Asianet Suvarna News Asianet Suvarna News

7 ಕೇಜಿ ಅನ್ನಭಾಗ್ಯ ಅಕ್ಕಿ 5 ಕೇಜಿಗೆ ಇಳಿಸಲು ಕಾರಣವೇನು..?

ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ‘ಅನ್ನಭಾಗ್ಯ’ದಡಿ ಬಡವರಿಗೆ ನೀಡಲಾಗುತ್ತಿದ್ದ 7 ಕೇಜಿ ಅಕ್ಕಿಯನ್ನು ಇದೀಗ 5 ಕೆಜಿಗೆ ಇಳಿಕೆ ಮಾಡಲಾಗಿದೆ. ಅದಕ್ಕೆ ಕಾರಣವೇನು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಮರ್ಥನೆ ನೀಡಿದ್ದಾರೆ. 

Anna Bhagya tweaked, Quantity of rice cut from 7 kg to 5 kg

ಉಡುಪಿ: ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ‘ಅನ್ನಭಾಗ್ಯ’ದಡಿ ಬಡವರಿಗೆ ನೀಡಲಾಗುತ್ತಿದ್ದ 7 ಕೇಜಿ ಅಕ್ಕಿಯ ಮೂಟೆ ತುಂಬಾ ಭಾರವಾಗಿತ್ತು. ಆದ್ದರಿಂದ ಇಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳು 5 ಕೇಜಿಗೆ ಇಳಿಕೆ ಮಾಡಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ. ಅವರ ಈ ಹೇಳಿಕೆ ಈಗ ಚರ್ಚೆಗೆ ನಾಂದಿ ಹಾಡಿದೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಕೊಡುವ ಅಕ್ಕಿ ಹೊರುವುದು ಭಾರ ಆಗುತ್ತದೆ ಎಂದು ಜನರು ದೂರುತ್ತಿದ್ದರು. ಆದ್ದರಿಂದ ಅದರ ಪ್ರಮಾಣವನ್ನು ಈ ಬಾರಿ ಬಜೆಟ್‌ನಲ್ಲಿ ಕಡಿಮೆ ಮಾಡಿದ್ದಾರೆ. ಇದೊಂದು ಪ್ರಯೋಗ ಎಂದು ಸಮಜಾಯಿಷಿ ನೀಡಿದರು.

ಕೇಂದ್ರವೇ ತೈಲ ಬೆಲೆ ಇಳಿಸಲಿ:  ಇದೇ ವೇಳೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಸಮರ್ಥಿಸಿಕೊಂಡ ಮಧ್ವರಾಜ್‌, ಪೆಟ್ರೋಲ್‌ ಬೆಲೆಯನ್ನು 454 ರು.ಗೆ ಇಳಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದಕಾರಣ ಕೇಂದ್ರವೇ ತೈಲ ಬೆಲೆ ಇಳಿಸಲಿ ಎಂದರು.

Follow Us:
Download App:
  • android
  • ios