ಇಂದು ಯಾವ ರಾಶಿಯವರಿಗೆ, ಯಾವ ಫಲವಿದೆ? ಓದಿ ಈ ದಿನದ ಭವಿಷ್ಯ?

ಶ್ರೀ ವಿಲಂಬಿ ನಾಮ ಸಂವತ್ಸರ, ಉತ್ತರಾಯಣ ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಬ್ರಹ್ಮ ಯೋಗ, ಗರಜ ಕರಣ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೇಷ : ರಾಶ್ಯಾಧಿಪತಿ ಭಾಗ್ಯಸ್ಥಾನದಲ್ಲಿ ಶನಿಯುತನಾಗಿರುವುದರಿಂದ ನಷ್ಟ. ಮನಸಿಗೆ ಬೇಸರ, ಸುಬ್ರಹ್ಮಣ್ಯ ದರ್ಶನ ಮಾಡಿ

ವೃಷಭ : ಆರೋಗ್ಯ ಸ್ಥಾನದಲ್ಲಿ ರಾಹುವಿದ್ದು, ಕುಜ ದೃಷ್ಟಿ ಇರುವುದರಿಂದ ಆರೋಗ್ಯದಲ್ಲಿ ಸಮಸ್ಯೆ, ದುರ್ಗಾ ದರ್ಶನ ಮಾಡಿ

ಮಿಥುನ: ದ್ವಿತಿಯದ ರಾಹುವಿನಿಂದ ಕುಟುಂಬ ಕಲಹ, ಆದರೆ ಗುರುವಿನ ಅನುಕೂಲವಿದೆ, ಶ್ರೀನಿವಾಸ ಕಲ್ಯಾಣ ಮಾಡಿಸಿ

ಕಟಕ: ಚಂದ್ರ ಅಷ್ಟಮದಲ್ಲಿರುವುದರಿಂದ ಆರೋಗ್ಯ ಬಾಧೆ, ಶೀತ ಸಂಬಂಧೀ ಬಾಧೆ. ಧನ್ವಂತರಿ ಹೋಮ ಮಾಡಿಸಿ

ಸಿಂಹ: ಧನ ವ್ಯಯ, ಬಾಲಿ ವಸೂಲಿ ಸಾಧ್ಯವಿಲ್ಲ, ಶಿವನಿಗೆ ಜಲಾಭಿಷೇಕ ಮಾಡಿಸಿ

ಕನ್ಯಾ: ವಾಹನ ಸ್ಥಾನದಲ್ಲಿ ಶನಿ-ಕುಜರಿರುವುದರಿಂದ ಓಡಾಟದಲ್ಲಿ ಸಮಸ್ಯೆಯಾಗಬಹುದು. ಜಾಗರೂಕರಾಗಿರಿ

ತುಲಾ: ಗುರು ರಾಶಿಯಲ್ಲೇ ಇರುವುದರಿಂದ ಧೈರ್ಯ, ಕಾರ್ಯ ಸಾಧನಗೆ ಅನುಕೂಲ, ಗುರು ಸ್ಮರಣೆ ಮಾಡಿ 

ವೃಶ್ಚಿಕ: ರಾಶ್ಯಾಧಿಪತಿ ದ್ವಿತೀಯದಲ್ಲಿರುವುದರಿಂದ ಮಾತಿನಿಂದ ಕಲಹ, ಸಾಧಾರಣ ದಿನ, ಕೆಂಪು ವಸ್ತ್ರ ದಾನ ಮಾಡಿ

ಧನಸ್ಸು: ಸುಖ ಸ್ಥಾನದಲ್ಲಿ ಬುಧನು ನೀಚನಾಗಿರುವುದರಿಂದ ಉದ್ಯೋಗ ಸಮಸ್ಯೆ, ಕುಟುಂಬ ಸಮಸ್ಯೆಯೂ ಕಾಡಲಿದೆ

ಮಕರ: ತಲೆಯಲ್ಲಿ ನೂರೆಂಟು ಯೋಚನೆ, ಗೊಂದಲದ ವಾತಾವರಣ, ಶಿವ ಧ್ಯಾನ ಮಾಡಿ

ಕುಂಭ: ರಾಶಿಯಲ್ಲೇ ಚಂದ್ರ ಸ್ಥಿತನಾಗಿರುವುದರಿಂದ ದೇಹ ಬಾಧೆ, ದೇವರ ಅನುಗ್ರಹವೂ ಇದೆ. ಸಂಜೀವಿನಿ ಮಂತ್ರ ಜಪಿಸಿ

ಮೀನ: ಉದ್ಯೋಗದಲ್ಲಿ ಕಿರಿಕಿರಿ, ಮಿತ್ರರಿಂದ ಸಹಾಯ, ದಕ್ಷಿಣಾಮೂರ್ತಿ ದರ್ಶನ ಮಾಡಿ

- ಡಾ.ಗೋಪಾಲಕೃಷ್ಣ ಶರ್ಮ,ಜ್ಯೋತಿಷಿಗಳು