ತಹಸೀಲ್ದಾರ್‌ ಕಚೇರಿಯಲ್ಲಿ ನಾಗರ ಹಾವು| ಕಳೆದ ಒಂದೂವರೆ ತಿಂಗಳಿನಿಂದ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದರಿಂದ ಜನ ಸಂದಣಿ ಇರಲಿ​ಲ್ಲ| ಇದರಿಂದಾಗಿ ಕಚೇರಿಯ ಮೇಲಂತಸ್ತಿಗೆ ಹೋಗುವ ಮೆಟ್ಟಿಲು ಕೆಳಗೆ ಹಾವು ಅವಿತುಕೊಂಡಿತ್ತು|

ಗಂಗಾವತಿ(ಏ.29): ಆನೆಗೊಂದಿ ಮಾರ್ಗದಲ್ಲಿರುವ ತಹಸೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ನಾಗರ ಹಾವು ಕಾಣಿಸಿಗೊಂಡಿದ್ದು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಒಂದೂವರೆ ತಿಂಗಳಿನಿಂದ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದರಿಂದ ಜನ ಸಂದಣಿ ಇರಲಿ​ಲ್ಲ. ಇದರಿಂದಾಗಿ ಕಚೇರಿಯ ಮೇಲಂತಸ್ತಿಗೆ ಹೋಗುವ ಮೆಟ್ಟಿಲು ಕೆಳಗೆ ಹಾವು ಅವಿತುಕೊಂಡಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಉರಗ ಪ್ರೇಮಿ ರಾಘವೇಂದ್ರ ಶಿರೆಗೇರಿ ಅವರನ್ನು ಕರೆಯಿಸಿ ಸೆರೆ ಹಿಡಿಸಿದ್ದಾರೆ. 

ಕೊರೋನಾ ಕಾಟ: ರೋಡ್‌ನಲ್ಲಿ ಗರಿ ಗರಿ ನೋಟ್‌ ನೋಟ್‌ ಬಿದ್ರೂ ಮುಟ್ಟದ ಜನ..!

ದಿನ ನಿತ್ಯ ತಹಸೀಲ್ದಾರ್‌ ಕಚೇರಿಯಲ್ಲಿ ಹಾವು-ಚೇಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಸಿಬ್ಬಂದಿ ಭಯಭೀತರಾಗಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದರಿಂದ ಜನ ಸಂದಣಿ ಇರಲಿ​ಲ್ಲ. ಇದರಿಂದಾಗಿ ಕಚೇರಿಯ ಮೇಲಂತಸ್ತಿಗೆ ಹೋಗುವ ಮೆಟ್ಟಿಲು ಕೆಳಗೆ ಹಾವು ಅವಿತುಕೊಂಡಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಉರಗ ಪ್ರೇಮಿ ರಾಘವೇಂದ್ರ ಶಿರೆಗೇರಿ ಅವರನ್ನು ಕರೆಯಿಸಿ ಸೆರೆ ಹಿಡಿಸಿದ್ದಾರೆ. 

ತಹಸೀಲ್ದಾರ್‌ ಕಚೇರಿ ಸುತ್ತ ಕಸ-ಕಡ್ಡಿಗಳು ಹೆಚ್ಚಾಗಿ ಬೆಳೆದಿದ್ದರಿಂದ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಸಿಬ್ಬಂದಿ ದೂರಿದ್ದಾರೆ.