ರಜನಿಕಾಂತ್‌ ಅಭಿನಯದ ಕಬಾಲಿ ಸಿನಿಮಾವನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ವಿತರಣೆ ಮಾಡಿದ್ದ ಪ್ರಖ್ಯಾತ ನಿರ್ಮಾಪಕ ಕೆಪಿ ಚೌಧರಿ ತಮ್ಮ 44ನೇ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಣಜಿ (ಫೆ.4): ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ್ದ 'ಕಬಾಲಿ' ಸಿನಿಮಾವನ್ನ ತೆಲುಗಲ್ಲಿ ರಿಲೀಸ್ ಮಾಡಿದ್ದ ಕೆ.ಪಿ. ಚೌಧರಿ, ಗೋವಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ವರ್ಷಗಳಿಂದ ಸಾಲದ ಸಮಸ್ಯೆಯಲ್ಲಿ ಸಿಲುಕಿದ್ದ ಚೌಧರಿ, ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಗೋವಾದಲ್ಲಿ ವಾಸವಾಗಿದ್ದ ಚೌಧರಿ ನಿನ್ನೆ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಯಾರಿದು ಕೆ.ಪಿ. ಚೌಧರಿ?: ರಜನಿಕಾಂತ್ 'ಕಬಾಲಿ' ಸಿನಿಮಾವನ್ನ ತೆಲುಗಲ್ಲಿ ರಿಲೀಸ್ ಮಾಡಿದ್ದ ಚೌಧರಿ, ಸರ್ದಾರ್ ಗಬ್ಬರ್ ಸಿಂಗ್, ಸೀತಮ್ಮ ವಾಕಿಟ್ಲೋ, ಶ್ರೀಮಲ್ಲಿ ಸೇಟು ಸಿನಿಮಾಗಳನ್ನ ವಿತರಣೆ ಮಾಡಿದ್ದರು. ಕೆಲವು ಸಿನಿಮಾಗಳಿಗೆ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದರು. ರಿಯಲ್ ಎಸ್ಟೇಟ್‌ನಲ್ಲಿ ನಷ್ಟ ಅನುಭವಿಸಿದ ನಂತರ ಗೋವಾಕ್ಕೆ ಹೋಗಿ ಪಬ್ ನಡೆಸುತ್ತಿದ್ದರು. ಆದರೆ ಆ ವ್ಯವಹಾರದಲ್ಲೂ ನಷ್ಟ ಅನುಭವಿಸಿದರು. ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಅಂತ ಗೋವಾ ಸರ್ಕಾರ ಅವರ ಪಬ್ ಅನ್ನು ಧ್ವಂಸ ಮಾಡಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡ್ರಗ್ಸ್ ಕೇಸ್‌ನಲ್ಲಿ ಬಂಧನ: ಗೋವಾಕ್ಕೆ ಬರುವ ಸಿನಿಮಾ ತಾರೆಯರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು ಎನ್ನುವ ಆರೋಪವೂ ಇವರ ಮೇಲಿದೆ. ಸಿನಿಮಾ ಮತ್ತು ಪಬ್‌ನಿಂದಾದ ನಷ್ಟವನ್ನ ಸರಿದೂಗಿಸಲು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರು ಅಂತ ಹೇಳಲಾಗ್ತಿದೆ. ಡ್ರಗ್ಸ್ ಸಪ್ಲೈ ಮಾಡಿದ ಆರೋಪದಲ್ಲಿ ಚೌಧರಿ ಬಂಧನಕ್ಕೊಳಗಾಗಿದ್ದರು. ಆಮೇಲೆ ಅವರ ಬದುಕು ನರಕವಾಗಿತ್ತು. ಡ್ರಗ್ಸ್ ಕೇಸ್ ಇನ್ನೂ ವಿಚಾರಣೆ ಹಂತದಲ್ಲಿದೆ.

ಬೆಂಗಳೂರು ವಿವಿ ಹಾಸ್ಟೆಲ್‌ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಆತ್ಮಹತ್ಯೆ

ಆತ್ಮಹತ್ಯೆಗೆ ಕಾರಣ?: ಡ್ರಗ್ಸ್ ಕೇಸ್‌ನಲ್ಲಿ ಜಾಮೀನಿನ ಮೇಲೆ ಹೊರಬಂದ ಚೌಧರಿ ಗೋವಾದಲ್ಲಿ ವಾಸವಾಗಿದ್ದರು. ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರು ಅಂತ ಹೇಳಲಾಗ್ತಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡ್ರಗ್ಸ್ ದಂಧೆ ಚೌಧರಿ ಆತ್ಮಹತ್ಯೆಗೆ ಕಾರಣನಾ ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎದೆಹಾಲು ಗಂಟಲಲ್ಲಿ ಸಿಕ್ಕು ಮಗು ಸತ್ತಿದೆ ಎಂದು ತಿಳಿದ ತಾಯಿಯ ಆತ್ಮಹತ್ಯೆ ಯತ್ನ, ಬಳಿಕ ಗೊತ್ತಾಗಿದ್ದೇ ಬೇರೆ!