Asianet Suvarna News Asianet Suvarna News

'ಧಾರ​ವಾ​ಡ-ಬೆಂಗ್ಳೂರು ಪ್ರಯಾಣ ಅವಧಿ ಐದು ಗಂಟೆ ಮಾತ್ರ'

*    ಧಾರ​ವಾ​ಡ​ದಿಂದ ಬೆಂಗ​ಳೂ​ರಿಗೆ ಐದು ಗಂಟೆ ಚಲಿ​ಸುವ ಒಂದೇ ಮಾತರಂ ರೈಲು
*   ಬಿಜೆಪಿ ಸರ್ಕಾ​ರದಲ್ಲಿ ಪ್ರಸ್ತುತ ದಿನಕ್ಕೆ 37 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
*   ಅಂತಿಮ ಹಂತಕ್ಕೆ ಬಂದ ಹುಬ್ಬ​ಳ್ಳಿ-ಬೆಂಗ​ಳೂರು ರೈಲ್ವೆ ದ್ವಿಮಾರ್ಗ ಕಾಮ​ಗಾರಿ
 

Travel Period Only Five Hours Between Dharwad to Bengaluru From 2023  grg
Author
Bengaluru, First Published Sep 27, 2021, 10:20 AM IST

ಧಾರ​ವಾಡ(ಸೆ.27):  ಧಾರ​ವಾ​ಡ-ಬೆಂಗ​ಳೂರು(Dharwad-Bengaluru) ಮಧ್ಯೆ ಪ್ರಸ್ತುತ ನಡೆ​ಯು​ತ್ತಿ​ರುವ ಅಭಿ​ವೃದ್ಧಿ ಕಾಮ​ಗಾ​ರಿ​ಗಳ ಬಳಿಕ ಬರೀ ಐದು ಗಂಟೆ​ಗ​ಳಲ್ಲಿ ಚಲಿ​ಸಲಿರುವ ಒಂದೇ ಮಾತರಂ ಹೆಸ​ರಿನ ಹೊಸ ರೈಲು ಬಿಡು​ವು​ದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಇಲ್ಲಿ ಭರ​ವಸೆ ನೀಡಿ​ದ್ದಾರೆ. 

13.79 ಕೋಟಿ ವೆಚ್ಚ​ದಲ್ಲಿ ಕಲ್ಯಾಣ ನಗ​ರ​ದಲ್ಲಿ ಲೆವಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 297ರ ರಸ್ತೆ ಮೇಲ್ಸೇ​ತುವೆ ನಿರ್ಮಾ​ಣ ಕಾಮ​ಗಾ​ರಿಗೆ ಭೂಮಿಪೂಜೆ ಸಲ್ಲಿ​ಸಿ ಮಾತ​ನಾ​ಡಿ​ದ ಅವರು, ಹುಬ್ಬ​ಳ್ಳಿ-ಬೆಂಗ​ಳೂರು ರೈಲ್ವೆ ದ್ವಿಮಾರ್ಗ (ಡಬ​ಲಿಂಗ್‌) ಕಾಮ​ಗಾರಿ ಹಾಗೂ ವಿದ್ಯು​ದೀ​ಕ​ರಣ ಅಂತಿಮ ಹಂತಕ್ಕೆ ಬಂದಿದ್ದು, ಇನ್ನೆ​ರೆಡು ವರ್ಷ​ಗ​ಳಲ್ಲಿ ಧಾರ​ವಾಡ ಹುಬ್ಬ​ಳ್ಳಿ​ಯಿಂದ ಬೆಂಗ​ಳೂ​ರಿಗೆ ರೈಲು ಮಾರ್ಗದ ಮೂಲಕ ಐದು ಗಂಟೆ​ಗ​ಳಲ್ಲಿ ಪ್ರಯಾ​ಣಿ​ಸ​ಬ​ಹುದು. ಪ್ರಸ್ತುತ ರೈಲ್ವೆ ದ್ವಿಮಾರ್ಗ ಕಾಮ​ಗಾ​ರಿಯು ಚಿಕ್ಕ​ಜಾ​ಜೂರವರೆಗೆ ಆಗಿದ್ದು, 2023ರ ಮಾರ್ಚ್‌ ತಿಂಗ​ಳಲ್ಲಿ ಪೂರ್ಣ​ಗೊ​ಳ್ಳ​ಲಿದೆ. ಅಲ್ಲದೇ, ಪ್ರಸ್ತು​ತ ಧಾರ​ವಾ​ಡ-ಬೆಂಗ​ಳೂರು ರೈಲು ಅರ​ಸೀ​ಕೆರೆ, ಬೀರೂರು ಮೂಲಕ ಹಾಯ್ದು ಹೋಗು​ತ್ತಿದ್ದು, ಅದನ್ನು ಬದ​ಲಿಸಿ ರಾಷ್ಟ್ರೀಯ ಹೆದ್ದಾರಿಗುಂಟ ನೇರ​ವಾಗಿ ತುಮ​ಕೂ​ರು ಮೂಲಕ ಬೆಂಗ​ಳೂ​ರಿಗೆ ಹೋಗ​ಲಿದೆ ಎಂದರು.

ಕಾಂಗ್ರೆಸ್‌(Congress) ಸರ್ಕಾ​ರದ ಅವ​ಧಿ​ಯಲ್ಲಿ ಬರೀ ರೈಲು ಬಿಡು​ವು​ದನ್ನೆ ಮಾಡಿದೆಯೇ ಹೊರತು ಅಭಿ​ವೃದ್ಧಿ ಕಾರ್ಯ ಮಾಡಿಲ್ಲ ಎಂದು ಆರೋ​ಪಿ​ಸಿದ ಸಚಿವ ಜೋಶಿ, ಬರುವ ನಾಲ್ಕು ವರ್ಷ​ಗ​ಳಲ್ಲಿ ರೈಲ್ವೆ ಅಭಿ​ವೃ​ದ್ಧಿ​ಗಾಗಿ 100 ಲಕ್ಷ ಕೋಟಿ ವೆಚ್ಚ ಮಾಡುವ ಗುರಿ​ಯನ್ನು ಹೊಂದ​ಲಾ​ಗಿದೆ. ಜತೆಗೆ ಕಾಂಗ್ರೆಸ್‌ ಸರ್ಕಾರ ದಿನಕ್ಕೆ 11 ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದು, ಕೇಂದ್ರ ಬಿಜೆಪಿ(BJP) ಸರ್ಕಾ​ರವು ಪ್ರಸ್ತುತ ದಿನಕ್ಕೆ 37 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡು​ತ್ತಿದೆ ಎಂದರು.

ಭಾರತ್‌ ಬಂದ್‌ ಕರೆ ನೀಡಿದವರಲ್ಲಿ ರೈತ ಮುಖಂಡರಿಲ್ಲ: ಕೇಂದ್ರ ಸಚಿವ ಜೋಶಿ

ಧಾರ​ವಾಡ ರೈಲು ನಿಲ್ದಾಣ ಬಗ್ಗೆ ಮಾತ​ನಾ​ಡಿದ ಸಚಿವ ಜೋಶಿ, 20 ಕೋಟಿ ವೆಚ್ಚ​ದಲ್ಲಿ ಧಾರ​ವಾಡ ಸಂಸ್ಕೃತಿ ಬಿಂಬಿ​ಸುವ, ಜ್ಞಾನ​ಪೀಠ ಪ್ರಶಸ್ತಿ ಪುರ​ಸ್ಕೃತರ, ಸಂಗೀತಗಾ​ರರ ಭಾವ​ಚಿ​ತ್ರ​ವುಳ್ಳ ಅಭಿ​ವೃದ್ಧಿ ಕಾರ್ಯ ಅದ್ಭು​ತ​ವಾ​ಗಿದೆ. ಸದ್ಯ​ದ​ಲ್ಲಿಯೇ ಪಾದ​ಚಾ​ರಿ​ಗಳ ಮೇಲ್ಸೇ​ತುವೆ ಸಹ ಮಾಡ​ಲಾ​ಗು​ವುದು ಎಂಬ ಭರ​ವಸೆ ನೀಡಿ​ದರು.

ಶಾಸಕ ಅರ​ವಿಂದ ಬೆಲ್ಲದ ಮಾತ​ನಾಡಿ, ಬಹಳ ವರ್ಷ​ಗಳ ನಂತ​ರ​ದಲ್ಲಿ ಕಲ್ಯಾ​ಣ​ನ​ಗರ, ಶ್ರೀರಾ​ಮ​ನ​ಗರ ಮತ್ತು ಕವಿ​ವಿಗೆ ಹೋಗುವ ಜನರ ಬೇಡಿಕೆ ಈಡೇ​ರಿದೆ. 2022ರ ಡಿಸೆಂಬರ್‌ ಒಳಗೆ ಈ ಮೇಲ್ಸೇ​ತುವೆ ಕಾಮ​ಗಾರಿ ಮುಕ್ತಾ​ಯ​ವಾ​ಗ​ಲಿದೆ ಎಂದರು.

ರೈಲ್ವೆ ಇಲಾಖೆ ಪ್ರಧಾನ ವ್ಯವ​ಸ್ಥಾ​ಪಕ ಸಂಜೀವ ಕಿಶೋರ ಮಾತ​ನಾಡಿ, ಮಾನವರಹಿತ ರೈಲ್ವೆ ಕ್ರಾಸಿಂಗ್‌ ವ್ಯವ​ಸ್ಥೆ​ಯನ್ನು ಸಂಪೂ​ರ್ಣ​ವಾಗಿ ತೆಗೆ​ದು​ಹಾ​ಕುವ ಯೋಜನೆ ಹೊಂದಿ​ದ್ದೇವೆ. ರಸ್ತೆ ಮೇಲ್ಸೇ​ತುವೆ ಹಾಗೂ ಕೆಳ ಸೇತುವೆಗಳನ್ನು ನಿರ್ಮಿ​ಸ​ಲಾ​ಗು​ತ್ತಿದೆ. ಕಳೆದ ಎರಡು ವರ್ಷ​ಗ​ಳಲ್ಲಿ 117 ಕೆಳ​ಸೇ​ತುವೆ ಹಾಗೂ 30 ರಸ್ತೆ ಮೇಲ್ಸೇ​ತುವೆ ನಿರ್ಮಿ​ಸ​ಲಾ​ಗಿದೆ. ಈ ವರ್ಷ 16 ಮೇಲ್ಸೇ​ತುವೆ ಹಾಗೂ 56 ಕೆಳ​ಸೇ​ತುವೆ ನಿರ್ಮಿ​ಸ​ಲಾ​ಗು​ತ್ತಿದೆ. ಕಳೆದ ಒಂದು ವರ್ಷ​ದಲ್ಲಿ ನೈಋುತ್ಯ ರೈಲ್ವೆ 176 ಕಿ.ಮೀ. ದ್ವಿಮಾರ್ಗ ಕಾಮ​ಗಾರಿ ಹಾಗೂ 521 ಕಿ.ಮೀ. ವಿದ್ಯು​ದೀ​ಕ​ರಣ ಕಾಮ​ಗಾರಿ ಮಾಡಿದೆ. ಪ್ರಸಕ್ತ ವರ್ಷಕ್ಕೆ 270 ಕಿ.ಮೀ. ರೈಲು ದ್ವಿಮಾರ್ಗ ಹಾಗೂ 720 ವಿದ್ಯು​ದ್ಯೀ​ಕ​ರಣದ ಗುರಿ ಹೊಂದಿದೆ ಎಂಬ ಮಾಹಿತಿ ನೀಡಿ​ದ​ರು.
ವಿಧಾನ ಪರಿ​ಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಶಾಸಕ ಅಮೃತ ದೇಸಾಯಿ, ಪಾಲಿಕೆ ಸದಸ್ಯರಾದ ಶಿವು ಹಿರೇ​ಮಠ, ಜ್ಯೋತಿ ಪಾಟೀಲ, ಕವಿತಾ ಕಬ್ಬೇರ ಹಾಗೂ ಗುತ್ತಿಗೆದಾರ ಅರ​ವಿಂದ ಮಾಳ​ಖೇಡ ಇದ್ದರು.
 

Follow Us:
Download App:
  • android
  • ios