Asianet Suvarna News Asianet Suvarna News

ಅಥಣಿ: ರಸ್ತೆ ಅಪಘಾತ, ರಜೆಗೆ ಬಂದಿದ್ದ ಯೋಧ ಸಾವು

ಯೋಧ ಲಕ್ಷ್ಮಣ ಹಾಗೂ ಆತನ ಸಹೋದರ ಸಂಬಂಧಿ ಯೋಧ ಸತೀಶ್ ಇಬ್ಬರು ಹಾರೂಗೇರಿ ಗ್ರಾಮಕ್ಕೆ ಹೋಗಿ ಸ್ವಗ್ರಾಮಕ್ಕೆ ಬರುವಾಗ ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

Soldier Dies Due to Accident at Athani in Belagavi grg
Author
First Published Sep 9, 2023, 8:51 PM IST

ಅಥಣಿ(ಸೆ.09): ರಜೆಗೆ ಬಂದಿದ್ದ ಯೋಧರು ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೋರ್ವ ಯೋಧ ಗಂಭೀರ ಗಾಯಗೊಂಡಿರುವ ಘಟನೆ ರಾಯಬಾಗ ತಾಲೂಕಿನ ಹಾರೂಗೇರಿ ಬಳಿ ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮಣ ಇಂದುದಾಸ ಘೊರ್ಪಡೆ (23) ಮೃತ ಯೋಧ. 15ನೇ ಮರಾಠಾ ಕೇರ 99 ಎಪಿಒ ಅರುಣಾಚಲ ಪ್ರದೇಶದಲ್ಲಿ ಲೂಂಪು ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯೋಧ ಲಕ್ಷ್ಮಣ ಘೋರ್ಪಡೆ ರಜೆ ಹಿನ್ನೆಲೆಯಲ್ಲಿ ಸ್ವ ಗ್ರಾಮಕ್ಕೆ ಆಗಮಿಸಿದ್ದರು. ಯೋಧ ಲಕ್ಷ್ಮಣ ಹಾಗೂ ಆತನ ಸಹೋದರ ಸಂಬಂಧಿ ಯೋಧ ಸತೀಶ್ ಇಬ್ಬರು ಹಾರೂಗೇರಿ ಗ್ರಾಮಕ್ಕೆ ಹೋಗಿ ಸ್ವಗ್ರಾಮಕ್ಕೆ ಬರುವಾಗ ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಬೆಳಗಾವಿ: ಭಯದ ವಾತಾವರಣ ಸೃಷ್ಟಿಸುವ ಪುಂಡರಿಗೆ ಜಾಗವಿಲ್ಲ, ಡಿಸಿಪಿ ರೋಹನ್‌

ಲಕ್ಷ್ಮಣ ಘೋರ್ಪಡೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸತೀಶ ಘೋರ್ಪಡೆ ಗಂಭೀರವಾಗಿ ಗಾಯಗೊಂಡಿದ್ದು, ಮಿರಜ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟ ಯೋಧ ಲಕ್ಷ್ಮಣ ಅವರ ಮೃತ ದೇಹವನ್ನು ದರೂರದಿಂದ ನದಿ ಇಂಗಳಗಾಂವ ಗ್ರಾಮಕ್ಕೆ ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋಗಿ ಸ್ವ ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಕುರಿತು ಹಾರೂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios