ಲಾರಿ-ಬೈಕ್ ಮಧ್ಯೆ ಅಪಘಾತ| ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದ ದುರ್ಘಟನೆ| ಮೃತರು ವೆಸ್ಟ್ಕೋಸ್ಟ್ಪೇಪರ್ಮಿಲ್ಲಿನ ಕಾರ್ಮಿಕರು| ಘಟನೆ ಬಳಿಕ ಲಾರಿ ಚಾಲಕ ಪರಾರಿ|
ದಾಂಡೇಲಿ(ಡಿ.18): ದಾಂಡೇಲಿಯಿಂದ ಬೆಳಗಾವಿಗೆ ಹೋಗುವ ಮಾರ್ಗದ ತಾವರಗಟ್ಟಿ ಬಳಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಬುಧವಾರ ನಡೆದಿದೆ.
Add Asianetnews Kannada as a Preferred Source

ಮೃತರನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾಸ್ತಿಹೊಳೆ ಗ್ರಾಮದ ನಿರ್ವಹಣೆಪ್ಪ ಶಿವಪ್ಪ ಕಮತಿ (26) ಹಿಂಬದಿ ಸವಾರ ಚಂದ್ರಶೇಖರ ಶಿವರುದ್ರಪ್ಪ ಕಮತಿ (40) ಎಂದು ಗುರುತಿಸಲಾಗಿದೆ.
ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಕಾರ್ಯಕರ್ತರು
ಮೃತರು ವೆಸ್ಟ್ ಕೋಸ್ಟ್ ಪೇಪರ್ಮಿಲ್ಲಿನ ಕಾರ್ಮಿಕರಾಗಿದ್ದರು. ಲಾರಿ ಚಾಲಕ ಪರಾರಿಯಾಗಿದ್ದು, ದಾಂಡೇಲಿಯ ಪೊಲೀಸ್ಠಾಣೆಯ ಕ್ರೈಂ ವಿಭಾಗದ ಪಿಎಸ್ಐ ಸತ್ಯಪ್ಪ ಹುಕ್ಕೇರಿ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರೆಸಿದ್ದಾರೆ.
