* ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆಣೇಗೆರೆಯಲ್ಲಿ ನಡೆದ ಘಟನೆ*  ಕಿರಣ್‌, ರಾಕೇಶ್‌ ಮತ್ತು ದರ್ಶನ್‌ ಮೃತಪಟ್ಟ ದುರ್ದೈವಿಗಳು*  ಆಣೇಗೆರೆ ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು 

ಕಡೂರು(ಜೂ.20): ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಕೆರೆಯ ಉಸುಕಿನಲ್ಲಿ ಸಿಲುಕಿ ಮೃತಪಟ್ಟಿರುವ ದುರ್ಘಟನೆ ತಾಲೂಕಿನ ಆಣೇಗೆರೆಯಲ್ಲಿ ನಿನ್ನೆ(ಭಾನುವಾರ) ಮಧ್ಯಾಹ್ನ ನಡೆದಿದೆ. 

Add Asianetnews Kannada as a Preferred SourcegooglePreferred

ಪಂಚನಹಳ್ಳಿ ಹೋಬಳಿಯ ಬಿಟ್ಟೇನಹಳ್ಳಿ ಗ್ರಾಮದ ಬಸವರಾಜಪ್ಪ ಎಂಬವರ ಪುತ್ರರಾದ ಕಿರಣ್‌ (18), ರಾಕೇಶ್‌ (17) ಮತ್ತು ಬಸವರಾಜು ಎಂಬವರ ಪುತ್ರ ದರ್ಶನ್‌ (16) ಮೃತಪಟ್ಟ ದುರ್ದೈವಿಗಳು. 

ಅಪ್ಪಂದಿರ ದಿನದಂದೇ ದುರಂತ ಅಂತ್ಯಕಂಡ ತಂದೆ-ಮಗ

ಈ ಮೂವರು ವಿದ್ಯಾರ್ಥಿಗಳೂ ಆಣೇಗೆರೆ ಸುತ್ತಮುತ್ತಲಿನ ಮರಗಳಲ್ಲಿ ನೇರಳೆಹಣ್ಣನ್ನು ಕಿತ್ತು ತಿಂದಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆ ವೇಳೆಗೆ ಆಣೇಗೆರೆ ಕೆರೆಗೆ ಈಜಲು ತೆರಳಿದ್ದಾರೆ. ಸುಮಾರು 20 ಅಡಿ ಆಳದ ಕೆರೆಯ ಉಸುಕಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.