Asianet Suvarna News Asianet Suvarna News

ಇಲ್ಲ ಸಲ್ಲದ ಅಪಪ್ರಚಾರ : ಫುಲ್ ಗರಂ ಆದ ಸಂಸದೆ ಸುಮಲತಾ

ಇವರ ವಿರುದ್ಧ ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ಫುಲ್ ಗರಂ ಆಗಿದ್ದಾರೆ.  ಕಾರಣ..?

Sumalatha Ambareesh Slams Mandya Political Leaders snr
Author
Bengaluru, First Published Nov 8, 2020, 2:21 PM IST

ಮದ್ದೂರು (ನ.08):  ಸಂಸದರ ಆದರ್ಶ ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ಕೆಲ ರಾಜಕಾರಣಿಗಳು ಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಸಂಸದೆ ಸುಮಲತಾ ಶನಿವಾರ ಕಿಡಿಕಾರಿದರು.

ತಾಲೂಕಿನ ಬೆಸಗರಹಳ್ಳಿ ಗ್ರಾಪಂ ಆವರಣದಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಿರುವ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್‌ ಹಿನ್ನೆಲೆಯಲ್ಲಿ ಈ ವರ್ಷ ಬೆಸಗರಹಳ್ಳಿ ಮಾತ್ರವಲ್ಲದೇ ರಾಜ್ಯದ ಸಂಸದರ ಆದರ್ಶ ಗ್ರಾಮಗಳ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ ಎಂದರು.

ಕಾಂಗ್ರೆಸ್ ಪರವಾಗಿ ನಿಂತ ಸುಮಲತಾ : ನನಗೆ ಬೆಂಬಲಿಸಿದ್ದಕ್ಕೆ ಸಪೋರ್ಟ್ ಎಂದ ಸಂಸದೆ ...

ಅಭಿವೃದ್ಧಿ ಹಿನ್ನೆಡೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲ ರಾಜಕಾರಣಿಗಳು ಆದರ್ಶ ಗ್ರಾಮಗಳ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. 

ಜಿಲ್ಲೆಯ ಹಿಂದಿನ ಸಂಸದರು ಮತ್ತು ರಾಜಕಾರಣಿಗಳು ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಜವಾಬ್ದಾರಿಯನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಿಕೊಂಡು ಬರುತ್ತಿದ್ದೇನೆ ಎಂದರು. ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ. ವಿವೇಕಾನಂದ, ತಾಪಂ ಸದಸ್ಯ ವೆಂಕಟೇಶ್‌, ಮಾಜಿ ಸದಸ್ಯ ಮರಳಿಗ ಸ್ವಾಮಿ, ಕೋಣಸಾಲೆ ಜಯರಾಂ, ತಾಪಂ ಸಹಾಯಕ ನಿರ್ದೇಶಕ ಮಂಜುನಾಥ್‌ , ಪಿಡಿಒ ಪ್ರಕಾಶ್‌ ಇದ್ದರು.

Follow Us:
Download App:
  • android
  • ios