ಹುಲ್ಲಿಗೆ ಬೆಂಕಿಯಿಂದ ದಿಲ್ಲಿ, ಪಂಜಾಬ್ ಸಿಎಂ ನಡುವೆ ವಾಕ್ಸಮರ
ದೆಹಲಿ ಜನರಿಗೆ ಮಾರಣಾಂತಿಕವಾಗಿ ಪರಿಣಮಿಸಿರುವ ದಟ್ಟ ಹೊಗೆ ಮಿಶ್ರಿತ ಮಂಜಿನ ಸಮಸ್ಯೆ ಇದೀಗ ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ನವದೆಹಲಿ: ದೆಹಲಿ ಜನರಿಗೆ ಮಾರಣಾಂತಿಕವಾಗಿ ಪರಿಣಮಿಸಿರುವ ದಟ್ಟ ಹೊಗೆ ಮಿಶ್ರಿತ ಮಂಜಿನ ಸಮಸ್ಯೆ ಇದೀಗ ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಹರ್ಯಾಣ, ಪಂಜಾಬ್ ಹಾಗೂ ದೆಹಲಿ ಸರ್ಕಾರಗಳು ರಾಜಕಾರಣ ಬದಿಗಿಟ್ಟು ಸಮಸ್ಯೆ ಪರಿಹರಿಸಲು ಒತ್ತು ಕೊಡಬೇಕು ಎಂದು ಕೇಜ್ರಿ ಸಲಹೆ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕ್ಯಾಪ್ಟನ್, 2 ಕೋಟಿ ಟನ್ನಷ್ಟು ಭತ್ತದ ಹುಲ್ಲು ಜಮೀನುಗಳಲ್ಲಿದೆ. ಅದನ್ನು ಎಲ್ಲಿ ಸಂಗ್ರಹಿಸಬೇಕು ಎಂದು ರೈತರಿಗೆ ಹೇಳಲಿ. ಈ ಸಮಸ್ಯೆ ಕೇಜ್ರಿವಾಲ್ಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.