ನಿರುದ್ಯೋಗಿಗಳಿಗೆ ಗುಡ್’ನ್ಯೂಸ್: ಇಂದಿನಿಂದ ಒಂದು ಸಾವಿರ ರುಪಾಯಿ ಭತ್ಯೆ
ಮುಖ್ಯಮಂತ್ರಿ ಯುವ ನೇಸ್ತಂ’ ಯೋಜನೆಯಡಿ ಯೋಜನೆಯ ವೆಬ್ವಾಹಿನಿಯಲ್ಲಿ ಈಗಾಗಲೇ ಸುಮಾರು 2 ಲಕ್ಷ ನಿರುದ್ಯೋಗಿಗಳು ನೋಂದಾಯಿತರಾಗಿದ್ದಾರೆ. ಸೂಕ್ತ ಉದ್ಯೋಗ ದೊರೆಯುವವರೆಗೆ ವಿದ್ಯಾವಂತ ನಿರುದ್ಯೋಗಿಗಳಿಗೆ ಈ ಭತ್ಯೆ ಲಭ್ಯವಾಗಲಿದೆ.
ಅಮರಾವತಿ[ಅ.02]: ಅರ್ಹ ನಿರುದ್ಯೋಗಿಗಳಿಗೆ ಮಾಸಿಕ 1,000 ರು. ನಿರುದ್ಯೋಗ ಭತ್ಯೆ ನೀಡುವ ಯೋಜನೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಇಂದು ಚಾಲನೆ ನೀಡಲಿದ್ದಾರೆ.
‘ಮುಖ್ಯಮಂತ್ರಿ ಯುವ ನೇಸ್ತಂ’ ಯೋಜನೆಯಡಿ ಯೋಜನೆಯ ವೆಬ್ವಾಹಿನಿಯಲ್ಲಿ ಈಗಾಗಲೇ ಸುಮಾರು 2 ಲಕ್ಷ ನಿರುದ್ಯೋಗಿಗಳು ನೋಂದಾಯಿತರಾಗಿದ್ದಾರೆ. ಸೂಕ್ತ ಉದ್ಯೋಗ ದೊರೆಯುವವರೆಗೆ ವಿದ್ಯಾವಂತ ನಿರುದ್ಯೋಗಿಗಳಿಗೆ ಈ ಭತ್ಯೆ ಲಭ್ಯವಾಗಲಿದೆ.
2014ರ ಚುನಾವಣೆಯ ವೇಳೆ ಟಿಡಿಪಿ ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಿತ್ತು. ಹಂತಹಂತವಾಗಿ 12 ಲಕ್ಷ ಫಲಾನುಭವಿಗಳು ಯೋಜನೆಯ ಲಾಭ ಪಡೆಯುವ ನಿರೀಕ್ಷೆಯಿದೆ.