ಘಾಟಿ ಸುಬ್ರಮಣ್ಯ ದೇಗುಲದ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ಬಾರಿ ಬ್ರಹ್ಮ ರಥೋತ್ಸವ ಹಿನ್ನೆಲೆಯಲ್ಲಿ ಆದಾಯದಲ್ಲಿ ಏರಿಕಯಾಗಿದೆ.
ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ತಿಂಗಳ ಹುಂಡಿ ಎಣೆಕೆ ಕಾರ್ಯ ನಡೆದಿದ್ದು, ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
Add Asianetnews Kannada as a Preferred Source

ಕಳೆದ ತಿಂಗಳು ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ನಡೆದಿದ್ದು, ಇದರಿಂದಾಗಿ ಆದಾಯದಲ್ಲಿ ಹೆಚ್ಚಳವಾಗಿದೆ. ಭಕ್ತರಿಂದ ಕಳೆದ ಜನವರಿ ತಿಂಗಳಲ್ಲಿ ದೇಗುಲದಲ್ಲಿ 40,90,124 ರು. ನಗದು ಸಂಗ್ರಹವಾಗಿದೆ.
1 ಕೆಜಿ 740 ಗ್ರಾಂ ಬೆಳ್ಳಿ, ಮತ್ತು 200 ಮಿಲಿ ಬಂಗಾರ ಭಕ್ತರಿಂದ ದೇಗುಲಕ್ಕೆ ಅರ್ಪಣೆಯಾಗಿದೆ. ಜತೆಗೆ ಬ್ಯಾನ್ ಆದ 500 ರೂಪಾಯಿಯ 22 ಹಳೆ ನೋಟು, 1000 ಮುಖ ಬೆಲೆಯ 6 ಹಳೆ ನೋಟುಗಳು ಸೇರಿದಂತೆ ಅಮೇರಿಕಾದ 5 ಡಾಲರಿನ 1 ನೋಟು ಹುಂಡಿಯಲ್ಲಿ ಪತ್ತೆಯಾಗಿವೆ.
ಕಳೆದ ಡಿಸೆಂಬರ್ ತಿಂಗಳ ಹುಂಡಿ ಎಣಿಕೆಯಲ್ಲಿ 33,046 ರು. ನಗದು 1.5 ಕೆಜಿ ಬೆಳ್ಳಿ ಭಕ್ತರಿಂದ ದೇಣಿಗೆಯಾಗಿ ಸ್ವೀಕರಿಸಲ್ಪಟ್ಟಿತ್ತು. ಕಳೆದ ಬಾರಿ ಆದಾಯಕ್ಕೆ ಹೋಲಿಸಿದಲ್ಲಿ ಈ ಬಾರಿ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
