ದರ್ಶನ್ ಮತ್ತು ಎಸ್.ಎಸ್. ಆಸ್ಪತ್ರೆಗೆ ಸ್ವಯಂ ತೆರವುಗೊಳಿಸುವಂತೆ 7 ದಿನಗಳ ಕಾಲಾವಕಾಶ ಕೊಡುತ್ತೇವೆ. ಒತ್ತುವರಿ ಪ್ರದೇಶವನ್ನು ಸರ್ಕಾರ ವಶಕ್ಕೆ ಪಡೆಯಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.

ಬೆಂಗಳೂರು(ಅ.14): ನಟ ದರ್ಶನ್​ ಮನೆ, ಎಸ್​ಎಸ್​ ಆಸ್ಪತ್ರೆಯಿಂದ ಸರ್ಕಾರಿ ಜಾಗ ಒತ್ತುವರಿಯಾಗಿರುವುದು ಖಾತ್ರಿಯಾಗಿದೆ ಎಂದು ಬೆಂಗಳೂರಿನ ಜಿಲ್ಲಾಧಿಕಾರಿ ವಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.

ದರ್ಶನ್ ಮತ್ತು ಎಸ್.ಎಸ್. ಆಸ್ಪತ್ರೆಗೆ ಸ್ವಯಂ ತೆರವುಗೊಳಿಸುವಂತೆ 7 ದಿನಗಳ ಕಾಲಾವಕಾಶ ಕೊಡುತ್ತೇವೆ. ಒತ್ತುವರಿ ಪ್ರದೇಶವನ್ನು ಸರ್ಕಾರ ವಶಕ್ಕೆ ಪಡೆಯಲಾಗುವುದು. ಮುಂದಿನ ಕ್ರಮ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಡಿಸಿ ಶಂಕರ್ ತಿಳಿಸಿದ್ದಾರೆ.