ಧೂಳಿನ ಬಿರುಗಾಳಿ : 26 ಜನ ದುರ್ಮರಣ
ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಅಪ್ಪಳಿಸಿದ ಧೂಳಿನ ಬಿರುಗಾಳಿ ಮತ್ತು ಮಿಂಚಿಗೆ 26 ಮಂದಿ ಬಲಿಯಾಗಿದ್ದಾರೆ. ಶುಕ್ರವಾರ ರಾತ್ರಿಯಿಂದ ಆರಂಭವಾಗಿರುವ ಧೂಳಿನ ಬಿರುಗಾಳಿ ಮತ್ತು ಮಿಂಚಿನಿಂದಾಗಿ ರಾಜ್ಯದ 11 ಜಿಲ್ಲೆಗಳು ತತ್ತರಿಸಿವೆ.
ಲಖನೌ: ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಅಪ್ಪಳಿಸಿದ ಧೂಳಿನ ಬಿರುಗಾಳಿ ಮತ್ತು ಮಿಂಚಿಗೆ 26 ಮಂದಿ ಬಲಿಯಾಗಿದ್ದಾರೆ. ಶುಕ್ರವಾರ ರಾತ್ರಿಯಿಂದ ಆರಂಭವಾಗಿರುವ ಧೂಳಿನ ಬಿರುಗಾಳಿ ಮತ್ತು ಮಿಂಚಿನಿಂದಾಗಿ ರಾಜ್ಯದ 11 ಜಿಲ್ಲೆಗಳು ತತ್ತರಿಸಿವೆ.
ಈ ನಡುವೆ, ಧೂಳಿನ ಬಿರುಗಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತತ್ಕ್ಷಣವೇ ಪರಿಹಾರ ಒದಗಿಸಬೇಕು. ಅಲ್ಲದೆ, ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಆಯಾ ಜಿಲ್ಲಾಧಿಕಾರಿಗಳು ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿರ್ದೇಶಿಸಿದ್ದಾರೆ.
ಈ ನಡುವೆ, ಇಂಥದ್ದೇ ವಾತಾವರಣ ರಾಜ್ಯದ ಕೆಲವು ಪ್ರದೇಶಗಳಲ್ಲಿ ಭಾನುವಾರವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.