ಆತ ಉದಯೋನ್ಮುಖ ಯುವ ನಟ. ಆದರೆ ಸಾವು ಎನ್ನುವುದು ಅವರನ್ನು ಹುಡುಕಿಕೊಂಡು ಬಂದಿತ್ತು. ಅಪಘಾತದಲ್ಲಿ ಯುವ ಖಳನಟ ಸಾವನ್ನಪ್ಪಿದ್ದಾರೆ.
ಬೆಂಗಳೂರು[ಜೂ. 10] ಬೈಕಿಗೆ ಕಾರ್ ಡಿಕ್ಕಿಯಾಗಿ ಯುವ ಖಳ ನಟ ಸಾವನ್ನಪ್ಪಿದ್ದಾರೆ. 24 ವರ್ಷದ ಕುಮಾರ್ ದಾರುಣ ಸಾವಿಗೆ ಗುರಿಯಾಗಿದ್ದಾರೆ. ಕಗ್ಗಲಿಪುರ ಸಮೀಪದ ಗಾಂಧಿನಗರದಲ್ಲಿ ಮೃತಪಟ್ಟಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಸಿನಿಮಾದಲ್ಲಿ ಕುಮಾರ್ ಖಳನಟನಾಗಿ ಅಭಿನಯಿಸಿದ್ದರು. ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬುಲೆರೋ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
