ವಿಜಯ್ ಗೋಯಲ್ ವಿರುದ್ಧ ತೆರಿಗೆ ವಂಚನೆ ದೂರು
ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ತೆರಿಗೆ ವಂಚನೆ ಮತ್ತು ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಿಸಿ ಆಮ್ ಆದ್ಮಿ ಪಕ್ಷ ಅವರ ವಿರಿದ್ಧ ಕ್ರಿಮಿನಲ್ ದೂರು ದಾಖಲಿಸಿದೆ.
ನವದೆಹಲಿ (ಅ.21): ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ತೆರಿಗೆ ವಂಚನೆ ಮತ್ತು ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಿಸಿ ಆಮ್ ಆದ್ಮಿ ಪಕ್ಷ ಅವರ ವಿರಿದ್ಧ ಕ್ರಿಮಿನಲ್ ದೂರು ದಾಖಲಿಸಿದೆ.
ಆಮ್ ಆದ್ಮಿ ಪಕ್ಷದ ಸಂಚಾಲಕ ದಿಲೀಪ್ ಪಾಂಡೆ ವಿಜಯ್ ಗೋಯಲ್ ಮತ್ತು ಅವರ ಪುತ್ರ ಸಿದ್ಧಾಂತ್ ಗೋಯಲ್ ತೆರಿಗೆ ಕಟ್ಟುವಲ್ಲಿ ಅಧಿಕಾರ ಬಳಸಿ ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಪುತ್ರ ಸಿದ್ದಾಂತ್ ಗೋಯಲ್ ಒಡೆತನದ ಕಟ್ಟಡಕ್ಕೆ ತೆರಿಗೆಯನ್ನೇ ಪಾವತಿಸಿಲ್ಲ. ಅಕ್ರಮವಾಗಿ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.