Asianet Suvarna News Asianet Suvarna News

ಕಲ​ಬು​ರ​ಗಿಗೆ ಏಮ್ಸ್‌: ಶ​ರಣ ಪ್ರಕಾಶ ಹೇಳಿ​ಕೆಗೆ ರಾಯಚೂರು ಜಿಲ್ಲೆಯಲ್ಲಿ ತೀವ್ರ ವಿರೋಧ

ರಾಜ್ಯ​ದಲ್ಲಿ ಯಾವುದೇ ಪಕ್ಷದ ಸರ್ಕಾರ ರಚ​ನೆ​ಗೊಂಡರೂ ರಾಯ​ಚೂರು ಜಿಲ್ಲೆಗೆ ಮಾತ್ರ ಮಲ​ತಾಯಿ ಧೋರಣೆ ತಪ್ಪು​ತ್ತಿಲ್ಲ.ಈ ಹಿಂದೆ ಆಡ​ಳಿತ ನಡೆ​ಸಿದ ಬಿಜೆಪಿ ಸರ್ಕಾ​ರ​ದ​ವರು ಅಖಿಲ ಭಾರತ ವೈದ್ಯ​ಕೀಯ ವಿಜ್ಞಾ​ನ​ಗಳ ಸಂಸ್ಥೆ (ಏ​ಮ್ಸ್‌​)​ಯನ್ನು ಹುಬ್ಬ​ಳ್ಳಿ-ಧಾರ​ವಾ​ಡಕ್ಕೆ ತೆಗೆ​ದು​ಕೊಂಡು ಹೋಗಲು ಪ್ರಯತ್ನ ನಡೆ​ಸಿ​ದರು ಇದೀಗ ಹೊಸ​ದಾಗಿ ಅಸ್ತಿ​ತ್ವಕ್ಕೆ ಬಂದಿ​ರುವ ಕಾಂಗ್ರೆಸ್‌ ಸರ್ಕಾ​ರ ಆರಂಭ​ದ​ಲ್ಲಿಯೇ ಕಲ​ಬು​ರ​ಗಿಗೆ ಏಮ್ಸ್‌ ಪಡೆ​ಯುವ ಹುನ್ನಾ​ರಕ್ಕೆ ಮುಂದಾ​ಗಿರುವು​ದ​ಕ್ಕೆ ಜಿಲ್ಲೆ​ಯಲ್ಲಿ ಆಕ್ರೋ​ಶದ ಕಿಡಿ​ ಸಿ​ಡಿ​ದಿ​ದೆ.

Raichur neglected by Congress BJP government AIMS issue rav
Author
First Published Jun 8, 2023, 1:16 PM IST

ರಾಮ​ಕೃಷ್ಣ ದಾಸರಿ

 ರಾಯ​ಚೂರು (ಜೂ.8) : ರಾಜ್ಯ​ದಲ್ಲಿ ಯಾವುದೇ ಪಕ್ಷದ ಸರ್ಕಾರ ರಚ​ನೆ​ಗೊಂಡರೂ ರಾಯ​ಚೂರು ಜಿಲ್ಲೆಗೆ ಮಾತ್ರ ಮಲ​ತಾಯಿ ಧೋರಣೆ ತಪ್ಪು​ತ್ತಿಲ್ಲ.ಈ ಹಿಂದೆ ಆಡ​ಳಿತ ನಡೆ​ಸಿದ ಬಿಜೆಪಿ ಸರ್ಕಾ​ರ​ದ​ವರು ಅಖಿಲ ಭಾರತ ವೈದ್ಯ​ಕೀಯ ವಿಜ್ಞಾ​ನ​ಗಳ ಸಂಸ್ಥೆ (ಏ​ಮ್ಸ್‌​)​ಯನ್ನು ಹುಬ್ಬ​ಳ್ಳಿ-ಧಾರ​ವಾ​ಡಕ್ಕೆ ತೆಗೆ​ದು​ಕೊಂಡು ಹೋಗಲು ಪ್ರಯತ್ನ ನಡೆ​ಸಿ​ದರು ಇದೀಗ ಹೊಸ​ದಾಗಿ ಅಸ್ತಿ​ತ್ವಕ್ಕೆ ಬಂದಿ​ರುವ ಕಾಂಗ್ರೆಸ್‌ ಸರ್ಕಾ​ರ ಆರಂಭ​ದ​ಲ್ಲಿಯೇ ಕಲ​ಬು​ರ​ಗಿಗೆ ಏಮ್ಸ್‌ ಪಡೆ​ಯುವ ಹುನ್ನಾ​ರಕ್ಕೆ ಮುಂದಾ​ಗಿರುವು​ದ​ಕ್ಕೆ ಜಿಲ್ಲೆ​ಯಲ್ಲಿ ಆಕ್ರೋ​ಶದ ಕಿಡಿ​ ಸಿ​ಡಿ​ದಿ​ದೆ.

ಹೊಸ ಸರ್ಕಾರ ವೈದ್ಯ​ಕೀಯ ಶಿಕ್ಷಣ ಸಚಿವ ಡಾ.ಶ​ರ​ಣ​ಪ್ರ​ಕಾಶ ಪಾಟೀಲ್‌ ಸಚಿ​ವ​ರಾದ ನಂತರ ಮೊದಲ ಬಾರಿಗೆ ಕಲ​ಬು​ರಗಿ ಜಿಲ್ಲೆಗೆ ಆಗ​ಮಿ​ಸಿ ಹಲವು ಅಭಿ​ವೃದ್ಧಿ ವಿಷ​ಯ​ಗಳ ಬಗ್ಗೆ ಮಾತ​ನಾ​ಡಿದ್ದು, ಈ ವೇಳೆ ಕಲ​ಬು​ರ​ಗಿ​ಯಲ್ಲಿ ಏಮ್ಸ್‌ ಸ್ಥಾಪಿ​ಸುವು​ದ​ಕ್ಕಾಗಿ ಕೇಂದ್ರಕ್ಕೆ ಶಿಫಾ​ರಸ್ಸು ಮಾಡು​ವು​ದಾಗಿ ಹೇಳಿಕೆ ನೀಡಿ​ರುವು​ದಕ್ಕೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತ​ವಾ​ಗು​ತ್ತಿದೆ.

ರಾಯಚೂರು ಜನತೆಯ ಸಹನೆ ಪರೀಕ್ಷಿಸಬೇಡಿ: ಮಂತ್ರಾಲಯ ಶ್ರೀಗಳಿಂದ ಸರ್ಕಾರಕ್ಕೆ ಖಡಕ್ ಸಂದೇಶ ರವಾನೆ

ಏಮ್ಸ್‌​ಗಾಗಿ ಐತಿ​ಹಾ​ಸಿ​ಕ ಹೋರಾ​ಟ:

ಜಿ​ಲ್ಲೆಗೆ ಏಮ್ಸ್‌ ಮಂಜೂರು ಮಾಡ​ಬೇಕು ಎಂದು ಆಗ್ರ​ಹಿಸಿ ಕಳೆದ 2022 ಮೇ 12ರಂದು ನಗ​ರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗ​ಣದ ಆವ​ರ​ಣ​ದಲ್ಲಿ ರಾಯ​ಚೂರು ಏಮ್ಸ್‌ ಮಂಜೂ​ರಾತಿ ಹೋರಾಟ ಸಮಿತಿ ನೇತೃ​ತ್ವ​ದಲ್ಲಿ ನಿರಂತರ ಹೋರಾ​ಟ​ವನ್ನು ಆರಂಭಿ​ಸಿದ್ದು, ಇಂದಿಗೆ ಹೋರಾ​ಟವು 391 ದಿನ ಪೂರೈ​ಸಿದೆ. ಒಂದು ವರ್ಷಕ್ಕು ಹೆಚ್ಚು ದಿನ​ಗಳ ಕಾಲ ನಡೆಯುತ್ತಿ​ರುವ ಹೋರಾ​ಟವು ತೀವ್ರ ಸ್ವರೂಪ ಪಡೆಯುತ್ತಲೇ ಬಂದಿದೆ. ಉದ್ದೇಶ ಒಂದೇಯಾದರೂ ಅನೇಕ ಆಯಾಮಗಳಿಂದ ಸರ್ಕಾರಗಳ ಮೇಲೆ ಒತ್ತಡ ಹೇರಲು ಹೋರಾಟಗಾರರು ಇನ್ನಿಲ್ಲದ ಪ್ರಯಾಸಪಡುತ್ತಲೇ ಬರುತ್ತಿ​ದೆ. ​ಹ​ಲ​ವಾರು ಪ್ರತಿ​ಭ​ಟನಾ ಮೆರ​ವ​ಣಿಗೆ, ಜನ​ಪ್ರ​ತಿ​ನಿ​ಧೀ​ಗಳ ಭಾವ​ಚಿತ್ರ ದಹಿಸಿ ಆಕ್ರೋಶ, ಪತ್ರ ಚಳವಳಿ, ರಕ್ತದಲ್ಲಿ ಸಹಿ ಸಂಗ್ರಹಿಸಿ ಸಿಎಂಗೆ ಪತ್ರ ಹಾಗೂ ಸರದಿ ಉಪ​ವಾಸ ಸತ್ಯಾಗ್ರಹದಂತಹ ಕಾರ್ಯಕ್ರಮ ಇದರ ಜೊತೆ​ಗೆ ಮುಖ್ಯಮಂತ್ರಿ, ಸಚಿವರು, ರಾಹುಲ್‌ ಗಾಂಧಿ ಹೀಗೆ ಜಿಲ್ಲೆಗೆ ಬಂದ ರಾಜಕೀಯ ಧುರೀಣರನ್ನು ಸೆಳೆಯುವ ನಿಟ್ಟಿನಲ್ಲಿ ಹೋರಾಟಗಾರರು ನಿರಂತರ ಪ್ರಯತ್ನದಲ್ಲಿದ್ದರು. ಅರಕೇರಾದಲ್ಲಿ ಕಂದಾಯ ಸಚಿವ ಆರ್‌.ಅಶೊಕ ವಾಸ್ತವ್ಯ ಹೂಡಿದಾಗಲೂ ಇಲ್ಲಿಂದ ಪಾದಯಾತ್ರೆ ನಡೆಸಿ ಒತ್ತಾಯ ಮಾಡಲಾಯಿತು. ಗಣ್ಯರಿಗೆ ಕಪ್ಪು ಪಟ್ಟಿಗಳ ಪ್ರದರ್ಶನ ಮಾಡ​ಲಾ​ಗಿತ್ತು. ಇತ್ತೀ​ಚೆಗೆ ಅಕಾ​ಲಿ​ಕ​ವಾಗಿ ಸುರಿದ ಭಾರಿ ಮಳೆ ಗಾಳಿಗೆ ಹೋರಾ​ಟದ ಪೆಂಡಾಲ್‌ ನೆಲ​ಕ್ಕು​ರು​ಳಿ​ದರು ಸಹ ಎದೆ​ಗುಂದದೆ ಐತಿ​ಹಾ​ಸಿ​ಕ ಹೋರಾ​ಟ​ವನ್ನು ನಡೆಸ​ಲಾ​ಗು​ತ್ತಿದೆ.

ಪ್ರಣಾ​ಳಿ​ಕೆ​ಯಲ್ಲಿ ಕಾಂಗ್ರೆಸ್‌ ಭರ​ವ​ಸೆ:

ಇತ್ತೀ​ಚೆಗೆ ನಡೆದ ವಿಧಾ​ನ​ಸಭೆ ಸಾರ್ವ​ತ್ರಿಕ ಚುನಾ​ವ​ಣೆ ಪೂರ್ವ​ದಲ್ಲಿ ಕಾಂಗ್ರೆಸ್‌ ತಮ್ಮ ಪ್ರಣಾ​ಳಿ​ಕೆ​ಯಲ್ಲಿ ರಾಯ​ಚೂರು ಜಿಲ್ಲೆಗೆ ಏಮ್ಸ್‌ ಮಂಜೂರು ಮಾಡು​ವಂತೆ ಕೇಂದ್ರಕ್ಕೆ ಶಿಫಾ​ರಸ್ಸು ಮಾಡು​ವು​ದಾಗಿ ಭರ​ವ​ಸೆ​ಯನ್ನು ನೀಡಿತ್ತು. ಇದೀಗ ಅದೇ ಕೈ ಪಕ್ಷದ ಸಚಿ​ವರು ಕಲ​ಬು​ರ​ಗಿಗೆ ಏಮ್ಸ್‌ ತರುವ ನಿಟ್ಟಿ​ನಲ್ಲಿ ಹೇಳಿ​ಕೆ​ಗ​ಳನ್ನು ನೀಡಿ​ದ್ದಾರೆ. ರಾಯ​ಚೂ​ರಿ​ನಲ್ಲಿ ಏಮ್ಸ್‌ ಹೋರಾಟ ನಡೆ​ಯು​ತ್ತಿ​ರು​ವು​ದರ ಬಗ್ಗೆ ಅದೇ ರೀತಿ ಕಾಂಗ್ರೆಸ್‌ ಪ್ರಣಾ​ಳಿ​ಕೆ​ಯಲ್ಲಿ ರಾಯ​ಚೂ​ರಿಗೆ ಏಮ್ಸ್‌ನ ಭರ​ವಸೆ ಕೊಟ್ಟಿ​ರು​ವುದು ಗಮ​ನ​ಕ್ಕಿ​ದ್ದರು ಸಹ ಸಚಿವ ಡಾ.ಶ​ರ​ಣ ಪ್ರಕಾಶ ಪಾಟೀಲ್‌ ಕಲ​ಬು​ರ​ಗಿಗೆ ಏಮ್ಸ್‌ ತೆಗೆ​ದು​ಕೊಂಡು ಹೋಗುವ ಪ್ರಾಸ್ತಾ​ಪ​ವನ್ನು ಮಂಡಿ​ಸಿ​ರು​ವುದು ರಾಯ​ಚೂರಿಗರ ಕೆಂಗ​ಣ್ಣಿಗೆ ಗುರಿ​ಯಾ​ಗಿ​ದ್ದಾರೆ.

Karnataka Budget 2023: ರಾಯಚೂರಿಗೆ ಜಿಲ್ಲೆಗೆ ಕಹಿಯಾದ ಕೊನೆ ಬಜೆಟ್‌

ಕಾಂಗ್ರೆಸ್‌ ಪಕ್ಷವೇ ತಮ್ಮ ಪ್ರಣಾ​ಳಿ​ಕೆ​ಯಲ್ಲಿ ರಾಯ​ಚೂ​ರಿಗೆ ಏಮ್ಸ್‌ ಕೊಡು​ವು​ದಾಗಿ ಭರ​ವಸೆ ನೀಡಿ​ದ್ದಾರೆ. ಅದನ್ನು ಗಮ​ನಿ​ಸದ ವೈದ್ಯ​ಕೀಯ ಶಿಕ್ಷಣ ಸಚಿವ ಡಾ.ಶ​ರ​ಣ​ಪ್ರ​ಕಾಶ ಪಾಟೀ​ಲ್‌ ಕಲ​ಬು​ರ​ಗಿ​ಯಲ್ಲಿ ಏಮ್ಸ್‌ ಸ್ಥಾಪಿ​ಸುವ ಬಗ್ಗೆ ಹೇಳಿಕೆ ನೀಡಿ​ರುವುದು ಬೇಜ​ವ​ಬ್ದಾರಿ ತನ್ಕಕೆ ಸಾಕ್ಷಿ​ಯಾ​ಗಿದೆ. ರಾಯ​ಚೂ​ರಿನ ಮೇಲೆ ನಿರಂತ​ರ​ವಾಗಿ ನಡೆ​ಯು​ತ್ತಿ​ರುವ ರಾಜ​ಕೀಯ ದಬ್ಬಾ​ಳಿ​ಕೆ​ ನಿಲ್ಲಿ​ಸ​ಬೇಕು. ಇಲ್ಲ​ದಿ​ದ್ದರೆ ಪರಿ​ಣಾ​ಮ​ವನ್ನು ಎದು​ರಿ​ಸ​ಬೇ​ಕಾ​ಗು​ತ್ತ​ದೆ.

-ಡಾ.ಬ​ಸ​ವ​ರಾಜ ಕಳಸ, ಪ್ರಧಾನ ಸಂಚಾ​ಲಕ, ಏಮ್ಸ್‌ ಹೋರಾಟ ಸಮಿತಿ

Follow Us:
Download App:
  • android
  • ios