ಸೋಮವಾರ ಇಲ್ಲಿ ತಮ್ಮನ್ನು ಭೇಟಿಯಾದ ವಿವೇಕ್‌ ಅವರ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ನೆರವು ಪ್ರಕಟಿಸಿದ್ದಾರೆ. 

ಲಖನೌ[ಅ.02]: ಪೊಲೀಸರ ಗುಂಡಿಗೆ ಬಲಿಯಾದ ಆ್ಯಪಲ್‌ ಸಂಸ್ಥೆಯ ಉದ್ಯೋಗಿ ವಿವೇಕ್‌ ತಿವಾರಿ ಕುಟುಂಬಕ್ಕೆ ಉತ್ತರಪ್ರದೇಶ ಸರ್ಕಾರ ವಿವಿಧ ನೆರವು ಘೋಷಿಸಿದೆ. ಸೋಮವಾರ ಇಲ್ಲಿ ತಮ್ಮನ್ನು ಭೇಟಿಯಾದ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿವೇಕ್‌ ಅವರ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ನೆರವು ಪ್ರಕಟಿಸಿದ್ದಾರೆ. 

Scroll to load tweet…

ಇದರನ್ವಯ, ವಿವೇಕ್‌ರ ಪತ್ನಿ ಕಲ್ಪನಾಗೆ ಲಖನೌ ಮುನ್ಸಿಪಲ್‌ ಕಚೇರಿಯಲ್ಲಿ ನೌಕರಿ, ಕುಟುಂಬಕ್ಕೆ ಒಂದು ಮನೆ, ತಿವಾರಿ ಇಬ್ಬರು ಮಕ್ಕಳು ಮತ್ತು ತಿವಾರಿ ತಾಯಿ ಹೆಸರಲ್ಲಿ ತಲಾ 5 ಲಕ್ಷ ರು. ಠೇವಣಿ ಇಡಲಾಗುವುದು, ಕುಟುಂಬಕ್ಕೆ 25 ಲಕ್ಷ ರು. ಆರ್ಥಿಕ ನೆರವು ನೀಡಲಾಗುವುದು ಎಂದು ಯೋಗಿ ಭರವಸೆ ನೀಡಿದರು.