Asianet Suvarna News Asianet Suvarna News

ಚಿಕ್ಕಬಳ್ಳಾಪುರ; ನಿಯಂತ್ರಣ ತಪ್ಪಿದ ಖಾಸಗಿ ಬಸ್, ಭಾರೀ ಅಪಾಯದಿಂದ ಬಚಾವ್!

ಕೆರೆ ಕಟ್ಟೆ ಮೇಲೆ‌ ವಾಲಿದ‌ ಬಸ್ / ತಪ್ಪಿದ ಭಾರೀ ಅನಾಹುತ/ ನಿಯಂತ್ರಣ ತಪ್ಪಿದ ಖಾಸಗಿ ಬ್ಸ್/ ಮೂವತ್ತಕ್ಕೂ ಅಧಿಕ ಪ್ರಯಾಣಿಕರಿದ್ದರು.

Private Bus lost control 30 passengers safe chikkaballapur
Author
Bengaluru, First Published Sep 20, 2020, 10:17 PM IST

ಚಿಕ್ಕಬಳ್ಳಾಪುರ(ಸೆ. 20)  ಜಿಲ್ಲೆಯ‌ ಚೇಳೂರು ತಾಲೂಕಿನ ನಂಡುಂಪಲ್ಲಿ ಕಟ್ಟೆ ಮೇಲೆ‌ ಸಂಚರಿಸುವ ವೇಳೆ‌ ಖಾಸಗಿ ಬಸ್ ಚಾಲಕ ನಿಯಂತ್ರಣ ತಪ್ಪಿ ಕಟ್ಟೆ ಮೇಲೆಯ ರಸ್ತೆ ಬದಿಯ ಒಂದು ಕಡೆಗೆ ವಾಲಿದ್ದು ಭಾರೀ ಅನಾಹುತ ತಪ್ಪಿದೆ.

ಬಸ್ ನಲ್ಲಿ ಮೂವತ್ತಕ್ಕೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಹೇಗಾಯಿತು ಎಂಬುದರ ಬಗ್ಗೆ ಹೆಚ್ಚಿನ ವಿವರ ತಿಳಿದು ಬರಬೇಕಿದೆ.

ಮಂಡ್ಯ ಬಸ್ ದುರಂತ ಸಂತ್ರಸ್ತರಿಗೆ ಕೊನೆಗೂ ಸಿಕ್ಕ ಪರಿಹಾರ

ಮಂಡ್ಯದಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಬಸ್ ದುರಂತ ಮೂವತ್ತಕ್ಕೂ ಅಧಿಕ ಜೀವ ಬಲಿ ಪಡೆದುಕೊಂಡಿತ್ತು.  ಮಂಡ್ಯದ ಪಾಂಡವಪುರ ಕನಗನಮರಡಿ ನಲ್ಲಿ ಸಂಭವಿಸಿದ ಭೀಕರ ಬಸ್ ದುರಂಕ್ಕೆ ಇಡೀ ದೇಶವೇ ಕಂಬನಿ ಮಿಡಿದಿತ್ತು. 

Follow Us:
Download App:
  • android
  • ios