Asianet Suvarna News Asianet Suvarna News

Karnataka Budget 2023: ರಾಯಚೂರಿಗೆ ಜಿಲ್ಲೆಗೆ ಕಹಿಯಾದ ಕೊನೆ ಬಜೆಟ್‌

ರಾಜ್ಯ ಬಿಜೆಪಿ ಸರ್ಕಾರದ ಕೊನೆ ಬಜೆ​ಟ್‌ ಜಿಲ್ಲೆ ಪಾಲಿಗೆ ಕಹಿ​ಯಾಗಿ ಮಾರ್ಪ​ಟ್ಟಿದೆ. ಸ್ಥಳೀಯ ಜನರು ಬೇಡಿದ್ದು ಒಂದು, ಸರ್ಕಾರ ನೀಡಿದ್ದು ಮತ್ತೊಂದು. ಇದ​ರಿಂದಾಗಿ ನಾಲ್ಕು ವರ್ಷ​ಗ​ಳಿಂದ ಸರ್ಕಾರ ಜಿಲ್ಲೆಗೆ ಮಾಡು​ತ್ತ​ಲೆಯೇ ಬಂದಿ​ರುವ ಅನ್ಯಾ​ಯ, ​ಮೋಸ, ತಾರ​ತಮ್ಯ ಧೋರ​ಣೆಯನ್ನು ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಕೊನೆ ಬಜೆ​ಟ್‌​ನ​ಲ್ಲಿಯೂ ಸಹ ಮುಂದು​ವ​ರೆ​ಸಿ​ದ್ದಾರೆ ಎಂದು ಸಾರ್ವ​ಜ​ನಿ​ಕರಿಂದ ತೀವ್ರ ಅಸ​ಮ​ಧಾನ ವ್ಯಕ್ತ​ವಾ​ಗು​ತ್ತಿ​ದೆ.

Raichur district was disappointed by the Karnataka budget rav
Author
First Published Feb 18, 2023, 1:21 PM IST

ರಾಮ​ಕೃಷ್ಣ ದಾಸರಿ

 ರಾಯ​ಚೂರು (ಫೆ.18) :\ ರಾಜ್ಯ ಬಿಜೆಪಿ ಸರ್ಕಾರದ ಕೊನೆ ಬಜೆ​ಟ್‌ ಜಿಲ್ಲೆ ಪಾಲಿಗೆ ಕಹಿ​ಯಾಗಿ ಮಾರ್ಪ​ಟ್ಟಿದೆ. ಸ್ಥಳೀಯ ಜನರು ಬೇಡಿದ್ದು ಒಂದು, ಸರ್ಕಾರ ನೀಡಿದ್ದು ಮತ್ತೊಂದು. ಇದ​ರಿಂದಾಗಿ ನಾಲ್ಕು ವರ್ಷ​ಗ​ಳಿಂದ ಸರ್ಕಾರ ಜಿಲ್ಲೆಗೆ ಮಾಡು​ತ್ತ​ಲೆಯೇ ಬಂದಿ​ರುವ ಅನ್ಯಾ​ಯ, ​ಮೋಸ, ತಾರ​ತಮ್ಯ ಧೋರ​ಣೆಯನ್ನು ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಕೊನೆ ಬಜೆ​ಟ್‌​ನ​ಲ್ಲಿಯೂ ಸಹ ಮುಂದು​ವ​ರೆ​ಸಿ​ದ್ದಾರೆ ಎಂದು ಸಾರ್ವ​ಜ​ನಿ​ಕರಿಂದ ತೀವ್ರ ಅಸ​ಮ​ಧಾನ ವ್ಯಕ್ತ​ವಾ​ಗು​ತ್ತಿ​ದೆ.

ಕೇಳಿ​ದ್ದೊಂದು ನೀಡಿ​ದ್ದೊಂದು:

ಜಿಲ್ಲೆಗೆ ಭಾರ​ತ ವೈದ್ಯ​ಕೀಯ ವಿಜ್ಞಾ​ನ​ಗಳ ಸಂಸ್ಥೆ (AIMS) ಮಂಜೂರು ಮಾಡ​ಬೇಕು ಎಂದು ಆಗ್ರ​ಹಿಸಿ ಕಳೆದ 281 ದಿನ​ಗ​ಳಿಂದ ನಿರಂತರ ಧರಣಿ ನಡೆ​ಸ​ಲಾ​ಗು​ತ್ತಿದೆ. ಇದರ ಜೊತೆಗೆ 31 ದಿನ​ಗ​ಳಿಂದ ಸರದಿ ಉಪ​ವಾ​ಸ​ವನ್ನು ಸಹ ಕೈಗೊ​ಳ್ಳುತ್ತಾ ಬರ​ಲಾ​ಗಿದೆ. ಜಿಲ್ಲೆಗೆ ಎರಡು ಸಲ ಭೇಟಿ ನೀಡಿದ ಸಿಎಂ ಬಸ​ವ​ರಾಜ ಬೊಮ್ಮಾಯಿ(CM Basavaraj Bommai), ಸಚಿ​ವ​ರು, ​ಶಾ​ಸ​ಕರು ಜಿಲ್ಲೆಗೆ ಏಮ್ಸ್‌ ಕೊಡು​ವು​ದಾಗಿ ಭರ​ವಸೆಯ ಮಾತು​ಗ​ಳ​ನ್ನಾಡಿ ಹೋಗಿ​ದ್ದರು. ಆದರೆ, ಇದೀಗ ಬಜೆ​ಟ್‌​ನಲ್ಲಿ ಏಮ್ಸ್‌ ಮಾದರಿ ಆಸ್ಪ​ತ್ರೆ​ಯನ್ನು ಘೋಷಣೆ ಮಾಡಿ​ದ್ದಾರೆ. ಇದಕ್ಕೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತ​ವಾ​ಗು​ತ್ತಿದೆ. ರಾಜ್ಯ ಸರ್ಕಾ​ರವು ಜಿಲ್ಲೆಗೆ ಮತ್ತೊಮ್ಮೆ ಬಹು​ದೊಡ್ಡ ಮೋಸ ಮಾಡಲು ಹೊರ​ಟಿದೆ ಎಂದು ಹೋರಾ​ಟ​ಗಾ​ರರು ಆಕ್ರೋಶ ವ್ಯಕ್ತ​ಪ​ಡಿ​ಸು​ತ್ತಿ​ದ್ದಾರೆ.

ರಾಯಚೂರು: ವಿದ್ಯಾರ್ಥಿಗಳ ಪ್ರತಿಭಟನೆಗೆ ಬ್ರೇಕ್ ಹಾಕಲು ಕೃಷಿ ವಿವಿ ಹೊಸ ಪ್ಲಾನ್..!

ಜಿಲ್ಲೆ ಹೊಸ ರಾಯ​ಚೂರು ವಿಶ್ವ​ವಿ​ದ್ಯಾ​ಲ​ಯ(Raichur University)ಕ್ಕೆ 135 ಕೋಟಿ ರು. ನೀ​ಡ​ಬೇಕು ಎನ್ನುವ ಪ್ರಸ್ತಾ​ವನೆಗೆ ಬಜೆ​ಟ್‌​ನಲ್ಲಿ ಯಾವುದೇ ಮನ್ನಣೆ ಸಿಕ್ಕಿಲ್ಲ. ಮೆಗಾ ಜವಳಿ ಪಾರ್ಕ್(Mega Textile Park) ಘೋಷಿ​ಸಿ​ರು​ವುದು ಜಿಲ್ಲೆ ಜನ​ರಿಗೆ ಕೊಂಚ ಸಮಾಧಾ​ನ ನೀಡಿದೆ. ಇದರ ಜೊತೆಗೆ ರಾಯ​ಚೂರು ನಗ​ರ​ಸ​ಭೆ​ಯನ್ನು ಮೇಲ್ದ​ರ್ಜೆ​ಗೇ​ರಿಸಿ ಮಹಾ​ನ​ಗರ ಪಾಲಿ​ಕೆ​ಯ​ನ್ನಾಗಿ ಮಾಡು​ವು​ದ​ಕ್ಕಾಗಿ ಇರು​ವಂತಹ ಮಾನ​ದಂಡ​ಗ​ಳನ್ನು ಪರಿ​ಶೀ​ಲಿ​ಸು​ವು​ದಾಗಿ ಬಜೆ​ಟ್‌​ನಲ್ಲಿ ತಿಳಿ​ಸ​ಲಾ​ಗಿದೆ.

ರಾಯ​ಚೂರು, ಯಾದ​ಗಿರಿ ಮತ್ತು ಬಳ್ಳಾರಿ ಜಿಲ್ಲೆ​ಗ​ಳಲ್ಲಿ ಸೀಗಡಿ ಕೃಷಿ ಕ್ಲಸ್ಟ​ರ್‌​ಗ​ಳನ್ನು ಸ್ಥಾಪಿ​ಸು​ವುದು, ಮುನಿ​ರಾ​ಬಾ​ದ್‌-ಗಿಣಿ​ಗೇರಾ ರಾಯ​ಚೂರು ರೈಲ್ವೆ ಮಾರ್ಗಕ್ಕೆ 150 ಕೋಟಿ ರು. ಮೀಸಲು ನೀಡಿ​ರು​ವುದು, ಪ್ರಸಕ್ತ ಸಾಲಿ​ನಲ್ಲಿ ರಾಯ​ಚೂ​ರಿನ ವಿವಿಧ ಕರೆ​ಗ​ಳನ್ನು ಭರ್ತಿ ಮಾಡುವ ಯೋಜ​ನೆ​ಯನ್ನು ಪೂರ್ಣ​ಗೊ​ಳಿ​ಸು​ವು​ದು ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ರಾಯಚೂರು ಗ್ರಾಮಾಂತರ ಪ್ರದೇ​ಶ​ದ​ಲ್ಲಿ ಹೊಸದಾಗಿ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸುವು​ದು ಅಷ್ಟೇ ಅಲ್ಲದೇ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅನುಷ್ಠಾನದಲ್ಲಿರುವ ಶಾಲೆಯಿಂದ ಹೊರಗುಳಿದ 14-18 ವರ್ಷದ ಪ್ರಾಯ ಪೂರ್ವ ಬಾಲಕಿಯರಿಗೆ, ಪೂರಕ ಪೌಷ್ಟಿಕ ಆಹಾರ ನೀಡುವ ಯೋಜನೆಯನ್ನು ಎಲ್ಲ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಿಗೆ ವಿಸ್ತ​ರಿಸಿರು​ವು​ದರ ಕುರಿತು ಬಜೆ​ಟ್‌​ನಲ್ಲಿ ತಿಳಿ​ಸ​ಲಾ​ಗಿದೆ.

ಒಟ್ಟಿ​ನಲ್ಲಿ ರಾಜ್ಯ ಸರ್ಕಾ​ರದ ಕೊನೆಯ ಬಜೆ​ಟ್‌​ನಲ್ಲಿ ಪ್ರತ್ಯೇ​ಕ​ವಾಗಿ ವಿಶೇ​ಷ​ವಾದ ಕೊಡು​ಗೆ ಏನು ಸಿಕ್ಕಿಲ್ಲ. ಜಿಲ್ಲೆ ಜನ​ರ ಬೇಡಿ​ಕೆ​ಗ​ಳಿಗೆ ಸ್ಪಂದಿ​ಸದೇ ಅನ​ಗ​ತ್ಯ​ವಾದ ಕಾಮ​ಗಾ​ರಿ, ​ಯೋ​ಜ​ನೆ​ಗ​ಳನ್ನು ಬಲ​ವಂತ​ವಾಗಿ ಹೇರಿ​ದಂತಿ​ದೆ.

ಬಜೆಟ್ ಯಾರು ಏನು ಹೇಳಿದ್ರು?:

ಅತ್ಯುತ್ತಮ ಮಾದರಿ ಬಜೆಟ್‌

ಬಜೆಟ್‌ ಒಂದು ಅತ್ಯುತ್ತಮ ಬಜೆಟ್ಟಾಗಿ​ದ್ದು, ಮುಖ್ಯವಾಗಿ ರೈತರು, ಮಹಿಳೆಯರು ವಿದ್ಯಾರ್ಥಿಗಳು ಹಾಗೂ ಬಡ ಕೂಲಿ ಕಾರ್ಮಿಕರ, ಹಿಂದುಳಿದ ವರ್ಗಗಳ ಮತ್ತು ದಲಿತರ ಏಳಿಗೆ ಗಮನದಲ್ಲಿಟ್ಟುಕೊಂಡು ಹಾಗೂ ನೀರಾವರಿ ಆರೋಗ್ಯ ಸೇರಿದಂತೆ ಎಲ್ಲಾ ರಂಗಗಳಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಮಂಡಿಸಿದ ಈ ಬಜೆಟ್‌ ತುಂಬಾ ಉಪಯುಕ್ತವಾಗಿರುತ್ತದೆ. ರಾಯಚೂರು ಜಿಲ್ಲೆಗೆ, ಮೆಗಾ ಟೆಕ್ಸ್‌ಟೈಲ್‌ ಪಾರ್ಕ್ ನಿರ್ಮಾಣ, ಮುನಿರಾಬಾದ್‌ ಗಿಣಿಗೆರ ರೈಲ್ವೆಗಾಗಿ 150 ಕೋಟಿ ರು. ಮೀಸಲು ಸ್ವಾಗತಾರ್ಹ. ಒಟ್ಟಾರೆ ಇದೊಂದು ಮಾದರಿಯ ಅತ್ಯುತ್ತಮ ಬಜೆಟ್‌ ಆಗಿರುತ್ತದೆ.

ರಾಜಾ ಅಮರೇಶ್ವರ ನಾಯಕ್‌, ಲೋಕಸಭಾ ಸದಸ್ಯರು, ರಾಯಚೂರು

ಏಮ್ಸ್‌ ಮಾದರಿ ಘೋಷಣೆ ನಿರಾಶದಾಯಕ

ನಿರಾ​ಶ​ದಾ​ಯಕ ಬಜೆಟ್‌, ಜಿಲ್ಲೆಗೆ ಏಮ್ಸ್‌ ಕೊಡುವು​ದಾಗಿ ಅಥವಾ ನೀಡು​ವು​ದಿಲ್ಲ ಎಂದು ಹೇಳ​ಬೇಕು. ಅದÜನ್ನು ಬಿಟ್ಟು ಎಲ್ಲಿಯೂ ಇಲ್ಲದ ಏಮ್ಸ್‌ ಮಾದ​ರಿ​ಯನ್ನು ಘೋಷಣೆ ಮಾಡಿ​ದ್ದಾರೆ. ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಉತ್ತಮ ಬಜೆಟ್‌ ಮಂಡನೆ ಮಾಡುವ ಅವ​ಕಾ​ಶ​ವಿ​ದ್ದರು ಸಹ ಬಿಜೆಪಿ ಸರ್ಕಾ​ರ ಅದನ್ನು ಮಾಡಿಲ್ಲ. ಕಲ್ಯಾಣ ಕರ್ನಾ​ಟ​ಕಕ್ಕೆ ಅದ​ರ​ಲ್ಲಿಯೂ ರಾಯ​ಚೂರು ಜಿಲ್ಲೆಗೆ ಬಿಜೆಪಿ ಸರ್ಕಾ​ರ ಮಲ​ತಾಯಿ ಧೋರಣೆ, ಅನ್ಯಾ​ಯದ ವರ್ತ​ನೆಯು ಈ ಬಜೆ​ಟ್‌​ನ​ಲ್ಲಿಯೂ ಸಹ ಮುಂದು​ವ​ರೆ​ದಿದೆ.

ಬಸ​ನ​ಗೌಡ ದದ್ದಲ್‌, ಗ್ರಾಮೀಣ ಶಾಸಕ ರಾಯ​ಚೂರು

ಜಿಲ್ಲೆಗೆ ಏಮ್ಸ್‌ ಸ್ಥಾಪನೆ, ವಚನ ಭ್ರಷ್ಟ

ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಏಮ್ಸ್‌ ಮಂಜೂರು ಮಾಡುತ್ತಾರೆ ಎಂಬ ನಿರೀಕ್ಷೆಯನ್ನು ಜಿಲ್ಲೆಯ ಜನರ ಹೊಂದಿರುವ ವಿಶ್ವಾಸವನ್ನು ಹುಸಿಯಾಗಿದೆ. ರಾಜ್ಯ ಸರ್ಕಾರ 281 ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ಹೋರಾಟ ಹಾಗೂ 31 ದಿನಗಳಿಂದ ಮಾಡುತ್ತಿರುವ ಉಪವಾಸ ಸತ್ಯಾಗ್ರಹ ಸೇರಿ ವಿವಿಧ ಶಿಕ್ಷಣ ಸಂಸ್ಥೆಗಳು ಮಾಡಿದ್ದ ಹೋರಾಟವನ್ನು ನಿರ್ಲಕ್ಷ್ಯ ವಹಿಸಿ, ಏಮ್ಸ್‌ ಮಾದರಿಯ ಆಸ್ಪತ್ರೆ ಮಂಜೂರು ಮಾಡುವುದಾಗಿ ಹೇಳಿ ಸರ್ಕಾರ ವಚನ ಭ್ರಷ್ಟವಾಗಿದೆ.

ಎನ್‌.ಎಸ್‌ ಬೋಸರಾಜು, ಎಐಸಿಸಿ ಕಾರ್ಯದರ್ಶಿ

ಜನಸಾಮಾನ್ಯರಿಗೆ ಮೋಸದ ಬಜೆಟ್‌

ರೈತರು ಹಾಗೂ ಜನ​ಸಾ​ಮಾ​ನ್ಯರ ಕಣ್ಣಿಗೆ ಮಣ್ಣೆ​ರಿ​ಚುವ ಬಜೆ​ಟ್‌ನ್ನು ಸಿಎಂ ಬಸ​ವ​ರಾಜ ಬೊಮ್ಮಾಯಿ ಮಂಡಿ​ಸಿ​ದ್ದಾರೆ. ರೈತ​ರಿಗೆ ಸಾಲ ಪ್ರಮಾ​ಣ​ವನ್ನು ಹೆಚ್ಚಿ​ಸಿದ್ದು ಯಾವ ಬೆಳೆಗೆ ಎಷ್ಟುಎನ್ನುವ ಸ್ಪಷ್ಟ​ತೆ​ಯಿಲ್ಲ. ಕಳೆದ ಮೂರು ವರ್ಷ​ಗ​ಳಿಂದ ನವಲಿ ಸಮಾಂತರ ಜಲಾ​ಶ​ಯದ ಬಗ್ಗೆ ಬಜೆ​ಟ್‌​ನಲ್ಲಿ ಹೆಸ​ರನ್ನು ಪ್ರಸ್ತಾ​ಪಿ​ಸುತ್ತಾ ಬಂದಿ​ದ್ದಾ​ರೆಯೇ ಹೊರತು ಅದನ್ನು ಅನು​ಷ್ಠಾ​ನಕ್ಕೆ ತರುವ ಪ್ರಮಾ​ಣಿಕ ಪ್ರಯ​ತ್ನ​ವನ್ನು ಯಾರು ಮಾಡಿಲ್ಲ. ಒಟ್ಟಿ​ನಲ್ಲಿ ಇದು ಜನರ-ರೈತರಲ್ಲಿ ಅವಿ​ಶ್ವಾ​ಸ​ವನ್ನು ಮೂಡಿ​ಸುವ ಬಜೆ​ಟ್ಟಾ​ಗಿದೆ.

ಚಾಮ​ರಸ ಮಾಲಿ​ಪಾ​ಟೀಲ್‌, ರಾಜ್ಯ ಗೌರ​ವಾ​ಧ್ಯಕ್ಷ, ಕ​ರ್ನಾ​ಟಕ ರಾಜ್ಯ ರೈತ ಸಂಘ​ದ

ಬಜೆಟ್‌ ಗಾತ್ರಕ್ಕೆ ತಾಳ-ಮೇಳವಿಲ್ಲ

ಬಿಜೆ​ಪಿಯ ಸಿಎಂ ಬಸ​ವ​ರಾಜ ಬೊಮ್ಮಾಯಿ ಅವರು ಅಸ್ಪಷ್ಟಬಜೆ​ಟ್‌ನ್ನು ಮಂಡಿ​ಸಿ​ದ್ದಾರೆ. ಜಿಎ​ಸ್‌ಟಿ ಸಂಗ್ರಹ, ಕೇಂದ್ರ​ದಿಂದ ಬರ​ವೇ​ಕಾದ ಜಿಎ​ಸ್‌ಟಿ, ಒಟ್ಟಾರೆ ಬಜೆಟ್‌ ಗಾತ್ರಕ್ಕೆ ತಾಳ-ಮೇಳ​ವಿ​ಲ್ಲ​ದಂತಾ​ಗಿದೆ. ಸರಿ​ಯಾದ ಅಂಕಿ-ಸಂಖ್ಯೆ​ಯನ್ನು ನೀಡದೇ ಮಂಡಿ​ಸಿ​ರುವ ಬಜೆಟ್‌ ಶೇ.25ರಷ್ಟುಸಾಲ​ದಿಂದ​ಲೆಯೇ ಕೂಡಿದೆ. ಬಜೆ​ಟ್‌​ನಲ್ಲಿ ಕಲ್ಯಾಣ ಕರ್ನಾ​ಟ​ಕಕ್ಕೆ ಅದ​ರ​ಲ್ಲಿಯೂ ರಾಯ​ಚೂರು ಜಿಲ್ಲೆಗೆ ಹೇಳಿ​ಕೊ​ಳ್ಳುವ ಯೋಜ​ನೆ​ಯನ್ನು ಘೋಷಿ​ಸದೇ ವಂಚಿ​ಸ​ಲಾ​ಗಿ​ದೆ.

ಎ.ವ​ಸಂತ ಕುಮಾರ, ಕೆಪಿ​ಸಿಸಿ ಪ್ರಧಾನ ಕಾರ್ಯ​ದರ್ಶಿ

ರಾಜ್ಯ ಬಜೆಟ್‌ ಕೇವಲ ಪೇಪರ್‌ ಬಜೆಟ್‌

ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್‌ ಕೇವಲ ಪೇಪರ್‌ ಬಜೆಟ್‌. ಏಕೆಂದರೆ ಚುನಾವಣೆ ಶೀಘ್ರದಲ್ಲಿ ನಡೆಯುವುದರಿಂದ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿ ಮಾಡುವುದು ಸಹಜ. ಇದರಿಂದಾಗಿ ಬಜೆಟ್‌ ಅಂಶಗಳು ಕಾರ್ಯರೂಪಕ್ಕೆ ಬರುವುದಿಲ್ಲ. ರಾಯಚೂರು ಜಿಲ್ಲೆಗೆ ಏಮ್ಸ್‌ ಆಸ್ಪತ್ರೆ ಮಂಜೂರಿಗೆ ಒತ್ತಾಯಿಸಿ ನಿರಂತರವಾಗಿ ಚಳವಳಿ ನಡೆದಿದೆ. ಆದರೆ ಸರ್ಕಾರ ಏಮ್ಸ್‌ ಮಾದರಿ ಆಸ್ಪತ್ರೆ ಮಾಡಲು ಹೊರಟಿರುವುದು ಕಣ್ಣೊರೆಸುವ ತಂತ್ರವಾಗಿದೆ. ಕಳೆದ ವರ್ಷ ನವಲಿ ಸಮಾನಾಂತರ ಜಲಾಶಯಕ್ಕೆ ಒಂದು ಸಾವಿರ ಕೋಟಿ ನಿಗದಿ ಪಡಿಸಿದ್ದರು. ಆದರೆ ಇದುವರೆಗೂ ಒಂದು ರೂಪಾಯಿ ಖರ್ಚಾಗಿಲ್ಲ.

ವೆಂಕಟರಾವ್‌ ನಾಡಗೌಡ ಶಾಸಕರು ಸಿಂಧನೂರು

ಆರ್ಥಿಕ ತಜ್ಞರಂತೆ ರೂಪಿಸಿರುವ ಬಜೆಟ್‌

ಇದೊಂದು ಅತ್ಯುತ್ತಮ ಜನಪರ ಬಜೆಟ್‌. ಚುನಾವಣೆ ಬಜೆಟ್‌ ಇದಲ್ಲ. ರೈತರು, ಕಾರ್ಮಿಕರು, ವಿದ್ಯಾರ್ಥಿ-ಯುವಜನರು, ಮಹಿಳೆಯರು, ಎಲ್ಲ ವರ್ಗದ ಆಶೋತ್ತರಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ಥಿಕ ತಜ್ಞರಂತೆ ಬಜೆಟ್‌ ರೂಪಿಸಿದ್ದಾರೆ. ಏಮ್ಸ್‌ ಮಾದರಿ ಆಸ್ಪತ್ರೆ ಇದೊಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮಾದರಿಯಲ್ಲಿ ನಿರ್ಮಿಸಲು ಹೊರಟಿರುವ ಆಸ್ಪತ್ರೆಯಾಗಿದೆ. ಒಟ್ಟಾರೆ ಬಜೆಟ್‌ ಅಭಿವೃದ್ಧಿಯ ಪರವಾಗಿದೆ.

02 ಕೆ.ವಿರೂಪಾಕ್ಷಪ್ಪ ಕೆಫೆಕ್‌ ಅಧ್ಯಕ್ಷರು, ಸಿಂಧನೂರು

ಇದೊಂದು ಪ್ರಗತಿ ವಿರೋಧಿ ಬಜೆಟ್‌

ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್‌ ನಯ ವಂಚನೆಯಿಂದ ಕೂಡಿದೆ. ರಾಜ್ಯದ ಬಡವರ, ರೈತರ, ಕಾರ್ಮಿಕರ, ಸಣ್ಣ, ಮಧ್ಯಮ ವ್ಯಾಪಾರಿಗಳನ್ನು ಕುಕ್ಕಿ ಕುಕ್ಕಿ ತಿನ್ನುವ ಪ್ರಗತಿ ವಿರೋಧಿ ಬಜೆಟ್‌ ಇದಾಗಿದೆ. ಬಜೆಟ್‌ನ ಕೊರತೆ ತುಂಬಿಸಿಕೊಳ್ಳಲು ಪುನಃ ರು.75 ಸಾವಿರ ಕೋಟಿ ಸಾಲ ಮಾಡಲಾಗಿದೆ. 39182 ಲಕ್ಷ ಬಜೆಟ್‌ನಲ್ಲಿ ಬಡವರು, ರೈತರು, ಕಾರ್ಮಿಕರಿಗೆ ಯಾವುದೇ ಅನುಕೂಲ ಇಲ್ಲ. ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿಗೆ ಹಣ ಕಡಿತಗೊಳಿಸಿ ಮಠಮಾನ್ಯಗಳಿಗೆ ನೂರಾರು ಕೋಟಿ ಕೊಡಲಾಗಿದೆ. ಅಜ್ಞಾನ, ಮೂಢನಂಬಿಕೆ ಹೆಚ್ಚು ಮಾಡಲು ಜನರ ತೆರಿಗೆ ಹಣವನ್ನು ಖರ್ಚು ಮಾಡುತ್ತಿರುವುದು ಖಂಡನೀಯ.

ಡಿ.ಎಚ್‌.ಪೂಜಾರ್‌ ರಾಜ್ಯ ಕಾರ್ಯದರ್ಶಿ ಸಿಪಿಐಎಂಎಲ್‌ (ಆರ್‌ಐ)

ರಾಯಚೂರು ನಗ​ರ: ಮೂರು ಪಕ್ಷಗಳಿಂದಲೂ ನಡೆದಿದೆ ಭರ್ಜರಿ ಟಿಕೆಟ್‌ ಲೆಕ್ಕಾಚಾರ

Follow Us:
Download App:
  • android
  • ios