ಏರ್'ಸೆಲ್-ಮ್ಯಾಕ್ಸಿಸ್ ಪ್ರಕರಣ: ಮಾರನ್ ಸಹೋದರರಿಗೆ ಖುಲಾಸೆ
ಏರ್ ಸೆಲ್ ಮಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಪರ್ಕ ಸಚಿವ ದಯಾನಿಧಿ ಮಾರನ್, ಅವರ ಸಹೋದರ ಕಲಾನಿಧಿ ಮಾರನ್ ರನ್ನು ದೆಹಲಿ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ನವದೆಹಲಿ (ಫೆ.02): ಏರ್ ಸೆಲ್ ಮಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಪರ್ಕ ಸಚಿವ ದಯಾನಿಧಿ ಮಾರನ್, ಅವರ ಸಹೋದರ ಕಲಾನಿಧಿ ಮಾರನ್ ರನ್ನು ದೆಹಲಿ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ಮಲೇಷಿಯಾ ಮ್ಯಾಕ್ಸಿಸ್ ಕಂಪನಿಯು ಏರ್ ಸೆಲ್ ನ್ನು ಕೊಂಡುಕೊಳ್ಳಲು ಅಂದಾಜು ರೂ. 700 ಕೋಟಿ ಲಂಚವನ್ನು ನೀಡಿದ್ದರು ಎನ್ನಲಾಗಿತ್ತು. ಈ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ಇಂದು ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಮಾರನ್ ಸಹೋದರರನ್ನು ಖುಲಾಸೆಗೊಳಿಸಿದೆ.
" ನನಗೆ ತೀರ್ಪಿನಿಂದ ಬಹಳ ಸಂತೋಷವಾಗಿದೆ" ಎಂದು ದಯಾನಿಧಿ ಮಾರನ್ ಪ್ರತಿಕ್ರಿಸಿದ್ದಾರೆ.