Asianet Suvarna News Asianet Suvarna News

SSLC: ಫೇಲಾಗುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಡಿಸ್ಟಿಂಕ್ಷನ್​ನಲ್ಲಿ ಪಾಸ್..!

ಫೇಲಾಗುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಡಿಸ್ಟಿಂಕ್ಷನ್​ನಲ್ಲಿ ಪಾಸ್ ಆಗಿದ್ದಾನೆ. ಆದ್ರೆ ಪ್ರಯೋಜನವಿಲ್ಲ. ಯಾಕಂದ್ರೆ ಡಿಸ್ಟಿಂಕ್ಷನಲ್ಲಿ ಪಾಸಾದ ಆ ವಿದ್ಯಾರ್ಥಿಯೇ ಇನ್ನಿಲ್ಲ. ದುಡುಕಿನ ನಿರ್ಧಾರಗಳು ಏನೆಲ್ಲ ಅನಾಹುತಗಳು ತಂದೊಡ್ಡುತ್ತವೆ ಎನ್ನುವುದಕ್ಕೆ ಈ ಸ್ಟೋರಿಯೇ ಸಾಕ್ಷಿ. 

The Bengaluru Boy Who committed Suicide Passed distinction In SSLC Result 2019
Author
Bengaluru, First Published Apr 30, 2019, 9:34 PM IST

ಬೆಂಗಳೂರು, [ಏ.30]: ಎಸ್ ಎಸ್ ಎಲ್ ಸಿ ಫಲಿತಾಂಶ ಬರುವ ಮುನ್ನವೇ ಅನುತ್ತೀರ್ಣನಾಗುವೆನೆಂಬ ಭೀತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯೊಬ್ಬ ಡಿಸ್ಟಿಂಕ್ಷನ್​ನಲ್ಲಿ ಪಾಸಾಗಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗಂಗವಾರ ಗ್ರಾಮದ ನಂದನ್​ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಂದನ್​ ಗಂಗವಾರದ ಸನ್​ರೈಸ್​ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.

ಡೌನ್ ಸಿಂಡ್ರೋಮ್ ಬಾಧಿತ ಸುಶ್ರಾವ್ಯ: SSLCಯಲ್ಲಿ ಬರೆದಳೊಂದು ಗೆಲುವಿನ ಕಾವ್ಯ

ಇಂದು [ಮಂಗಳವಾರ] ಪ್ರಕಟಗೊಂಡ ಎಸ್​ಎಸ್​ಎಲ್​ಸಿ ರಿಸಲ್ಟ್ ನಲ್ಲಿ ನಂದನ್ 625ಕ್ಕೆ 530 ಅಂಕ ಪಡೆದು ಉತ್ತೀರ್ಣನಾಗಿದ್ದಾನೆ.ಆದ್ರೆ, ತನ್ನ ದುಡುಕಿನ ನಿರ್ಧಾರದಿಂದ ಈ ವಿಚಾರ ತಿಳಿಯಲು ಈತನೇ ಇಲ್ಲವಾಗಿದ್ದಾನೆ.

ದುಡುಕಿನ ನಿರ್ಧಾರ ಕೈಗೊಳ್ಳುವ ಮುನ್ನವೇ ಒಮ್ಮೆ ಯೋಚಿಸುವುದು ಒಳಿತು.ಇಂತಹ ಪರೀಕ್ಷೆಗಳು ಒಂದಲ್ಲ ಐದಾರೂ ಬಾರಿ ಬರೆಯಬಹುದು. ಆದ್ರೆ ಒಮ್ಮೆ ಹೋದ ಜೀವ ಮತ್ತೆ ಬರಲ್ಲ ಎನ್ನುವುದನ್ನು ವಿದ್ಯಾರ್ಥಿಗಳು ಆತ್ಮವಲೋಕನ ಮಾಡಿಕೊಳ್ಳಬೇಕು. 

Follow Us:
Download App:
  • android
  • ios