ದೇವಸ್ಥಾನದಲ್ಲಿ ಪ್ರಸಾದಕ್ಕೂ ತತ್ವಾರ! ಹಳಸಿದ ಅನ್ನ ಸಾಂಬರ್ ವಿತರಣೆ
ಪ್ರಸಾದ ಖಾಲಿಯಾಗಿದೆ ಎಂದು ಹಳಸಿದ ಅನ್ನ ಸಾಂಬಾರನ್ನು ಭಕ್ತರಿಗೆ ನೀಡಲಾಗಿದೆ. ಶ್ರೀಕ್ಷೇತ್ರ ಗೋರವನಹಳ್ಳಿ ದೇವಸ್ಥಾನದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ತುಮಕೂರು (ನ.19): ಪ್ರಸಾದ ಖಾಲಿಯಾಗಿದೆ ಎಂದು ಹಳಸಿದ ಅನ್ನ ಸಾಂಬಾರನ್ನು ಭಕ್ತರಿಗೆ ನೀಡಲಾಗಿದೆ. ಶ್ರೀಕ್ಷೇತ್ರ ಗೋರವನಹಳ್ಳಿ ದೇವಸ್ಥಾನದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಶ್ರೀಲಕ್ಷ್ಮೀ ಆಸ್ಥಾನದಲ್ಲಿ ಪ್ರಸಾದಕ್ಕೂ ಬರ ಉಂಟಾಗಿದ್ಯಾ? ಕಾರ್ತಿಕ ಮಾಸದ ದೀಪೋತ್ಸವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಪ್ರಸಾದದಲ್ಲಿ ಕೆಲವರಿಗೆ ಮಾತ್ರೆ ಸಿಕ್ಕಿದೆ. ನಂತರ ಪ್ರಸಾದ ಖಾಯಿಯಾಯಿತು ಅಂತ, ಹಳಸಿದ ಅನ್ನ- ಸಾಬಾರನ್ನು ಕಲಿಸಿ ಭಕ್ತರಿಗೆ ನೀಡಿದ್ದಾರೆ. ಇದರಿಂದ ದೇವಸ್ಥಾನದ ಆಡಳಿತ ಮಂಡಳಿ ಕ್ರಮ ಖಂಡಿಸಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಸ್ಥಾನಕ್ಕೆ ಕೋಟಿ ಕೋಟಿ ಹಣ ಹರಿದು ಬರುತ್ತದೆ. ಆದರೂ ಕನಿಷ್ಠ ಪ್ರಸಾದ ಕೊಡಲು ಆಡಳಿತ ಮಂಡಳಿಗೆ ಸಾಧ್ಯವಾಗುವುದಿಲ್ವಾ ಅಂತ ಭಕ್ತರು ಕಿಡಿ ಕಾರಿದ್ದಾರೆ.