ಗೆಳೆಯರಿಗೆ ವಿವಾಹ ಮಹೋತ್ಸವ ಆಮಂತ್ರಣ ಪತ್ರಿಕೆ ಕೊಡುವುದಕ್ಕಾಗಿ ತೆರಳುವ ವೇಳೆ ಅಪಘಾತ| ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದ ಘಟನೆ| ಈ ಸಂಬಂಧ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲು|
ಮಸ್ಕಿ(ಜ.20): ವಿವಾಹ ಆಮಂತ್ರಣ ಪತ್ರಿಕೆ ವಿತರಿಸಲು ವಾಹನದ ಮೇಲೆ ತೆರಳುತ್ತಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರಭಾಗದಲ್ಲಿ ಜರುಗಿದೆ. ತಾಲೂಕಿನ ಅಡವಿಬಾವಿ ಗ್ರಾಮದ ರಜೀಯಾ ಬೇಗಂ(23), ಅರುಣಾಕ್ಷಿ(22) ಹಾಗೂ ವೀರೇಶ(23) ಅಪಘಾತದಲ್ಲಿ ಮೃತಪಟ್ಟವರು.
Add Asianetnews Kannada as a Preferred Source

ರಜೀಯಾ ಬೇಗಂ ಇದೇ ಜ. 24 ರಂದು ಮದುವೆ ನಿಶ್ಚಯಗೊಂಡಿದ್ದು, ಗೆಳೆಯರೆಲ್ಲರಿಗೂ ವಿವಾಹ ಮಹೋತ್ಸವ ಆಮಂತ್ರಣ ಪತ್ರಿಕೆಯನ್ನು ಕೊಡುವುದಕ್ಕಾಗಿ ಉಳಿದ ಸ್ನೇಹಿತರಾದ ಅರುಣಾಕ್ಷಿ, ವಿರೇಶ ಜೊತೆ ಬೈಕ್ ಮೇಲೆ ಹೋಗುತ್ತಿದ್ದರು.
ಲಾರಿ ಹರಿದು 15 ವಲಸೆ ಕಾರ್ಮಿಕರ ಸಾವು!
ಈ ಸಮಯದಲ್ಲಿ ಸವಾರ ವೀರೇಶ ವೇಗವಾಗಿ ಬೈಕ್ನ್ನು ಚಲಾಯಿಸಿ ಹೆದ್ದಾರಿ ಪಕ್ಕದಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ತೀವ್ರವಾಗಿ ಗಾಯಗೊಂಡ ಮೂವರು ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
