Asianet Suvarna News Asianet Suvarna News

ರೈಲು ಖಾಸಗಿಕರಿಸುವ ನಡೆ ದೇಶ ವಿರೋಧಿ ಕೆಲಸ : ಸಿಐಟಿಯು

ಜನತೆ ಹಣದಲ್ಲಿ ನಿರ್ಮಿಸಿರುವ ಸಾರ್ವಜನಿಕರ ರೈಲನ್ನು ಖಾಸಗಿಕರಿಸುವ ನಡೆ ದೇಶ ವಿರೋಧಿಯಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಆರೋಪಿಸಿದ್ದಾರೆ.

The move to privatize trains is anti-national: CITU snr
Author
First Published Nov 4, 2023, 8:44 AM IST

 ತುಮಕೂರು: : ಜನತೆ ಹಣದಲ್ಲಿ ನಿರ್ಮಿಸಿರುವ ಸಾರ್ವಜನಿಕರ ರೈಲನ್ನು ಖಾಸಗಿಕರಿಸುವ ನಡೆ ದೇಶ ವಿರೋಧಿಯಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಆರೋಪಿಸಿದ್ದಾರೆ.

ತುಮಕೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಅಯೋಜಿಸಿದ್ದ ರೈಲ್ವೆ ಖಾಸಗಿಕರಣ ವಿರೋಧಿ ಹೋರಾಟ ಉದ್ದೇಶಿಸಿ ಮಾತನಾಡಿದರು.

ಸಾರ್ವಜಿನಿಕ ಉದ್ದಿಮೆಗಳನ್ನು ಮಾರಿ ದೇಶ ಲೂಟಿ ಮಾಡಲಾಗುತ್ತಿರುವುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಖಾಸಗಿಕರಣಕ್ಕೆ ಸಾಮಾಜಿಕ ಬದ್ಧತೆ ಇಲ್ಲ ಎಂದ ಅವರು 70 ವರ್ಷಗಳಲ್ಲಿ ಕಟ್ಟಲಾಗಿರುವ ದೇಶದ ವಿವಿಧ ವಲಯಗಳಲ್ಲಿನ ಅಸ್ತಿಗಳ ಮಾರಾಟ ಮಾಡುವ ಕೇಂದ್ರ ಬಿ.ಜೆ.ಪಿ ಸರ್ಕಾರದ ನಡೆ ಯಾರ ಲಾಭಕ್ಕೆ ಎಂದು ಪ್ರಶ್ನಿಸಿದರು.

ಇದು ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸುವ ನಡೆ ಎಂದರು, ಈ ಜನ ವಿರೋಧಿ ನಡೆಯನ್ನು ಸರ್ಕಾರ ಬದಲಿಸದೆ ಇದ್ದರೆ ಸರ್ಕಾರವನ್ನು ಜನತೆ ಬದಲಿಸಬೇಕು ಎಂದು ಅವರು ಕರೆ ನೀಡಿದರು

ಪ್ರತಿಭಟನೆ ಉದ್ದೇಶಿಸಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಎಸ್.ಡಿ ಪಾರ್ವತಮ್ಮ ಮಾತನಾಡಿ, ರೈಲ್ವೆ ನಿಲ್ದಾಣಕ್ಕೆ ಸೇರುವ ಅಸ್ತಿ ಖಾಸಗಿ ಕಂಪನಿಗಳ ಹಸ್ತಾಂತರಕ್ಕೆ ನೀಡುವ, ಟಿಕೆಟ್ ದರಗಳನ್ನು 43% ದಷ್ಟು ಹೆಚ್ಚಿಸುವ ರೈಲು ಖಾಸಗಿಕರಣದ ನಿಲುಮೆಯು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.

ತುಮಕೂರು ತಾಲೂಕು ಸಂಚಾಲಕ ರಂಗಧಾಮಯ್ಯ ಮಾತನಾಡಿ, ರೈಲ್ವೆಯಲ್ಲಿ 100 % ರಷ್ಟು ಖಾಸಗಿ ಹೂಡಿಕೆಗೆ ಅವಕಾಶ ನೀಡುವ ಕ್ರಮ ಸರಿಯಲ್ಲ ಅಂದರು.

ಪ್ರಾಂತ ರೈತ ಸಂಘದ ಬಿ. ಉಮೇಶ್‌ ಅವರು ಮಾತನಾಡಿ, ಜನರ ಸಾರಿಗೆ ರೈಲನ್ನು ಸರ್ಕಾರದ ಅಧೀನದಲ್ಲಿ ಉಳಿಸಿ ಪಾರದರ್ಶಕತೆ ರೂಪಿಸಿ-ಸುರಕ್ಷತೆ ಹೆಚ್ಚಿಸಬೇಕೆಂದರು. ಟಿ.ಜಿ. ಶಿವಲಿಂಗಯ್ಯನವರ ಮಾತನಾಡಿ, ರೈಲ್ವೆಯನ್ನು ವಿವಿಧ ಪ್ರದೇಶಗಳಿಗೆ ವಿಸ್ತರಿಸಬೇಕು.

ಇನ್ಸಾಪ್ ಸಂಘಟನೆ ರಷೀಕ್‌ ಪಾಷ ಮಾತನಾಡಿ, ರೈಲಿನಲ್ಲಿ ಕೇಟರಿಂಗ್ ಖಾಸಗಿಕರಣ ಮಾಡಿರುವ ಕಾರಣ ದೂರದ ಪ್ರಯಾಣ ಮಾಡುವ ಜನತೆಗೆ ಕಳಪೆ ಆಹಾರ ಮಾತ್ರ ಸಿಗುತ್ತಿದೆ. ಖಾಸಗಿಕರಣದ ವಿರೋಧಿ ಹೋರಾಟಕ್ಕೆ ಜನರು ಬೆಂಬಲಿಸಬೆಕೇಂದರು.

ಜನವಾದಿ ಮಹಿಳಾ ಸಂಘಟನೆ ಕಲ್ಪನಾ ಮಾತನಾಡಿ, ದೇಶದ ಅಸ್ತಿ ಮಾರಲು ಜನ ಬಿ.ಜೆ.ಪಿಗೆ ಓಟು ಹಾಕಿಲ್ಲ ಎಂದು ಟೀಕಿಸಿದರು. ಸಿಐಟಿಯು ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ರೈಲ್ವೆಯಲ್ಲಿ ಖಾಲಿ ಇರುವ 3 ಲಕ್ಷದಷ್ಟು ಹುದ್ದೆಗಳನ್ನು ಭರ್ತಿ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.

ಹೋರಾಟದಲ್ಲಿ ಕಟ್ಟಡ ಕಾರ್ಮಿಕ ಸಂಘಟನೆ ಕಲೀಲ್, ವೆಂಕಟೇಶ್, ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜಶೇಖರ್, ಜಗದೀಶ್. ಮುತ್ತುರಾಜ್, ವಸೀಂ ಅಕ್ರಂ , ಅಟೋ ಚಾಲಕರ ಯೂನಿಯನ್ ನ ಇಂತೀಯಾಜ್ ಪಾಷ, ಹಮಾಲಿ ಕಾರ್ಮಿಕ ಸಂಘ ರಾಮಾಂಜೀನಿ, ಆಂಗನವಾಡಿ ನೌಕರರ ಸಂಘದ ಶಿವಗಂಗಮ್ಮ, ಗೌರಮ್ಮ, ಜಬೀನಾ ಖಾತೋನ್, ಲಕ್ಮಿಕಾಂತ, ಸಮುದಾಯದ ಅಧಕ್ಷ ಅಶ್ವಥ್, ಪಿ.ಎಫ್. ಪಿಂಚಣಿದಾರರು ಬಾಲಕೃಷ್ಣ ಇದ್ದರು

Follow Us:
Download App:
  • android
  • ios