ದಶಕಗಳ ಕಾಲದಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದ ಆರ್'ಬಿಐನಂತಹ ಸಂಸ್ಥೆಗಳನ್ನು ಬಲಹೀನ ಮಾಡುವ ಕೆಲಸವನ್ನು ಮೋದಿ ಹಾಗೂ ಬಿಜೆಪಿ ಮಾಡುತ್ತಿದೆ ಎಂದು ರಾಹುಲ್ ಆರೋಪಿಸಿದರು.

ನವದೆಹಲಿ(ಜ.11): ಜನರು ಅಚ್ಚೇ ದಿನ ಬರುವುದು ಯಾವಾಗ ಎಂದು ಕೇಳುತ್ತಿದ್ದಾರೆ. 2019ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದಾಗ ಮಾತ್ರ ಜನರಿಗೆ ಅಚ್ಚೇ ದಿನ(ಒಳ್ಳೆಯ ದಿನ) ಬರಲಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಜನವೇದನಾ ಸಮಾವೇಶದಲ್ಲಿ ನೋಟು ಅಮಾನ್ಯದ ಬಗ್ಗೆ ಹರಿಹಾಯ್ದಿರುವ ರಾಹುಲ್, ನರೇಂದ್ರ ಮೋದಿಯ ಈ ಕ್ರಮ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ನಿರ್ಧಾರ ಎಂದು ಗುಡುಗಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ. ಆ ಮೂಲಕ 2019ರಿಂದ ಅಚ್ಚೇದಿನ್ ಪ್ರಾರಂಭವಾಗಲಿದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಶಕಗಳ ಕಾಲದಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದ ಆರ್'ಬಿಐನಂತಹ ಸಂಸ್ಥೆಗಳನ್ನು ಬಲಹೀನ ಮಾಡುವ ಕೆಲಸವನ್ನು ಮೋದಿ ಹಾಗೂ ಬಿಜೆಪಿ ಮಾಡುತ್ತಿದೆ ಎಂದು ರಾಹುಲ್ ಆರೋಪಿಸಿದರು.