Asianet Suvarna News Asianet Suvarna News

Udupi ಬರಗಾಲದಲ್ಲೂ ಎಂದೂ ಬತ್ತದ ಕೆರೆಯ ವಿಸ್ಮಯ!

  • ಉಡುಪಿಯಲ್ಲಿದೆ ಎಂದೂ ಬತ್ತದ ದೇವಕೆರೆ
  • ಹರಿಹರ ತೀರ್ಥವೆಂಬ ಬೇಸಗೆಯ ಚಿಲುಮೆ!
  • ಕೀಳಿಂಜೆಯ ಜನರಿಗೆ ಇದು ಪ್ರಕೃತಿಕೊಟ್ಟ ವರ
  • ಬರಗಾಲದಲ್ಲೂ ನೀರು ಬತ್ತದೆ ವಿಸ್ಮಯ!
Udupi Hariharan teertha water will not be dried even if it is a Drought gow
Author
Bengaluru, First Published May 3, 2022, 5:21 PM IST

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಮೇ.3): ನೀರಿಲ್ಲ, ನೀರಿಲ್ಲ! ಕಡು ಬೇಸಿಗೆ ಬಂದರೆ ಎಲ್ಲಿಗೆ ಹೋದ್ರೂ ನೀರಿಲ್ಲ. ಕರಾವಳಿಯಲ್ಲಿ (costal) ಮಳೆಯೂ ಕರುಣೆ ತೋರುತ್ತಿಲ್ಲ. ಕಳೆದ ವರ್ಷದ ಎಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ಮಳೆಯ (Rain) ಪ್ರಮಾಣ ಸಂಪೂರ್ಣ .ಆದ್ರೆ ಪವಾಡವೋ ಎಂಬಂತೆ ಕೀಳಿಂಜೆ ಗ್ರಾಮದ ಹರಿಹರ ತೀರ್ಥ (Hari Hara teertha) ಈಗಲೂ ತುಂಬಿ ತುಳುಕುತ್ತಿದೆ. ನಮ್ಮ ಪ್ರಾಚೀನರು ಸಾಕಷ್ಟು ವೈಜ್ಞಾನಿಕ ಚಿಂತನೆ ನಡೆಸಿ ದೇವಾಲಯಗಳನ್ನು ಕಟ್ಟುತ್ತಿದ್ದರು ಅನ್ನೋದಕ್ಕೆ ಈ ಕ್ಷೇತ್ರವೇ ಸಾಕ್ಷಿ.

ತನ್ನನ್ನು ರಕ್ಷಿಸಿದವರಿಗೆ ಪ್ರಕೃತಿ ಎಂದೂ ಮೋಸ ಮಾಡೋಲ್ಲ ಅನ್ನೋದಕ್ಕೆ ಇಲ್ಲಿದೆ ನಿದರ್ಶನ. ಮರುಭೂಮಿಯಲ್ಲಿ ಓಯಸೀಸ್ ನಂತಿರುವ ಈ ನೀರಿನ ಸೆಲೆಯನ್ನು ನೋಡಿ ಎಲ್ಲರೂ ಅಚ್ಚರಿ ಪಡಬೇಕು. ಶುಭ್ರ ಸ್ಪಟಿಕದಂತಹಾ ನೀರು, ಬಾಯಿಗಿಟ್ಟರೆ ಕಬ್ಬಿನ ಹಾಲು ಕುಡಿದಷ್ಟು ಖುಷಿ! ಕಡು ಬೇಸಗೆಯಲ್ಲಿ ಈ ನೀರು ನಿಜಕ್ಕೂ ಅಮೃತ ಸಮಾನ!

Vijayapura Basava Jayanti 2022 ಜನ್ಮಸ್ಥಳದಲ್ಲಿ ಸರ್ಕಾರದಿಂದ ಕಾಟಾಚಾರದ ಬಸವ ಜಯಂತಿ!

ಉಡುಪಿಯ (Udupi) ಮಣಿಪಾಲಕ್ಕೆ (Manipal) ಹೊಂದಿಕೊಂಡಿರುವ ಈ ಕೆರೆಯು ಬತ್ತಿರೋದ್ದನ್ನು ಯಾರೂ ಕಂಡಿಲ್ಲ. ಉಡುಪಿ ಜಿಲ್ಲೆಯ ಕೀಳಿಂಜೆ ಎಂಬ ಗ್ರಾಮದಲ್ಲಿ ಈ ದೇವರ ಕೊಳ ಇದೆ. ಕೀಳಿಂಜೆಯಲ್ಲಿರುವ ಈ ಪುರಾತನ ದೇವಸ್ಥಾನದಲ್ಲಿ ಹರಿ ಮತ್ತು ಹರರ ಆರಾಧನೆ ನಡೆಯುತ್ತೆ. ಅದಕ್ಕೂ ಮುಖ್ಯವಾಗಿ ಮರ ಗಿಡಗಳು, ಹಸಿರು ರಾಶಿ, ಪ್ರಾಣಿ ಪಕ್ಷಿಗಳಿಗೆ ಈ ಭಾಗದಲ್ಲಿ ಯಾವುದೇ ಹಾನಿ ಮಾಡಿಲ್ಲ. ಉಡುಪಿ-ಮಣಿಪಾಲದಲ್ಲಿ ನೀರೆಲ್ಲಾ ಬತ್ತಿಹೋಗಿ ಬರಗಾಲ ಬಂದರೂ, ಪಕ್ಕದಲ್ಲೇ ಇರುವ ಕೀಳಿಂಜೆ ಕೆರೆಯಲ್ಲಿ ಮಾತ್ರ ನಿರಂತರ ನೀರು ಒಸರುತ್ತಿದೆ.

ಕೀಳಿಂಜೆಯ ಬೆಟ್ಟ ಪ್ರದೇಶದಲ್ಲಿ ಸಾಕಷ್ಟು ಮರಗಳು ಇನ್ನೂ ಹಸನಾಗಿದೆ. ಈ ಮರಗಳು ಹಿಡಿದಿಟ್ಟ ನೀರು ಸೆಖೆಗಾಲದಲ್ಲಿ ಅಂತರ್ಜಲವಾಗಿ ಚಿಮ್ಮುತ್ತಿದೆ. ಬೆಟ್ಟದಿಂದ ಪುಟ್ಟ ಕೊಳ್ಳಕ್ಕೆ ಹರಿದು, ಅಲ್ಲಿಂದ ಮುಂದೆ ನಾಗ ಸನ್ನಿಧಿಯಲ್ಲಿರುವ ಕೆರೆತುಂಬಿ, ಮುಂದೆ ಊರ ಜನರು ಬಳಸುವ ದೊಡ್ಡ ಕೆರೆಗೆ ಇಲ್ಲಿನ ನೀರು ಹರಿದುಹೋಗುತ್ತೆ. ಕಡುಬೇಸಗೆಯಲ್ಲೂ ಈ ತುಂಬಿದ ಕೊಳ ನೋಡುವುದು ಕಣ್ಣಿಗೆ ಹಬ್ಬವೇ ಸರಿ. ಅಂತಯೇ ಈ ಕ್ಷೇತ್ರದ ಕಾರಣಿಕದ ಬಗೆಗೂ ಜನರಿಗೆ ವಿಶೇಷವಾದ ಶೃದ್ಧೆ ಇದೆ.

ಕಲ್ಯಾಣ ಕರ್ನಾಟಕದಲ್ಲಿ ಎರಡನೇ Forensic Science Laboratory ಕೇಂದ್ರ ಸ್ಥಾಪನೆ

ಈ ನೀರು ಜನಬಳಕೆಗೆ ಉಪಯೋಗವಾಗಬೇಕು, ಸರ್ಕಾರ ಮನಸ್ಸು ಮಾಡಿದರೆ ಈ ಅಂತರ್ಜಲವನ್ನು ಸಂಗ್ರಹಿಸಿ ಜನರ ನೀರಿನ ಬರ ನೀಗಿಸಬಹುದು.ಈ ದೇವಸ್ಥಾನಕ್ಕೆ ಮಣಿಪಾಲ ಶ್ರೀಂಬ್ರ. ಹೊಸ ಸೇತುವೆ ಮೂಲಕವೂ ಬರಬಹುದು, ಕೊಳಲಗಿರಿ ಹಾವಂಜೆ ಕೀಳಂಜೆಯ ಮೂಲಕವೂ ಹರಿಹರ ಸನ್ನಿಧಿಯನ್ನು ಸಂಪರ್ಕಿಸಲು ಮೂರು ಕೋಟಿ 40 ಲಕ್ಷ ವೆಚ್ಚದಲ್ಲಿ ನೂತನ ರಿಂಗ್ ರಸ್ತೆ ರಚನೆಯಾಗಿದ್ದು, ಈ ರಸ್ತೆಯಲ್ಲಿ ಸಂಚರಿಸಿ ಈ ದೇವಸ್ಥಾನವನ್ನು ನೋಡಬಹುದು.ಒಟ್ಟಿನಲ್ಲಿ 365 ದಿನವೂ ನಿತ್ಯ ನೀರು ಹರಿಯುವುದು,, ಪ್ರಕೃತಿ ಪ್ರಿಯರಲ್ಲಿ ಸಂತಸ ಮೂಡಿದೆ,

Follow Us:
Download App:
  • android
  • ios