ಹೇಗಿದೆ ಈ ದಿನದ ರಾಶಿ ಫಲ?
ಇಂದು ಯಾವ ರಾಶಿಯವರಿಗೆ, ಯಾವ ಫಲವಿದೆ? ಓದಿ ಈ ದಿನದ ಭವಿಷ್ಯ?
ಶ್ರೀ ವಿಲಂಬಿ ನಾಮ ಸಂವತ್ಸರ, ಉತ್ತರಾಯಣ ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಬ್ರಹ್ಮ ಯೋಗ, ಗರಜ ಕರಣ
ಮೇಷ : ರಾಶ್ಯಾಧಿಪತಿ ಭಾಗ್ಯಸ್ಥಾನದಲ್ಲಿ ಶನಿಯುತನಾಗಿರುವುದರಿಂದ ನಷ್ಟ. ಮನಸಿಗೆ ಬೇಸರ, ಸುಬ್ರಹ್ಮಣ್ಯ ದರ್ಶನ ಮಾಡಿ
ವೃಷಭ : ಆರೋಗ್ಯ ಸ್ಥಾನದಲ್ಲಿ ರಾಹುವಿದ್ದು, ಕುಜ ದೃಷ್ಟಿ ಇರುವುದರಿಂದ ಆರೋಗ್ಯದಲ್ಲಿ ಸಮಸ್ಯೆ, ದುರ್ಗಾ ದರ್ಶನ ಮಾಡಿ
ಮಿಥುನ: ದ್ವಿತಿಯದ ರಾಹುವಿನಿಂದ ಕುಟುಂಬ ಕಲಹ, ಆದರೆ ಗುರುವಿನ ಅನುಕೂಲವಿದೆ, ಶ್ರೀನಿವಾಸ ಕಲ್ಯಾಣ ಮಾಡಿಸಿ
ಕಟಕ: ಚಂದ್ರ ಅಷ್ಟಮದಲ್ಲಿರುವುದರಿಂದ ಆರೋಗ್ಯ ಬಾಧೆ, ಶೀತ ಸಂಬಂಧೀ ಬಾಧೆ. ಧನ್ವಂತರಿ ಹೋಮ ಮಾಡಿಸಿ
ಸಿಂಹ: ಧನ ವ್ಯಯ, ಬಾಲಿ ವಸೂಲಿ ಸಾಧ್ಯವಿಲ್ಲ, ಶಿವನಿಗೆ ಜಲಾಭಿಷೇಕ ಮಾಡಿಸಿ
ಕನ್ಯಾ: ವಾಹನ ಸ್ಥಾನದಲ್ಲಿ ಶನಿ-ಕುಜರಿರುವುದರಿಂದ ಓಡಾಟದಲ್ಲಿ ಸಮಸ್ಯೆಯಾಗಬಹುದು. ಜಾಗರೂಕರಾಗಿರಿ
ತುಲಾ: ಗುರು ರಾಶಿಯಲ್ಲೇ ಇರುವುದರಿಂದ ಧೈರ್ಯ, ಕಾರ್ಯ ಸಾಧನಗೆ ಅನುಕೂಲ, ಗುರು ಸ್ಮರಣೆ ಮಾಡಿ
ವೃಶ್ಚಿಕ: ರಾಶ್ಯಾಧಿಪತಿ ದ್ವಿತೀಯದಲ್ಲಿರುವುದರಿಂದ ಮಾತಿನಿಂದ ಕಲಹ, ಸಾಧಾರಣ ದಿನ, ಕೆಂಪು ವಸ್ತ್ರ ದಾನ ಮಾಡಿ
ಧನಸ್ಸು: ಸುಖ ಸ್ಥಾನದಲ್ಲಿ ಬುಧನು ನೀಚನಾಗಿರುವುದರಿಂದ ಉದ್ಯೋಗ ಸಮಸ್ಯೆ, ಕುಟುಂಬ ಸಮಸ್ಯೆಯೂ ಕಾಡಲಿದೆ
ಮಕರ: ತಲೆಯಲ್ಲಿ ನೂರೆಂಟು ಯೋಚನೆ, ಗೊಂದಲದ ವಾತಾವರಣ, ಶಿವ ಧ್ಯಾನ ಮಾಡಿ
ಕುಂಭ: ರಾಶಿಯಲ್ಲೇ ಚಂದ್ರ ಸ್ಥಿತನಾಗಿರುವುದರಿಂದ ದೇಹ ಬಾಧೆ, ದೇವರ ಅನುಗ್ರಹವೂ ಇದೆ. ಸಂಜೀವಿನಿ ಮಂತ್ರ ಜಪಿಸಿ
ಮೀನ: ಉದ್ಯೋಗದಲ್ಲಿ ಕಿರಿಕಿರಿ, ಮಿತ್ರರಿಂದ ಸಹಾಯ, ದಕ್ಷಿಣಾಮೂರ್ತಿ ದರ್ಶನ ಮಾಡಿ
- ಡಾ.ಗೋಪಾಲಕೃಷ್ಣ ಶರ್ಮ,ಜ್ಯೋತಿಷಿಗಳು