Asianet Suvarna News Asianet Suvarna News

ಮದುವೆ ಆಮಂತ್ರಣ ಕೊಡಲು ಹೋದವರು ತಂಗಭದ್ರೆ ನದಿ ಪಾಲಾದ್ರು...!

ತೆಪ್ಪ ಮುಗುಚಿ ಬಿದ್ದು  ಇಬ್ಬರು ಸಾವನ್ನಪ್ಪಿದ್ದಾರೆ. ಮದುವೆ ಆಮಂತ್ರಣ ಕೊಡಲು ಹೋಗುವಾಗ ದುರ್ಘಟನೆ ಸಂಭವಿಸಿದೆ,

two youth drown in tungabhadra River Near hospet
Author
Bengaluru, First Published Jun 7, 2020, 7:54 PM IST

ಬಳ್ಳಾರಿ, (ಜೂನ್.07):  ತೆಪ್ಪ ಮುಗುಚಿ ಬಿದ್ದು ಇಬ್ಬರು ಯುವಕರು ಜಲಸಮಾಧಿಯಾಗಿರುವ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಸಂಭವಿಸಿದೆ.

 ಹಗರಿಬೊಮ್ಮನಹಳ್ಳಿ ತಾಲೂಕು ಸೀಗನಹಳ್ಳಿ ಗ್ರಾಮದ ಬಳಿಯ ತುಂಗಭದ್ರ ನದಿಯಲ್ಲಿ ಇಂದು (ಭಾನುವಾರ) ತೆಪ್ಪ ಮುಗುಚಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಫಕ್ರುದ್ದೀನ್(18) ಮತ್ತು ಯಮುನೂರಪ್ಪ(28) ಮೃತ ದುರ್ದೈವಿಗಳು.

ಯವ ನಟ ಚಿರಂಜೀವಿ ಸರ್ಜಾ ನಿಧನ, ಕೋರ್ಟ್ ವಿಚಾರಣೆ ವೇಳೆ ವೃದ್ಧನ ಮರಣ; ಜೂ.7ರ ಟಾಪ್ 10 ಸುದ್ದಿ! 

ಸಂಬಂಧಿಗಳಿಗೆ ಮದುವೆ ಆಮಂತ್ರಣ ನೀಡಲು ಕೊಪ್ಪಳ ಜಿಲ್ಲೆಯ ಗ್ರಾಮವೊಂದಕ್ಕೆ ತೆರಳುತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತೆಪ್ಪದಲ್ಲಿ ಬೈಕ್ ಇದ್ದ ಕಾರಣ ಭಾರ ಹೆಚ್ಚಾಗಿ ಗಾಳಿಗೆ ಮೊಗಚಿದೆ ಎನ್ನಲಾಗಿದೆ. ಈ ಬಗ್ಗೆ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios