕಟಿಸಿದ್ದಾರೆ.
ಲಖನೌ[ಅ.02]: ಪೊಲೀಸರ ಗುಂಡಿಗೆ ಬಲಿಯಾದ ಆ್ಯಪಲ್ ಸಂಸ್ಥೆಯ ಉದ್ಯೋಗಿ ವಿವೇಕ್ ತಿವಾರಿ ಕುಟುಂಬಕ್ಕೆ ಉತ್ತರಪ್ರದೇಶ ಸರ್ಕಾರ ವಿವಿಧ ನೆರವು ಘೋಷಿಸಿದೆ. ಸೋಮವಾರ ಇಲ್ಲಿ ತಮ್ಮನ್ನು ಭೇಟಿಯಾದ
ವಿವೇಕ್ ಅವರ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ನೆರವು ಪ್ರಕಟಿಸಿದ್ದಾರೆ.
He heard what I had to say & assured help. I had earlier also said that I have faith in our state government and today that faith has strengthened: Kalpana Tiwari, wife of Vivek Tiwari who was shot dead by a police constable in Gomti Nagar area on 29 September pic.twitter.com/G2WzBRDPN6
— ANI UP (@ANINewsUP) October 1, 2018
ಇದರನ್ವಯ, ವಿವೇಕ್ರ ಪತ್ನಿ ಕಲ್ಪನಾಗೆ ಲಖನೌ ಮುನ್ಸಿಪಲ್ ಕಚೇರಿಯಲ್ಲಿ ನೌಕರಿ, ಕುಟುಂಬಕ್ಕೆ ಒಂದು ಮನೆ, ತಿವಾರಿ ಇಬ್ಬರು ಮಕ್ಕಳು ಮತ್ತು ತಿವಾರಿ ತಾಯಿ ಹೆಸರಲ್ಲಿ ತಲಾ 5 ಲಕ್ಷ ರು. ಠೇವಣಿ ಇಡಲಾಗುವುದು, ಕುಟುಂಬಕ್ಕೆ 25 ಲಕ್ಷ ರು. ಆರ್ಥಿಕ ನೆರವು ನೀಡಲಾಗುವುದು ಎಂದು ಯೋಗಿ ಭರವಸೆ ನೀಡಿದರು.