Asianet Suvarna News Asianet Suvarna News

ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ಫಾತಿಮಾಗೆ ಒಲಿದ ಭಾಗ್ಯ!

ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಯತ್ನಿಸಿದ ರೆಹನಾ ಫಾತಿಮಾಗೆ ಇದೀಗ ಭಾಗ್ಯ ಒಂದು ಒಲಿದಿದೆ ಎಂದು ಹೇಳಿಕೊಂಡಿದ್ದಾರೆ.

After Sabarimala Controversy Rehana Fathima Transferred From Kochi
Author
Bengaluru, First Published Oct 23, 2018, 12:08 PM IST

ಕೊಚ್ಚಿ: ಶಬರಿಮಲೆ ದೇಗುಲ ಪ್ರವೇಶಕ್ಕೆ ತೆರಳಲು ಯತ್ನಿಸಿ ವಿವಾದ ಸೃಷ್ಟಿಸಿದ್ದ ಸಾಮಾಜಿಕ ಕಾರ್ಯ ಕರ್ತೆ ಹಾಗೂ ಬಿಎಸ್ ಎನ್‌ಎಲ್ ಉದ್ಯೋಗಿ ರೆಹಾನಾ ಫಾತಿಮಾ ರನ್ನು ಬೇರೆ ಶಾಖೆಗೆ  ವರ್ಗಾವಣೆ ಮಾಡಲಾಗಿದೆ. 

ಫಾತಿಮಾರನ್ನು ಎರ್ನಾಕುಲಂನ ರವಿಪುರಂ ಶಾಖೆಯಿಂದ ಬೋಟ್ ಜೆಟ್ಟಿ ಶಾಖೆಗೆ ವರ್ಗಾಯಿಸಲಾ ಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫಾತಿಮಾ, ಇದು ಅಯ್ಯಪ್ಪನ ಪ್ರಸಾದ. 5 ವರ್ಷಗಳ ಹಿಂದೆಯೇ ವರ್ಗ ಕೇಳಿದ್ದೆ. 

ಈವರೆಗೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಅಯ್ಯಪ್ಪನ ದರ್ಶನಕ್ಕೆ ತೆರಳುವ ಯತ್ನ ಮಾಡುತ್ತಲೇ ಅದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios