ಒಂದು ಮುತ್ತು ವ್ಯಕ್ತಿಯ ಜೀವಕ್ಕೆ ಕುತ್ತು ತಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಏನದು ಮುತ್ತಿನ ಕಥೆ.

ಬೆಂಗಳೂರು : ರಾತ್ರಿ ರಸ್ತೆಯಲ್ಲೇ ಗೆಳತಿಗೆ ಕಿಸ್ ಮಾಡುತ್ತಿದ್ದ ವ್ಯಕ್ತಿಯನ್ನು ಗ್ಯಾಂಗ್ ಒಂದು ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

Add Asianetnews Kannada as a Preferred SourcegooglePreferred

ರಾತ್ರಿ ಪಾರ್ಟಿ ಮುಗಿಸಿ ರೋಡ್ ನಲ್ಲಿ ತನ್ನ ಗೆಳತಿಗೆ ಜಗದೀಪ್ ಸಿಂಗ್ ಎನ್ನುವ ವ್ಯಕ್ತಿ ಕಿಸ್ ಕೋಡುತ್ತಿದ್ದ. ಇದನ್ನು ಕಂಡು ಚಿಟ್ಟೆ ಅಂಡ್ ಗ್ಯಾಂಗ್ ಗಲಾಟೆ ಮಾಡಿದೆ. ಕುಡಿದು ರೋಡ್ ನಲ್ಲಿ ಕಿಸ್ ಮಾಡುತ್ತಿರಾ ಎಂದು ಜಗದೀಪ್ ಸಿಂಗ್ ಜೊತೆ ಜಗಳ ತೆಗೆದಿದ್ದು, ಅಶ್ಲೀಲವಾಗಿ ಮಾತನಾಡಿದೆ.

ಇದೇ ವಿಚಾರಕ್ಕೆ ಸಾಕಷ್ಟು ಗಲಾಟೆಯಾಗಿದ್ದು, ಬಳಿಕ ಚಾಕುವಿನಿಂದ ಇರಿದು ಜಗದೀಪ್ ಹತ್ಯೆ ಮಾಡಲಾಗಿದೆ.