ಲವರ್ಗಾಗಿ (Lover) ಗಂಡ ಮತ್ತು ಮಕ್ಕಳನ್ನು ಬಿಟ್ಟು ಬಂದ ಮಹಿಳೆಗೆ ಪ್ರಿಯತಮ ಮೋಸ ಮಾಡಿರುವ ಘಟನೆ ಯಾದಗಿರಿ (Yadagir) ತಾಲೂಕಿನ ಎಲ್ಹೇರಿ ಗ್ರಾಮದಲ್ಲಿ ನಡೆದಿದೆ.
ಯಾದಗಿರಿ (ಏ. 17): ಲವರ್ಗಾಗಿ (Lover) ಗಂಡ ಮತ್ತು ಮಕ್ಕಳನ್ನು ಬಿಟ್ಟು ಬಂದ ಮಹಿಳೆಗೆ ಪ್ರಿಯತಮ ಮೋಸ ಮಾಡಿರುವ ಘಟನೆ ಯಾದಗಿರಿ (Yadagir) ತಾಲೂಕಿನ ಎಲ್ಹೇರಿ ಗ್ರಾಮದಲ್ಲಿ ನಡೆದಿದೆ. ಮದುವೆ ಮಾಡಿಕೋಳ್ತೀನಿ ಎಂದು ಎಲ್ಹೇರಿ ಗ್ರಾಮದ ಪ್ರಕಾಶರೆಡ್ಡಿ ಮದುವೆಯಾಗಿ ಎರಡು ಮಕ್ಕಳು ಹೊಂದಿದ್ದ ಬಸವಲಿಂಗಮ್ಮಳಿಗೆ ಮೋಸ ಮಾಡಿದ್ದಾನೆ.
Add Asianetnews Kannada as a Preferred Source

ಎಲ್ಹೇರಿ ಗ್ರಾಮದ ಸಿದ್ದರಾಮರೆಡ್ಡಿ ಜೊತೆ ಬಸವಲಿಂಗಮ್ಮ ವಿವಾಹವಾಗಿದ್ದರು. ಮದುವೆ ನಂತರ ಬಸವಲಿಂಗಮ್ಮಳಿಗೆ ಪ್ರಿತಿ ಮಾಡುತ್ತೆನೆಂದು ಪೀಡಿಸಿದ್ದ ಪ್ರಕಾಶರೆಡ್ಡಿ. ಪತಿ ಹಾಗೂ ಮಕ್ಕಳನ್ನು ಬಿಟ್ಟು ಬರಬೇಕು ಮದುವೆಯಾಗುತ್ತೆನೆಂದು ನಂಬಿಸಿದ್ದ. ಆತನ ಮಾತು ಕೇಳಿ ಮನೆಯನ್ನು ಬಿಟ್ಟು ಬಂದರೆ, ಮೋಸ ಮಾಡಿದ್ದಾನೆ. ಮೋಸ ಮಾಡಿದ ಪ್ರಕಾಶರೆಡ್ಡಿ ವಿರುದ್ಧ ಕ್ರಮಕೈಗೊಳ್ಳಬೇಕು, ಮದುವೆ ಮಾಡಿಸಿ ನ್ಯಾಯ ಒದಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಬಳಿ ಮಹಿಳೆ ನೋವು ತೋಡಿಕೊಂಡಿದ್ದಾರೆ.
