Asianet Suvarna News Asianet Suvarna News

ಕೊರೋನಾ ತೊಲಗುವವರೆಗೂ ಬರಿಗಾಲಲ್ಲಿ ನಡೀತಾರಂತೆ ಬಸಮ್ಮ..!

ಇಲ್ಲೊಬ್ಬರು ಕೂಲಿ ಕಾರ್ಮಿಕ ಮಹಿಳೆ ಕೊರೋನಾ ಸೋಂಕು ದೇಶ ಬಿಟ್ಟೋಡುವ ತನಕ ಬರಿಗಾಲಲ್ಲಿ ನಡೆಯುವ ಹರಕೆ ಹೊತ್ತಿದ್ದಾರೆ. ಅಲ್ಲದೆ, ಶುಕ್ರವಾರ ದಿನಪೂರ್ತಿ ಉಪವಾಸದ ಹರಕೆಯನ್ನು ಕೂಡ ತುಳುನಾಡಿನ ದೈವದ ಎದುರು ಹೊತ್ತಿದ್ದಾರೆ.

 

Woman from mamngalore decides to walk bare foots till corona cured
Author
Bangalore, First Published May 2, 2020, 7:53 AM IST

ಮಂಗಳೂರು(ಮೇ.02): ಇಲ್ಲೊಬ್ಬರು ಕೂಲಿ ಕಾರ್ಮಿಕ ಮಹಿಳೆ ಕೊರೋನಾ ಸೋಂಕು ದೇಶ ಬಿಟ್ಟೋಡುವ ತನಕ ಬರಿಗಾಲಲ್ಲಿ ನಡೆಯುವ ಹರಕೆ ಹೊತ್ತಿದ್ದಾರೆ. ಅಲ್ಲದೆ, ಶುಕ್ರವಾರ ದಿನಪೂರ್ತಿ ಉಪವಾಸದ ಹರಕೆಯನ್ನು ಕೂಡ ತುಳುನಾಡಿನ ದೈವದ ಎದುರು ಹೊತ್ತಿದ್ದಾರೆ. ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿರುವ, ಬಾಗಲಕೋಟೆ ಮೂಲದ ಬಸಮ್ಮ ಈ ವಿಶಿಷ್ಟಹರಕೆ ಹೊತ್ತವರು.

ಬಸಮ್ಮ 3 ವರ್ಷಗಳ ಹಿಂದೆ ಊರು ಬಿಟ್ಟು ಪತಿಯೊಂದಿಗೆ ಮಂಗಳೂರಿಗೆ ಬಂದು ಕೂಲಿ ಮಾಡಿಕೊಂಡಿದ್ದರು. ಮದ್ಯ ವ್ಯಸನಿಯಾಗಿದ್ದ ಪತಿ ಮಕ್ಕಳು ಚಿಕ್ಕವರಿರುವಾಗಲೇ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿದ್ದ ಬಸಮ್ಮ ಇದ್ದ ಕೆಲಸವನ್ನೂ ಕಳೆದುಕೊಂಡರು.

ಮಂಗಳೂರಿನ ವಿವಿಧೆಡೆ ಗಾಳಿ-ಮಳೆ, ಅಪಾರ ಹಾನಿ

ಆಗ ತಾನು ಬಾಡಿಗೆ ಮನೆಯಲ್ಲಿದ್ದ ಮಂಗಳೂರಿನ ಕೂಳೂರು ಸಮೀಪದ ಗುಡ್ಡೆಯಂಗಡಿಯಲ್ಲಿರುವ ಕಲ್ಲುರ್ಟಿ ದೈವದ ಮೊರೆಹೋಗಿದ್ದರು. ಪವಾಡವೆಂಬಂತೆ ಮರುದಿನವೇ ಕೆಲಸಕ್ಕೆ ಆಗಮಿಸುವಂತೆ ಕರೆ ಬಂದಿತ್ತು.

ಆ ಬಳಿಕ ತನಗೆ ಏನೇ ಸಂಕಷ್ಟಬಂದೊದಗಿದರೂ ಇದೇ ಕಲ್ಲುರ್ಟಿ ದೈವಕ್ಕೆ ಹರಕೆ ಹೇಳುವ ಬಸಮ್ಮ, ಇದೀಗ ಕೊರೋನಾ ಸಂಕಷ್ಟಕಳೆಯಲು ಕಲ್ಲುರ್ಟಿ ದೈವದ ಹೆಸರಿನಲ್ಲಿಯೇ ಹರಕೆ ಹೊತ್ತಿದ್ದಾರೆ.

ಲಾಕ್‌ಡೌನ್‌ ಮಧ್ಯೆ ವೇತನ ಏರಿಕೆ: ಡಿಪ್ಲೋಮಾ ಕಾಲೇಜು ಬೋಧಕರಿಂದಲೇ ಅಸಮಾಧಾನ!

ತನ್ನ ಎಲ್ಲ ಸಂಕಷ್ಟವನ್ನು ಪರಿಹರಿಸಿರುವ ದೈವವೇ ಇದೀಗ ಕೊರೋನಾವನ್ನೂ ಮಣಿಸಲಿದೆ ಎನ್ನುತ್ತಾರೆ ಬಸಮ್ಮ. ಶುಕ್ರವಾರ ಪೂರ್ತಿ ಉಪವಾಸದಿಂದಿರುವ ಹರಕೆ ಹೊತ್ತಿದ್ದೇನೆ. ಸೋಂಕು ಪೂರ್ತಿ ಹೋಗುವವರೆಗೂ ಈ ಹರಕೆಯನ್ನು ನಿರಂತರವಾಗಿ ಪಾಲಿಸುತ್ತೇನೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios