Asianet Suvarna News Asianet Suvarna News

ಮೈಸೂರಿನಲ್ಲಿ ಕೊರೋನಾದಿಂದಾಗಿ ಕಾಸು ಕಂಡರು ಭಯ..!

ಹಣದ ಮೂಲಕವೂ ಕೊರೋನಾ ಹರಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ರಸ್ತೆ ಮೇಲೆ ಹಣ ಬಿದ್ದರೂ ಎತ್ತಿಕೊಳ್ಳಲು ಹಿಂದೆ-ಮುಂದೆ ನೋಡುವ ಪರಿಸ್ಥಿತಿ ಬಂದೊದಗಿದೆ. ಆದರೆ ದೇವರಾಜ ಮೊಹಲ್ಲಾದಲ್ಲಿ ವ್ಯಕ್ತಿಯೊಬ್ಬ ಇದೀಗ ಕ್ವಾರಂಟೈನ್‌ಗೆ ಒಳಗಾಗುವ ಭೀತಿ ಎದುರಿಸುತ್ತಿದ್ದಾರೆ.

Coronavirus Effect People scared to pick coins lay on roads of Mysore
Author
Mysore, First Published Apr 22, 2020, 4:53 PM IST

ಮೈಸೂರು(ಏ.22): ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಎನ್ನುವ ಮಾತೊಂದಿದೆ. ಆದರೆ ಕೊರೋನಾದಿಂದಾಗಿ ಪ್ರಾಣದ ಮುಂದೆ ಹಣ ನಗಣ್ಯ ಎನ್ನುವುದು ಇದೀಗ ಸಾಬೀತಾಗಿದೆ. 

ಹಣದ ಮೂಲಕವೂ ಕೊರೋನಾ ವೈರಸ್ ಹರಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ರಸ್ತೆ ಮೇಲೆ ಹಣ ಬಿದ್ದರೂ ಎತ್ತಿಕೊಳ್ಳಲು ಹಿಂದೆ-ಮುಂದೆ ನೋಡುವ ಪರಿಸ್ಥಿತಿ ಬಂದೊದಗಿದೆ. ಆದರೆ ದೇವರಾಜ ಮೊಹಲ್ಲಾದಲ್ಲಿ ವ್ಯಕ್ತಿಯೊಬ್ಬ ಇದೀಗ ಕ್ವಾರಂಟೈನ್‌ಗೆ ಒಳಗಾಗುವ ಭೀತಿ ಎದುರಿಸುತ್ತಿದ್ದಾರೆ.

ಕೆಲ‌ ಮಂತ್ರಿಗಳಿಗೆ ಕಂಟಕ‌: ಕರ್ನಾಟಕದ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ...!

ಹೌದು, ರಸ್ತೆ ಮೇಲೆ ಬಿದ್ದಿದ್ದ ನಾಣ್ಯಗಳನ್ನು ಬಾಬಣ್ಣ ಎತ್ತಿಕೊಂಡಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಹೀಗಾಗಿ ಪೊಲೀಸರು ಆತನನ್ನು ವಶಕ್ಕೆ ಪಡೆದು ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 
 

Follow Us:
Download App:
  • android
  • ios