ಬೆಂಗಳೂರು (ಫೆ.09): ಅಕ್ರಮ ಶಸ್ತ್ರಾಸ್ತ್ರ ಆರೋಪಿಯಾಗಿರೋ ಶ್ರೀಧರ್ ಚಿಕಿತ್ಸೆ ಇನ್ನೂ ಮುಂದುವರೆದಿದೆ . ನಿಜಕ್ಕೂ ಶ್ರೀಧರ್ ಗೆ ಏನಾಗಿದೆ ಅನ್ನುವುದರ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಬಂಧನದಿಂದ ತಪ್ಪಿಸಿಕೊಳ್ಳಲು ಶ್ರೀಧರ್ ಪ್ಲಾನ್ ಮಾಡ್ತಿದಾರಾ ಅನ್ನೊ ಅನುಮಾನ ಈಗ ಸಾರ್ವ ಜನಿಕರಲ್ಲಿ ಮೂಡಿದೆ .
ಬೆಂಗಳೂರು (ಫೆ.09): ಅಕ್ರಮ ಶಸ್ತ್ರಾಸ್ತ್ರ ಆರೋಪಿಯಾಗಿರೋ ಶ್ರೀಧರ್ ಚಿಕಿತ್ಸೆ ಇನ್ನೂ ಮುಂದುವರೆದಿದೆ . ನಿಜಕ್ಕೂ ಶ್ರೀಧರ್ ಗೆ ಏನಾಗಿದೆ ಅನ್ನುವುದರ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಬಂಧನದಿಂದ ತಪ್ಪಿಸಿಕೊಳ್ಳಲು ಶ್ರೀಧರ್ ಪ್ಲಾನ್ ಮಾಡ್ತಿದಾರಾ ಅನ್ನೊ ಅನುಮಾನ ಈಗ ಸಾರ್ವ ಜನಿಕರಲ್ಲಿ ಮೂಡಿದೆ .
ಅಗ್ನಿ ಶ್ರೀಧರ್ ಹಠಾತ್ ಲಘು ಹೃದಾಯಾಘಾತದಿಂದ ಆಸ್ಪತ್ರೆಗೆ ಸೇರಿ ಇಂದಿಗೆ ಎರಡು ದಿನ. ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಹಗಲು ರಾತ್ರಿ ಚಿಕಿತ್ಸೆ ನೀಡಿದ್ರೂ ಇನ್ನೂ ಚೇತರಿಕೆ ಹಂತದಲ್ಲಿರುವ ಅಗ್ನಿ ಶ್ರೀಧರ್ ಬಂಧನ ಭೀತಿಯಿಂದ ತತ್ತರಿಸಿದ್ದಾರಾ ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ .
ಎಲ್ಲಾ ಸರಿ ಹೋಗಿದ್ದರೆ ಶೂಟೌಟ್ ಪ್ರಕರಣದಲ್ಲಿ ಅಗ್ನಿಶ್ರೀಧರ್ ಅವರ ಕೈವಾಡ ಶಂಕೆ ಹಿನ್ನಲೆ ಅವರನ್ನು ವಿಚಾರಣೆ ನಡೆಸಬೇಕಿತ್ತು ಆದರೆ ಅವರ ಅನಾರೋಗ್ಯದ ನೆಪ ಪೊಲೀಸರ ತನಿಖೆಗೆ ಅಡ್ಡಿಯಾಗಿದೆ. ಇನ್ನು ಅವರ ಆರೋಗ್ಯದ ಬಗ್ಗೆ ವೈದ್ಯರನ್ನ ವಿಚಾರಿಸಿದರೆ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ಆಸ್ಪತ್ರೆ ದಾಖಾಲಾದ ಬಳಿಕ ಶ್ರೀಧರ್ ವಕೀಲರ ಮೂಲಕ ಜಾಮೀನಿಗೂ ಅರ್ಜಿ ಹಾಕಿದ್ದಾರೆ . ಇನ್ನು ಸಾಗರ್ ಆಸ್ಪತ್ರೆಯಲ್ಲಿ ಅಗ್ನಿ ಇರುವ ಕಾರಣ ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ . ಇಂದು ಕೂಡ ಅವರ ಅನಾರೋಗ್ಯ ವಿಚಾರಿಸಲು ಪತ್ರಕರ್ತ ಇಂದ್ರಜೀತ್ ಲಂಕೇಶ್ ಕೂಡ ಬಂದಿದ್ದರು.
