Asianet Suvarna News Asianet Suvarna News

ಹಾವೇರಿ ಜಿಲ್ಲಾದ್ಯಂತ ವರುಣನ ಅಬ್ಬರ: ಸಿಡಿಲಿಗೆ ಮಹಿಳೆ ಸಾವು, 7 ಜನರಿಗೆ ಗಾಯ

*  ಏಕಾಏಕಿಯಾಗಿ ಗುಡುಗು ಸಹಿತ ಮಳೆ 
*  ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟ ಕವಿತಾ 
*  ಗಾಯಾಳುಗಳಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ 
 

Woman Dies Due to Lightning strikes in Haveri grg
Author
Bengaluru, First Published Jun 8, 2022, 8:26 AM IST

ಹಾವೇರಿ(ಜೂ.08): ಜಿಲ್ಲೆಯ ವಿವಿಧೆಡೆ ಮಂಗಳವಾರ ಗುಡುಗು, ಮಿಂಚಿನ ಆರ್ಭಟದೊಂದಿಗೆ ಮಳೆಯಾಗಿದ್ದು, ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟು, 7 ಜನರು ಗಾಯಗೊಂಡಿರುವ ಘಟನೆ ರಟ್ಟೀಹಳ್ಳಿಯಲ್ಲಿ ಸಂಭವಿಸಿದೆ. ರಟ್ಟೀಹಳ್ಳಿಯ ಕವಿತಾ ರಂಗಪ್ಪ ಮೂಲಿಮನಿ (30) ಮೃತ ಮಹಿಳೆ.

ಸಂಜೆ 4 ಗಂಟೆ ಸುಮಾರಿಗೆ ಏಕಾಏಕಿಯಾಗಿ ಗುಡುಗು ಸಹಿತ ಮಳೆ ಆರಂಭವಾದಾಗ ರಕ್ಷಣೆಗೆಂದು ಮರದ ಕೆಳಗೆ ಕೂತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ರಟ್ಟೀಹಳ್ಳಿ ಯುಟಿಪಿ ಕಚೇರಿ ಬಳಿ ಹೊಲವೊಂದರಲ್ಲಿ ಬಿತ್ತನೆಗೆ ಹೋಗಿದ್ದ ಮಾರುತಿ ಸುಣಗಾರ (45), ರವಿಂದ್ರಪ್ಪ ಪರಸಪ್ಪನವರ(65), ಸುಧಾ(60), ಸಾಕಮ್ಮ ಸುಣಗಾರ(45), ರತ್ನಾ(34), ಶಶಿಕಲಾ ಸುಣಗಾರ (35), ಜುಬೇದಾಬಾನು ನೇಸ್ವಿ(32) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Haveri; ಮದುವೆ ಸಿದ್ಧತೆಯಲ್ಲಿದ್ದ ಮನೆಯಲ್ಲಿ ಬೆಂಕಿ ಅವಘಡ, 4 ಕುರಿಗಳ ಸಾವು

ಹಿರೇಕೆರೂರು ತಾಲೂಕಿನಲ್ಲೂ ಸಾಧಾರಣ ಮಳೆಯಾಗಿದೆ. ಬ್ಯಾಡಗಿ, ಹಾನಗಲ್ಲ, ರಾಣಿಬೆನ್ನೂರು ತಾಲೂಕಿನ ಕೆಲವು ಕಡೆ ಕೆಲಕಾಲ ತುಂತುರ ಮಳೆಯಾಗಿರುವ ಕುರಿತು ವರದಿಯಾಗಿದೆ.

4 ಲಕ್ಷ ಪರಿಹಾರ:

ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟ ಕವಿತಾ ರಂಗಪ್ಪ ಪರಸಪ್ಪನವರ ಕುಟುಂಬಕ್ಕೆ .4 ಲಕ್ಷ ಪರಿಹಾರ ನೀಡುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ ಸೂಚನೆ ನೀಡಿದ್ದಾರೆ ಎಂದು ತಹಸೀಲ್ದಾರ್‌ ಅರುಣಕುಮಾರ ಕಾರ್ಗಿ ಹೇಳಿದರು.

ಈ ಕುರಿತು ಮಾತನಾಡಿದ ಅವರು, ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ವೇಳೆ ಈ ದುರ್ಘಟನೆ ಜರುಗಿದ್ದು, ಓರ್ವ ಮಹಿಳೆ ಮೃತಪಟ್ಟು 6ಜನ ಗಾಯಗೊಂಡಿದ್ದು, ಗಾಯಾಳುಗಳ ಗಾಯದ ಪರಿಣಾಮ ಆಧರಿ ಅವರಿಗೂ ಪರಿಹಾರ ನೀಡಲು ಸಚಿವರು ಸೂಚಿಸಿರುವುದಾಗಿ ತಿಳಿಸಿದರು.
 

Follow Us:
Download App:
  • android
  • ios