ಇವರಿಬ್ಬರ ವಾಹನ ಪ್ರಧಾನಿ ಪ್ರಯಾಣಿಸುತ್ತಿದ್ದ ವಾಹನದ ಮುಂದೆ ಚಲಿಸುತಿತ್ತು. ಇವರು ಬೇರೆ ದಿಕ್ಕಿನಲ್ಲಿ ಪ್ರಯಾಣಿಸಿದ ಕಾರಣ ಪ್ರಧಾನಿ ವಾಹನ ಟ್ರಾಫಿಕ್‌ನಲ್ಲಿ ಎರಡು ನಿಮಿಷ ಸಿಲುಕಿಕೊಳ್ಳಬೇಕಾಗಿ ಬಂದಿತ್ತು.

ನೋಯ್ಡಾ(ಡಿ.28): ಪ್ರಧಾನಿ ನರೇಂದ್ರ ಮೋದಿ ನೋಯ್ಡಾ ಭೇಟಿ ವೇಳೆ ಅವರ ಬೆಂಗಾಲು ವಾಹನವನ್ನು ತಪ್ಪಾದ ಮಾರ್ಗದಲ್ಲಿ ಕರೆದೊಯ್ದ ಇಬ್ಬರು ಪೊಲೀಸರನ್ನು ಅಮಾನತುಗೊಂಡಿದ್ದಾರೆ. ಭದ್ರತಾ ನಿಯಮ ಉಲ್ಲಂಘನೆಯ ಆಪಾದನೆಯಡಿಯಲ್ಲಿ ಎಸ್'ಐ ದಿಲೀಪ್ ಸಿಂಗ್ ಮತ್ತು ಪೊಲೀಸ್ ಚಾಲಕ ಜೈಪಾಲ್ ಅಮಾನತಾಗಿದ್ದಾರೆ. ಇವರಿಬ್ಬರ ವಾಹನ ಪ್ರಧಾನಿ ಪ್ರಯಾಣಿಸುತ್ತಿದ್ದ ವಾಹನದ ಮುಂದೆ ಚಲಿಸುತಿತ್ತು. ಇವರು ಬೇರೆ ದಿಕ್ಕಿನಲ್ಲಿ ಪ್ರಯಾಣಿಸಿದ ಕಾರಣ ಪ್ರಧಾನಿ ವಾಹನ ಟ್ರಾಫಿಕ್‌ನಲ್ಲಿ ಎರಡು ನಿಮಿಷ ಸಿಲುಕಿಕೊಳ್ಳಬೇಕಾಗಿ ಬಂದಿತ್ತು.

Add Asianetnews Kannada as a Preferred SourcegooglePreferred