Asianet Suvarna News Asianet Suvarna News

ಮಂಗಳೂರು ಮೋದಿ ಸಮಾವೇಶ: ಸಂಚಾರ ಬದಲಾವಣೆ?, ಎಲ್ಲಿ ಪಾರ್ಕಿಂಗ್ ವ್ಯವಸ್ಥೆ? ಕಂಪ್ಲೀಟ್ ಡಿಟೈಲ್ಸ್..!

ಭದ್ರತೆ ದೃಷ್ಟಿಯಿಂದ ಮತ್ತು ಜನರಿಗೆ ಸಮಸ್ಯೆ ಆಗದಂತೆ ಮಂಗಳೂರಿನಲ್ಲಿ‌ ಹಲವಾರು ಸಂಚಾರ ಬದಲಾವಣೆ ಮಾಡಿ ಆದೇಶ ಹೊರಡಿಸಿದ ಮಂಗಳೂರು ಕಮಿಷನರ್ ಶಶಿಕುಮಾರ್ 

Route Change in Mangaluru on September 2nd Due to PM Narendra Modi Convention grg
Author
First Published Aug 31, 2022, 12:20 PM IST

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು(ಆ.31):  ಸೆ.2ರಂದು ಸರ್ಕಾರದ ಅಧಿಕೃತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುತ್ತಿದ್ದು, ಈ ವೇಳೆ ಭದ್ರತೆ ದೃಷ್ಟಿಯಿಂದ ಮತ್ತು ಜನರಿಗೆ ಸಮಸ್ಯೆ ಆಗದಂತೆ ಮಂಗಳೂರಿನಲ್ಲಿ‌ ಹಲವಾರು ಸಂಚಾರ ಬದಲಾವಣೆ ಮಾಡಿ ಮಂಗಳೂರು ಕಮಿಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಸಮಾವೇಶಕ್ಕೆ ಬರುವ ವಾಹನಗಳಿಗೂ ಪ್ರತ್ಯೇಕ ಪಾರ್ಕಿಂಗ್ ಜಾಗ ಮೀಸಲಿಡಲಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.

Route Change in Mangaluru on September 2nd Due to PM Narendra Modi Convention grg

ಮಂಗಳೂರು: ಪ್ರಧಾನಿ ಕಾರ್ಯಕ್ರಮಕ್ಕೆ 1 ಲಕ್ಷ ಜನ, ಮೋದಿಗೆ ಪರಶುರಾಮ ಪುತ್ಥಳಿ ಉಡುಗೊರೆ

ಸಂಚಾರ‌ ಬದಲಾವಣೆ ವಿವರ:

ಸೆ.2 ರ ಬೆಳಿಗ್ಗೆ 6 ಗಂಟೆಯಿಂದ ಕೂಳೂರು ಜಂಕ್ಷನ್ ನಿಂದ ಕೊಟ್ಟಾರ ಜಂಕ್ಷನ್ ವರೆಗೆ ಸಾಮಾನ್ಯ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಉಳಿದಂತೆ ಮಂಗಳೂರು ನಗರದ 9 ಕಡೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ನಂತೂರು ಸರ್ಕಲ್ ಮೂಲಕ ಆಗಮಿಸುವ ವಾಹನಗಳು ಬಿಕರ್ನಕಟ್ಟೆ-ಕೈಕಂಬ ಜಂಕ್ಷನ್ ಬಳಸಲು ಸೂಚನೆ ನೀಡಲಾಗಿದೆ. ಉಡುಪಿಗೆ ತೆರಳಲು ಬಿಕರ್ನಕಟ್ಟೆ ಮೂಲಕ ವಾಮಂಜೂರು- ಗುರುಪುರ-ಮೂಡಬಿದ್ರೆ-ಕಾರ್ಕಳ ರಸ್ತೆ ಬಳಸಬೇಕು. ಮೈಸೂರು, ಮಡಿಕೇರಿ ತೆರಳಲು ಬಿಕರ್ನಕಟ್ಟೆ- ಪಡೀಲ್-ಪುತ್ತೂರು-ಸುಳ್ಯ ಮೂಲಕ ರಸ್ತೆ ಬಳಸಬೇಕು. ಬೆಂಗಳೂರಿಗೆ ತೆರಳುವವರು ಬಿಕರ್ನಕಟ್ಟೆ-ಪಡೀಲ್-ಬಿ.ಸಿ.ರೋಡ್-ಉಪ್ಪಿನಂಗಡಿ ಮೂಲಕ ರಸ್ತೆ ಮೂಲಕ ಸಾಗಬೇಕು.

ಕಾಸರಗೋಡಿಗೆ ತೆರಳಲು ಬಿಕರ್ನಕಟ್ಟೆ-ಪಡೀಲ್-ಪಂಪ್‌ ವೆಲ್-ತೊಕ್ಕೊಟ್ಟು ಮೂಲಕ ರಸ್ತೆ ಹಾಗೂ ಪೊರ್ಕೋಡಿ ಜಂಕ್ಷನ್ ನಿಂದ ಜೋಕಟ್ಟೆ-ಕಾನಾ-ಸುರತ್ಕಲ್ ಹಾಗೂ ಏರ್ ಪೋರ್ಟ್ ನಿಂದ ಕೈಕಂಬ-ಗುರುಪುರ ಮೂಲಕ ಮಂಗಳೂರಿಗೆ ಬರಬಹುದು. ಮುಲ್ಕಿ ಜಂಕ್ಷನ್ ನಿಂದ ಕಿನ್ನಿಗೋಳಿ-ಕಟೀಲು-ಬಜಪೆ-ಕೈಕಂಬ ಮೂಲಕ ಮಂಗಳೂರಿಗೆ ಎಂಟ್ರಿಯಾಗಬಹುದು. ಹಳೆಯಂಗಡಿಯಿಂದ ಪಕ್ಷಿಕೆರೆ-ಕಿನ್ನಿಗೋಳಿ-ಏರ್ ಪೋರ್ಟ್ ರಸ್ತೆ ಮೂಲಕ ಬರಲು ಅವಕಾಶವಿದ್ದು, ಲೇಡಿಹಿಲ್ ಮೂಲಕ ಪಿವಿಎಸ್-ಬಂಟ್ಸ್ ಹಾಸ್ಟೆಲ್ ಮೂಲಕ ಪಂಪ್ ವೆಲ್ ಗೆ ವಾಹನ ಸಂಚಾರ ಇದೆ.

Route Change in Mangaluru on September 2nd Due to PM Narendra Modi Convention grg

ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮ‌ನ ಹಿನ್ನೆಲೆ ಪ್ರಧಾನಿ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಪಾರ್ಕಿಂಗ್ ಗೆ 11 ಕಡೆ ಪೊಲೀಸ್ ಇಲಾಖೆ ಜಾಗ ಗುರುತಿಸಿದ್ದು, ವಿವರ ಈ ಕೆಳಗಿನಂತಿದೆ. 

1) ಡೆಲ್ಟಾ ಗ್ರೌಂಡ್-ಪೊಲೀಸ್ ಪಾಸ್ ಪಡೆದ ವಿವಿಐಪಿ ವಾಹನಗಳ ಪಾರ್ಕಿಂಗ್-300 ಕಾರು
2) ಸೋಮಯಾಜಿ ಮೈದಾನ ಕೂಳೂರು-ಪೊಲೀಸ್ ಪಾಸ್ ಪಡೆದ ವಿಐಪಿ ವಾಹನಗಳ ಪಾರ್ಕಿಂಗ್-500 ಕಾರು
3) ತಣ್ಣೀರು ಬಾವಿ ರಸ್ತೆ, ಪಣಂಬೂರು- ಉಡುಪಿ, ಸುರತ್ಕಲ್, ಕಾವೂರು ಕಡೆಯಿಂದ ಬರುವ ವಾಹನಗಳು- 1500 ಬಸ್, 500 ಕಾರುಗಳು
4) ಎನ್.ಎಂ.ಪಿ.ಟಿ ಮೈದಾನ, ಪಣಂಬೂರು- ಬಜಪೆ, ಕಾವೂರು ಹಾಗೂ ಉಡುಪಿ ವಾಹನಗಳು-200 ಬಸ್, 600 ಬೈಕ್
5) ಎಂ.ಎಸ್.ಇ.ಝಡ್ ರಸ್ತೆ, ಪಣಂಬೂರು- ಉಡುಪಿ, ಸುರತ್ಕಲ್ ಕಡೆಯ ವಾಹನಗಳು- 1000 ಲಘು ವಾಹನಗಳು
6) ಎ.ಜೆ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜು, ಕುಳೂರು- ಪೊಲೀಸ್ ಪಾಸ್ ಪಡೆದ ವಿಐಪಿ ವಾಹನಗಳ ಪಾರ್ಕಿಂಗ್-100 ಕಾರು
7) ಗೋಲ್ಡ್ ಪಿಂಚ್ ಮೈದಾನದ ಪೂರ್ವ ಭಾಗದ ಅಮೆಜಾನ್ ಗೋಡಾನ್ ಬಳಿ- ಎಲ್ಲಾ ಭಾಗದ ವಾಹನ ಪಾರ್ಕಿಂಗ್- 2000 ಕಾರು ಮತ್ತು 3000 ಬೈಕ್
8) ಎ.ಜೆ. ಆಸ್ಪತ್ರೆ ಬಳಿಯ ಕುಂಟಿಕಾನದಿಂದ ಕಾವೂರು ಜಂಕ್ಷನ್- ಬೆಳ್ತಂಗಡಿ ಹಾಗೂ ಕಾಸರಗೋಡು ಕಡೆಯ ಬಸ್ ಗಳು- 350 ಬಸ್ ಗಳು
9) ಕೆಪಿಟಿ ಮೈದಾನ- ಮೂಡಬಿದ್ರೆ, ಮುಲ್ಕಿ ತಾಲೂಕಿನ ಬಸ್ ಗಳು- 200 ಬಸ್ ಗಳು
10) ವ್ಯಾಸ ನಗರ ಮೈದಾನ- ಪುತ್ತೂರು ಮತ್ತು ಸುಳ್ಯ ತಾಲೂಕಿನ ಬಸ್ ಗಳು- 50 ಬಸ್ ಗಳು
12) ಪದುವಾ ಮೈದಾನ- ಪುತ್ತೂರು ಮತ್ತು ಸುಳ್ಯ ತಾಲೂಕಿನ ಬಸ್ ಗಳು- 250 ಬಸ್ ಗಳು
 

Follow Us:
Download App:
  • android
  • ios