ಇಲ್ಲಿನ ಯಮುನಾ ನದಿ ಕಲುಷಿತ ಗೊಳಿಸಿದ್ದ ಬೇಕರಿ ಮಾಲೀಕನನ್ನು ನ್ಯಾಯಾಲಯ 2 ವರ್ಷದ ಜೈಲಿಗಟ್ಟಿದೆ. ಜತೆಗೆ 3.5 ಲಕ್ಷ ರು. ದಂಡ ವಿಧಿಸಿದೆ.

ನವದೆಹಲಿ: ಇಲ್ಲಿನ ಯಮುನಾ ನದಿ ಕಲುಷಿತ ಗೊಳಿಸಿದ್ದ ಬೇಕರಿ ಮಾಲೀಕನನ್ನು ನ್ಯಾಯಾಲಯ 2 ವರ್ಷದ ಜೈಲಿಗಟ್ಟಿದೆ. ಜತೆಗೆ 3.5 ಲಕ್ಷ ರು. ದಂಡ ವಿಧಿಸಿದೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ನಗರ ನ್ಯಾಯಾಲಯ, ‘ಬೇಕರಿ ಘಟಕದ ಮಾಲೀಕನಂಥವರ ಅಸೂಕ್ಷ್ಮತೆ ಕಾರಣದಿಂದಾಗಿಯೇ ಪ್ರಸ್ತುತದ ಜನ ಸಮುದಾಯಕ್ಕೆ ಶುದ್ಧ ಜಲ ಸಂಪನ್ಮೂಲ ಲಭ್ಯವಾಗುತ್ತಿಲ್ಲ,’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಬೇಕರಿ ಘಟಕವನ್ನಿಟ್ಟುಕೊಂಡಿರುವ ವಿಕಾಸ್ ಬನ್ಸಾಲ್, ಅಲ್ಲಿಂದ ಬಿಡುಗಡೆಯಾಗುವ ಕೊಳಚೆ ನೀರನ್ನು ಶುದ್ಧೀಕರಿಸದೆಯೇ ನೇರವಾಗಿ ಯಮುನಾ ನದಿಗೆ ಹರಿಸುತ್ತಿದ್ದ