Asianet Suvarna News Asianet Suvarna News

'ಶವಗಳ ಮೇಲೆ ಅಧಿಕಾರ ನಡೆಸುತ್ತಿರುವ ಯಡಿಯೂರಪ್ಪ ಸರ್ಕಾರ'

ಕೋವಿಡ್‌- 19 ರಾಜ್ಯಕ್ಕೆ ವಕ್ಕರಿಸಿ ಆರು ತಿಂಗಳ ಮೇಲಾಗಿದೆ. ತಾಲೂಕಿನಲ್ಲಿ ಉಸಿರಾಟದ ತೊಂದರೆಯಿಂದ ನಿತ್ಯವೂ ಜನರು ಮೃತಪಡುತ್ತಿದ್ದಾರೆ. ಆದರೆ ತಾಲೂಕಾಸ್ಪತ್ರೆಯಲ್ಲಿ ಇಂದಿಗೂ ಆಕ್ಸಿಜನ್‌ ಸೌಲಭ್ಯ ಕಲ್ಪಿಸಿಲ್ಲ. ರಾಜ್ಯ ಸರ್ಕಾರಕ್ಕೆ ಮಾನವೀಯತೆ ಅನ್ನುವುದಿದೆಯೇ ಎಂದು ಪ್ರಶ್ನಿಸಿದ ಎಸ್‌.ಆರ್‌.ಪಾಟೀಲ 

S R Patil Slams on BS Yediyurappa Government
Author
Bengaluru, First Published Sep 28, 2020, 12:12 PM IST

ಬ್ಯಾಡಗಿ(ಸೆ.28): ತಾಲೂಕಾಸ್ಪತ್ರೆಯಲ್ಲಿ ತಜ್ಞ ವೈದ್ಯರು(ಫಿಸಿಶಿಯನ್‌)ಸೇರಿದಂತೆ ಇಂದಿಗೂ ಸಮರ್ಪಕ ಸೌಲಭ್ಯಗಳಲ್ಲಿ ಇದರಿಂದ ಕೋವಿಡ್‌- 19ನಿಂದ ತಾಲೂಕಿನಲ್ಲಿ ನಿತ್ಯವೂ ಜನರು ಸಾವಿಗೀಡಾಗುತ್ತಿದ್ದಾರೆ. ಶವಗಳ ಮೇಲೆ ಅಧಿಕಾರ ನಡೆಸುತ್ತಿರುವ ರಾಜ್ಯ ಸರ್ಕಾರ ಮಾನವೀಯತೆ ಕಳೆದುಕೊಂಡಿದೆ ಎಂದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ರಾಜ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ ಆರೋಪಿಸಿದ್ದಾರೆ. 

ಭಾನುವಾರ ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌- 19 ರಾಜ್ಯಕ್ಕೆ ವಕ್ಕರಿಸಿ ಆರು ತಿಂಗಳ ಮೇಲಾಗಿದೆ. ತಾಲೂಕಿನಲ್ಲಿ ಉಸಿರಾಟದ ತೊಂದರೆಯಿಂದ ನಿತ್ಯವೂ ಜನರು ಮೃತಪಡುತ್ತಿದ್ದಾರೆ. ಆದರೆ ತಾಲೂಕಾಸ್ಪತ್ರೆಯಲ್ಲಿ ಇಂದಿಗೂ ಆಕ್ಸಿಜನ್‌ ಸೌಲಭ್ಯ ಕಲ್ಪಿಸಿಲ್ಲ. ರಾಜ್ಯ ಸರ್ಕಾರಕ್ಕೆ ಮಾನವೀಯತೆ ಅನ್ನುವುದಿದೆಯೇ ಎಂದು ಪ್ರಶ್ನಿಸಿದ್ದಾರೆ. 

ಸಾಲಬಾಧೆ ತಾಳಲಾರದೆ ರೈತರಿಬ್ಬರು ಆತ್ಮಹತ್ಯೆ

ಸ್ಥಳೀಯ ಶಾಸಕರಿಗೆ ಕೊರೋನಾ- 19 ಪಾಸಿಟಿವ್‌ ಎಂದು ವರದಿ ಬಂದ ಬಳಿಕ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಿದ್ದರೆ ಇಲ್ಲಿನ ಸರ್ಕಾರಿ ವೈದ್ಯರ ಬಗ್ಗೆ ಅಥವಾ ತಮ್ಮದೇ ಆರೋಗ್ಯ ವ್ಯವಸ್ಥೆಯ ಬಗ್ಗೆ ನಂಬಿಕೆ ಇರಲಿಲ್ಲವೇ ಎಂದು ಪ್ರಶ್ನಿಸಿದರು. 
 

Follow Us:
Download App:
  • android
  • ios