Asianet Suvarna News Asianet Suvarna News

ಕೇಂದ್ರ ಸರ್ಕಾರದ ಕ್ರಮ ಖಂಡಿಸುವವರು ದೇಶದ್ರೋಹಿಗಳು: ಕೇಂದ್ರ ಸಚಿವ ಖೂಬಾ

ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆ ಹಾಗೂ ಅವುಗಳ ಅಂಗಸಂಸ್ಥೆಗಳನ್ನು ನಿಷೇಧಿಸಿರುವ ಕ್ರಮವನ್ನು  ಸ್ವಾಗತಿಸಿದ ಕೇಂದ್ರ ಸಚಿವ ಭಗವಂತ ಖೂಬಾ

Those Who Condemn the Action of the Central Government are Traitors Says Bhagwanth Khuba grg
Author
First Published Sep 29, 2022, 9:30 PM IST

ಬೀದರ್‌(ಸೆ.29):  ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆ ಹಾಗೂ ಅವುಗಳ ಅಂಗಸಂಸ್ಥೆಗಳನ್ನು ನಿಷೇಧಿಸಿರುವ ಕ್ರಮವನ್ನು ಕೇಂದ್ರ ಸಚಿವ ಭಗವಂತ ಖೂಬಾ ಸ್ವಾಗತಿಸಿದ್ದಾರೆ ಹಾಗೂ ಕೇಂದ್ರ ಸರ್ಕಾರದ ಈ ಕ್ರಮವನ್ನು ತಿರಸ್ಕರಿಸುವವರು ಹಾಗೂ ಖಂಡಿಸುವವರು ದೇಶದ್ರೋಹಿಗಳಿಗೆ ಸಮವೆಂದು ಸಚಿವರು ಹೇಳಿದರು.

ಈ ಕುರಿತು ಪ್ರಕಟಣೆ ನೀಡಿ, ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳು ಮಾಡಿರುವ ಪಾಪ, ದೇಶದ್ರೋಹ, ಕೋಮು ಸೌಹಾರ್ದತೆ ಹಾಳು ಮಾಡುವ ಕೆಲಸಗಳಿಗೆ ಬ್ರೇಕ್‌ ಹಾಕಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಶ್ಲಾಘಿಸಿದ್ದಾರೆ. ಇದೊಂದು ಅತ್ಯಂತ ಅವಶ್ಯಕವಾಗಿರುವ ನಿರ್ಧಾರವಾಗಿದೆ. ಇವರ ಪುಂಡಾಟಿಕೆಯಿಂದ ಎಷ್ಟೋ ಹಿಂದೂ ಯುವಕರ ಹತ್ಯೆಯಾಗಿವೆ. ಈ ಕ್ರಮದಿಂದ ಆ ಎಲ್ಲಾ ಯುವಕರ ಆತ್ಮಕ್ಕೆ ಶಾಂತಿ ದೊರೆತಿದೆ ಎಂದಿದ್ದಾರೆ.

ಕೇಂದ್ರ ಸಚಿವ ಭಗವಂತ, ಶಾಸಕ ಸಲಗರ ಮಧ್ಯೆ ಗಲಾಟೆ: ಖೂಬಾ ಕಾರು ಜಖಂ

ಈ ಸಂಘಟನೆಗಳು ನಿರುದ್ಯೋಗಿ ಅಮಾಯಕ ಯುವಕರನ್ನ ತನ್ನ ಸಂಘಟನೆಗೆ ಸೇರಿಸಿಕೊಂಡು ಅವರನ್ನು ದೇಶದ್ರೋಹದ ಕೆಲಸಕ್ಕೆ ಬಳಸಿಕೊಳ್ಳುತ್ತಿದೆ ಇದಕ್ಕೆ ಇಂದು ನಮ್ಮ ಸರ್ಕಾರ ಅಂತ್ಯ ಹಾಡಿದೆ. ಈ ಸಂಘಟನೆಗಳಿಗೆ ಮನುಷ್ಯತ್ವದ ಬೆಲೆ ಗೊತ್ತಿರಲಿಲ್ಲ. ಎಷ್ಟೋ ಕುಟುಂಬಗಳು ಕಣ್ಣಿರಲ್ಲಿ ಕೈತೊಳೆಯುತ್ತಿವೆ. ಇಂತಹ ಸಂಘಟನೆಗಳಿಗೆ ಹಿಂದಿನಿಂದಲೂ ಬೆಂಬಲ ನೀಡುತ್ತಿದ್ದದ್ದೂ ಕಾಂಗ್ರೆಸ್‌ ಎಂದು ಆರೋಪಿಸಿದ್ದಾರೆ.

ಈ ಎರಡು ಸಂಘಟನೆಗಳನ್ನು ನಿಷೇಧಿಸಿ, ದೇಶದ ಭದ್ರತೆಗೆ ಧಕ್ಕೆ ಬಂದಲ್ಲಿ ಯಾವುದೇ ಕ್ರಮಕ್ಕೂ ಸಿದ್ದವೆನ್ನುವ ಸಂದೇಶವನ್ನು ಮತ್ತೊಮ್ಮೆ ದೇಶದ ಜನತೆಗೆ ನೀಡಿ, ದೇಶದ ಜನತೆಯಲ್ಲಿ ಧೈರ್ಯ ತುಂಬಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ ಷಾ ಅವರಿಗೆ ಸಚಿವ ಖೂಬಾ ಧನ್ಯವಾದಗಳನ್ನು ತಿಳಿಸಿದ್ದಾರೆ.
 

Follow Us:
Download App:
  • android
  • ios