Asianet Suvarna News Asianet Suvarna News

ಹಿಮಪಾತಕ್ಕೆ ನಾಲ್ವರು ಯೋಧರನ್ನು ಕಳೆದುಕೊಂಡ ಭಾರತ

ಸಿಯಾಚಿನ್ ನಲ್ಲಿ ಹಿಮಪಾತ/ ಹಿಮದಡಿ ಸಿಲುಕಿಕೊಂಡಿದ್ದ 8 ಜನ ಯೋಧರಲ್ಲಿ ನಾಲ್ವರ ರಕ್ಷಣೆ/ ಸೋಮವಾರ ಮಧ್ಯಾಹ್ನ ಹಿಮಪಾತ/ ನಾಲ್ವರು ವೀರಯೋಧರನ್ನು ಕಳೆದುಕೊಂಡ ಭಾರತ

4 Soldiers 2 Porters Dead After Avalanche Hits Army Patrol In Siachen latest
Author
Bengaluru, First Published Nov 18, 2019, 11:17 PM IST

ನವದೆಹಲಿ[ನ. 18]  ಸಿಯಾಚಿನ್ ನಲ್ಲಿ ಮತ್ತೆ ಹಿಮಪಾತದ ಆತಂಕ ಕಂಡುಬಂದಿದೆ. ಸಿಯಾಚಿನ್ ಹಿಮಪ್ರದೇಶದಲ್ಲಿ ಇಂದು ಮಧ್ಯಾಹ್ನ ಹಿಮಪಾತವಾದ ಕಾರಣ ನಾಲ್ವರು ವೀರ ಯೋಧರು, ಇಬ್ಬರು ಸ್ಥಳೀಯರು ಸೇರಿದಂತೆ 6 ಜನ ಮೃತಪಟ್ಟಿದ್ದಾರೆ.

ಮಧ್ಯಾಹ್ನ ಭಾರೀ ಹಿಮಪಾತವಾದ ಕಾರಣ 8 ಜನ ಸೈನಿಕರು ಹಿಮದಡಿ ಸಿಲುಕಿಕೊಂಡಿದ್ದರು. ಶೋಧ ಕಾರ್ಯವನ್ನು ಆಗಲೇ ಕೈಗೆತ್ತಿಕೊಳ್ಳಲಾಗಿತ್ತು.

ಸಿಯಾಚಿನ್​ನ 18 ಸಾವಿರ ಅಡಿ ಎತ್ತರದ ಹಿಮಶ್ರೇಣಿಯಲ್ಲಿ ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಹಿಮಪಾತ ಸಂಭವಿಸಿತ್ತು. ಹಿಮದಡಿ ಸಿಲುಕಿರುವ ಸೈನಿಕರ ರಕ್ಷಣಾ ಕಾರ್ಯಾಚರಣೆ  ಮುಕ್ತಾಯವಾಗಿದ್ದು 4 ಜನ ಸೈನಿಕರನ್ನು ರಕ್ಷಣೆ ಮಾಡಲು ಮಾತ್ರ ಸಾಧ್ಯವಾಗಿದೆ. ಗಂಭೀರ ಗಾಯಗೊಂಡಿರುವವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.

ನೆನೆ ನೆನೆ ಹನುಮಂತಪ್ಪ ಕೊಪ್ಪದ್ ಅವರನ್ನ

2016ರ ಹನುಮಂತಪ್ಪ ಪ್ರಕರಣದ ಕಹಿ ನೆನಪು: 2016ರಲ್ಲಿ ಸಿಯಾಚಿನ್‍ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಸಿಲುಕಿ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ಸಾವಿಗೀಡಾಗಿದ್ದರು. ಜೀವನ್ಮರಣ ಹೋರಾಟ ನಡೆಸಿದ್ದ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರಿಗೆಮರಣೋತ್ತರ ಶೌರ್ಯ ಪ್ರಶಸ್ತಿ ನೀಡಲಾಗಿತ್ತು.

Follow Us:
Download App:
  • android
  • ios