‘ದಬಾಕೆ ಮನಾವೋ’: ಕಾಶ್ಮಿರಿಗರಿಗೆ ಎಡಿಜಿಪಿ ಮುನೀರ್ ಸಲಹೆ!
ಸ್ವಾತಂತ್ರ್ಯ ದಿನಚಾರಣೆ ಹೇಗೆ ಆಚರಿಸಬೇಕು ಎಂದು ಹೇಳಿದ ಎಡಿಜಿಪಿ| ದಬಾಕೆ ಮನಾವೀ ಎಂದ ಎಡಿಜಿಪಿ ಮುನೀರ್ ಖಾನ್| ಸ್ವಾತಂತ್ರ್ಯ ದಿನಾಚರಣೆ ‘ದಬಾಕೆ ಮನಾವೋ’ ಎಂದ ಮುನೀರ್| ಸ್ವಾತಂತ್ರ್ಯ ದಿನಾಚರಣೆಗೆ ಕಣಿವೆ ಸಿದ್ಧವಾಗಿದೆ ಎಂದ ಎಡಿಜಿಪಿ|
ಶ್ರೀನಗರ(ಆ.14): ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುವಂತೆ, ಜಮ್ಮು ಮತ್ತು ಕಾಶ್ಮೀರದ ಎಡಿಜಿಪಿ ಮುನೀರ್ ಖಾನ್ ಕಣಿವೆ ಜನತೆಗೆ ಕರೆ ನೀಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಗಾಗಿ ಕೈಗೊಂಡಿರುವ ಭದ್ರತಾ ಕ್ರಮಗಳ ಪರಿಶೀಲನೆ ನಡೆಸಿದ ಮುನೀರ್ ಖಾನ್, ಸ್ವಾತಂತ್ರ್ಯ ದಿನಾಚರಣೆಗೆ ಕಣಿವೆ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಕಾಶ್ಮಿರಿಗರಿಗೆ ಏನು ಸಂದೇಶ ಕಳುಹಿಸುತ್ತಿರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ದಬಾಕೆ ಮನಾವೋ’ (ವಿಜೃಂಭಣೆಯಿಂದ ಆಚರಿಸಿ) ಎಂದು ಮುನೀರ್ ಖಾನ್ ಹೇಳಿದರು.