ಮೈಸೂರು, ಮಂಡ್ಯ ಭಾಗದಲ್ಲಿ ಚಿರತೆ, ಹುಲಿಗಳ ಹಾವಳಿ ಹೆಚ್ಚಿದ್ದು, ಇದೀಗ ಹುಣಸೂರಿನಲ್ಲಿ ಎರಡು ಹುಲಿಗಳು ಕದಾಡಿದ್ದು, ಒಂದು ಹೆಣ್ಣುಹುಲಿ ಮೃತಪಟ್ಟಿದೆ.
ಮೈಸೂರು(ಜ.28): ಮೈಸೂರು, ಮಂಡ್ಯ ಭಾಗದಲ್ಲಿ ಚಿರತೆ, ಹುಲಿಗಳ ಹಾವಳಿ ಹೆಚ್ಚಿದ್ದು, ಇದೀಗ ಹುಣಸೂರಿನಲ್ಲಿ ಎರಡು ಹುಲಿಗಳು ಕದಾಡಿದ್ದು, ಒಂದು ಹೆಣ್ಣುಹುಲಿ ಮೃತಪಟ್ಟಿದೆ.
Add Asianetnews Kannada as a Preferred Source

ಹುಣಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಹುಲಿಗಳ ನಡುವಿನ ಕಾದಾಟದಲ್ಲಿ ಹೆಣ್ಣು ಹುಲಿಯೊಂದು ಮೃತಪಟ್ಟಿದೆ. ಉದ್ಯಾನದ ನಾಗರಹೊಳೆ ಬೀಟ್ನ ಚಿಕ್ಕಪಾಲ ಬಳಿ ಘಟನೆ ನಡೆದಿದ್ದು, 6 ರಿಂದ 7 ವರ್ಷದ ಹೆಣ್ಣು ಹುಲಿ ಮೃತಪಟ್ಟಿದೆ. ಹುಲಿಯ ಕುತ್ತಿಗೆಯಲ್ಲಿ ಬಲವಾದ ಗಾಯಗಳಾಗಿದ್ದು, ಹುಲಿಗಳ ನಡುವೆ ಗಡಿಗಾಗಿ ಇನ್ನಿತರ ಕಾರಣಗಳಿಗೆ ಇಂತಹ ಕಾದಾಟ ನಡೆದಿರಬಹುದು ಎನ್ನಲಾಗಿದೆ.
Video: ಹುಲಿ ಯಾಮಾರಿಸಲು ಸತ್ತವನಂತೆ ನಾಟಕ, ಸಾವಿನ ದವಡೆಯಿಂದ ಪಾರಾದ!
ಘಟನೆ ಸಂಭವಿಸಿ ಮೂರು ದಿನಗಳಾಗಿದ್ದು, ಹುಲಿಯ ದೇಹ ಕೊಳೆಯುತ್ತಿದೆ. ಮಾ.17ರಂದು ವನ್ಯಜೀವಿ ಪಶುವೈದ್ಯರೊಂದಿಗೆ ಸ್ಥಳಕ್ಕೆ ತೆರಳಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದೆಂದು ಸಿಎಫ್ ನಾರಾಯಣಸ್ವಾಮಿ ಮಾಹಿತಿ ನೀಡಿದರು.
