Asianet Suvarna News Asianet Suvarna News

ರಾಮಚಂದ್ರಪುರ ಮಠ ಆಯೋಜಿಸಿದ್ದ ಕನ್ಯಾ ಸಂಸ್ಕಾರಕ್ಕೆ ಅಖಿಲ ಹವ್ಯಕ ಒಕ್ಕೂಟ ವಿರೋಧ

ರಾಮಚಂದ್ರಪುರ ಮಠ ಆಯೋಜಿಸಿದ್ದ ಕನ್ಯಾ ಸಂಸ್ಕಾರಕ್ಕೆ ಅಖಿಲ ಹವ್ಯಕ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

Akhila Havyaka Okkuta Oppose to Kanya Samskara

ಬೆಂಗಳೂರು (ಆ.22): ರಾಮಚಂದ್ರಪುರ ಮಠ ಆಯೋಜಿಸಿದ್ದ ಕನ್ಯಾ ಸಂಸ್ಕಾರಕ್ಕೆ ಅಖಿಲ ಹವ್ಯಕ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

ಹವ್ಯಕ  ಒಕ್ಕೂಟದ ಸದಸ್ಯ ಗಣೇಶ್ ಭಟ್, ರಾಮಚಂದ್ರಪುರ ಮಠದಲ್ಲಿ ಆಯೋಜಿಸಿದ್ದ ಕನ್ಯಾ ಸಂಸ್ಕಾರ ಶಂಕರಚಾರ್ಯ ಮಠ ಪರಂಪರೆಗೆ ವಿರುದ್ಧವಾಗಿದೆ. ರಾಮಚಂದ್ರಪುರದಲ್ಲಿ ಮಠಾಧಿಶರಾಗಿದ್ದ ಯಾವ ಸ್ವಾಮೀಜಿಯೂ ಕನ್ಯಾ ಸಂಸ್ಕಾರದಂತಹ ಪದ್ಧತಿ ಅನುಸರಿಸಿಲ್ಲ. ಆದರೆ  ರಾಘವೇಶ್ವರ  ಸ್ವಾಮೀಜಿಗಳು ಹೊಸ ಪರಂಪರೆಯನ್ನು ಹುಟ್ಟಿ ಹಾಕಿದ್ದಾರೆ. ಅದರಲ್ಲೂ ಚಾರ್ತುಮಾಸದಲ್ಲಿ ಕನ್ಯೆಯರಿಂದ ದೂರವಿರಬೇಕಾದ ಸ್ವಾಮೀಜಿಗಳು, ಕನ್ಯಾ ಸಂಸ್ಕಾರ ನೀಡುವ ಮೂಲಕ ಮಠದ ಪರಂಪರೆ ಉಲ್ಲಂಘಿಸಿದ್ದಾರೆ. ರಾಘವೇಶ್ವರ ಸ್ವಾಮೀಜಿಗಳ ಮೇಲೆ ಅತ್ಯಾಚಾರ ಆರೋಪವಿರುವಾಗ ಇಂತಹ ಕಾರ್ಯಕ್ರಮ ಆಯೋಜಿಸುವ  ಅಗತ್ಯವಿರಲಿಲ್ಲ. ಇದಕ್ಕೂ ಮುನ್ನ ಏಕಾಂತದಲ್ಲಿ ಕನ್ಯಾ ಸಂಸ್ಕಾರ ನೀಡಿದ್ದಾರೆ ಎಂಬ ಅನುಮಾನಗಳಿದ್ದವು. ಆದರೆ  ಎಲ್ಲರಿಗೂ ಗೊತ್ತಾಗುವ ಹಾಗೆ ಕನ್ಯಾ ಸಂಸ್ಕಾರ ನೀಡುವ ಮೂಲಕ ಸಮಾಜವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದರು.

Follow Us:
Download App:
  • android
  • ios