Asianet Suvarna News Asianet Suvarna News

ಪ್ರವಾಹಕ್ಕೆ ಮರವೇರಿ ಕುಳಿತ ವಾನರ ಸೇನೆ: ಹಗ್ಗ ಹಿಡಿದು ದಡ ಸೇರಿದ ಮಂಗಗಳು..!

6 ಗಂಟೆ ಕಾರ್ಯಾಚ​ರಣೆ: ಪ್ರವಾಹದಲ್ಲಿದ್ದ 30 ಕೋತಿಗಳ ರಕ್ಷಣೆ| ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ಸಮೀಪ ನಡೆದ ಘಟನೆ| ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ| ಆಹಾರ ಅರಿಸಿ ಬಂದು ಪ್ರವಾಹ ಮಧ್ಯೆ ಸಿಕ್ಕಿ​ಹಾ​ಕಿ​ಕೊಂಡಿ​ದ್ದ​ ಮಂಗಗಳು|

Protection of 30 Monkeys in Flood in Harihara in Davanagere District
Author
Bengaluru, First Published Aug 8, 2020, 10:04 AM IST

ಹರಿಹರ(ಆ.08):  ತಾಲೂಕಿನ ರಾಜನಹಳ್ಳಿ ಸಮೀಪ ತುಂಗಭದ್ರಾ ನದಿ ಪ್ರವಾ​ಹದ ಮಧ್ಯೆ ಸಿಲುಕಿದ್ದ 30ಕ್ಕೂ ಹೆಚ್ಚು ಮಂಗಗಳನ್ನು ಶುಕ್ರವಾರ ಆರು ​ಗಂಟೆ​ಗಳ ಕಾರ್ಯಾ​ಚ​ರಣೆ ಬಳಿ​ಕ ರಕ್ಷಿಸಲಾಗಿದೆ. 

ಎರಡು ದಿನಗಳಿಂದ ಗಾಜುನೂರು ಅಣೆಕಟ್ಟೆಯಿಂದ ತುಂಗಾ ನದಿಗೆ ನೀರು ಬಿಡಲಾಗುತ್ತಿದ್ದು, ಇದರ ಜತೆಗೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ನದಿಯ ಸಮೀಪದಲ್ಲಿ ಆಹಾರ ಅರಿಸಿ ಬಂದ ಮಂಗಗಳು ಪ್ರವಾಹ ಮಧ್ಯೆ ಸಿಕ್ಕಿ​ಹಾ​ಕಿ​ಕೊಂಡಿ​ದ್ದ​ವು.

ಹೊನ್ನಾಳಿ ಕ್ಷೇತ್ರ ಅಭಿವೃದ್ದಿಗೆ ಸಿಎಂ ಉತ್ತಮ ಸ್ಪಂದನೆ 

ಪ್ರವಾಹ ಏರಿದಂತೆ ಪ್ರಾಣರಕ್ಷಣೆಗೆ ನದಿ ಮಧ್ಯದಲ್ಲಿದ್ದ ಮರವೇರಿ 2 ದಿನಗಳಿಂದ ಆಹಾ​ರ​ವಿ​ಲ್ಲ​ದೆ ಕುಳಿತಿದ್ದವು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ, ಅಗ್ನಿಶಾಮಕ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಮೊದಲು ಬೋಟ್‌ ಮೂಲಕ ಸ್ಥಳಕ್ಕೆ ತೆರಳಿ, ಬಲೆ ಹಾಕಿ ಅವುಗಳನ್ನು ಹಿಡಿಯಲು ಯತ್ನಿಸಿ ವಿಫಲರಾದರು. ಬಳಿಕ ಮಂಗಗಳಿದ್ದ ಮರಕ್ಕೆ ಹಾಗೂ ದಡಕ್ಕೆ ಹಗ್ಗ ಕಟ್ಟಲಾಯಿತು. ಕೊನೆಗೆ ಈ ಹಗ್ಗ ಹಿಡಿದು ಮಂಗಗಳು ದಡ ತಲುಪಿದವು.
 

Follow Us:
Download App:
  • android
  • ios