ತಿರುವನಂತಪುರಂ(ಸೆ.15): ಓಣಂ ಆಚರಣೆಯ ವೇಳೆ ಮಲಯಾಳಿ ಜನರನ್ನು ಅವಮಾನಗೊಳಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕ್ಷಮೆ ಕೋರಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಓಣಂ ಹಬ್ಬದ ಪ್ರಯುಕ್ತ ಜನರಿಗೆ ಶುಭ ಕೋರಿರುವ ಅಮಿತ್ ಶಾ, " ಹ್ಯಾಪಿ ವಾಮನ ಜಯಂತಿ" ಎಂದು ಪೋಸ್ಟ್ ಹಾಕಿದ್ದರು. ಷಾ ಅವರ ಈ ಪೋಸ್ಟ್ ಟ್ವೀಟರ್'ನಲ್ಲಿ ವೈರಲಾಗಿ ಹರಡಿದ್ದು, ಮಲಯಾಳಿಗರನ್ನು ಕೆರಳಿಸಿದೆ. ಶಾ ಹಾಕಿರುವ ಪೋಸ್ಟ್ ನಲ್ಲಿ ವಿಷ್ಣು ತನ್ನ 5ನೇ ಅವತಾರವಾದ ವಾಮನನ ರೂಪದಲ್ಲಿದ್ದು, ಕೇರಳ ಪ್ರಾಂತ್ಯದ ಮಲಯಾಳಿ ದೊರೆ ಮಹಾಬಲಿ ತಲೆಯ ಮೇಲೆ ಕಾಲಿಟ್ಟಿರುವುದು ಮಲಯಾಳಿಗರು ಕೆರಳುವಂತೆ ಮಾಡಿದೆ.

ಈ ಹಿನ್ನಲೆಯಲ್ಲಿ ಅವರು ಕೂಡಲೆ ಜನರ ಕ್ಷಮೆ ಕೇಳಬೇಕೆಂದು ಪಿಣರಾಯಿ ಒತ್ತಾಯಿಸಿದ್ದಾರೆ.