Asianet Suvarna News Asianet Suvarna News

ಸುವರ್ಣಸೌಧದ ಎದು​ರು ಚನ್ನಮ್ಮ ಪುತ್ಥಳಿಗೆ ಆಗ್ರ​ಹ

ಪುತ್ಥಳಿ ವಿಚಾರ ಇದೀಗ ಹೆಚ್ಚು ಸದ್ದಾಗುತ್ತಿದೆ. ಬೆಳಗಾವಿಯ ಸುವರ್ಣ ಸೌಧದ ಎದುರು ಚನ್ನಮ್ಮ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

People Wants Channamma Statue infront Of Suvarna soudha
Author
Bengaluru, First Published Sep 7, 2020, 7:28 AM IST

ಬೆಳಗಾವಿ (ಸೆ.07): ಪೀರ​ನ​ವಾಡಿ ಆಯ್ತು, ಈಗ ಸುವರ್ಣ ವಿಧಾನಸೌಧದ ಎದುರು ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿ​ವೀ​ರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಿ ಭಾನುವಾರ ‘ಸಂಕಲ್ಪ ಯಾತ್ರೆ’ ನಡೆ​ಸ​ಲಾ​ಯಿ​ತು. 

ಜಿಲ್ಲೆಯ ಮೂಡಲಗಿಯ ಶ್ರೀಮಂತ ಶಿವಯೋಗಿ ಮಹಾರಾಜರ ನೇತೃತ್ವದಲ್ಲಿ ಮೂಡಲಗಿ ಪಟ್ಟಣದಿಂದ ಆರಂಭವಾದ ಸಂಕಲ್ಪ ಯಾತ್ರೆ ಬೆಳಗಾವಿ ನಗರದ ಚನ್ನಮ್ಮ ವೃತ್ತಕ್ಕೆ ಬಂದು ತಲುಪಿತು. ಅಲ್ಲಿ ಪ್ರತಿಭಟಿಸಿ, ಪೀರನವಾಡಿಯತ್ತ ತೆರಳಿತು. 

ರಾಯಣ್ಣನ ಪ್ರತಿಮೆ ಸ್ಥಳಕ್ಕೆ ಶಿವಾಜಿ ಚೌಕ ನಾಮಕರಣ .

ಬೆಳಗಾವಿ ಸುವರ್ಣಸೌಧದ ಎದುರು ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಶೂರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಲಾಯಿತು.

ಮೂಡಲಗಿಯ ಶ್ರೀಮಂತ ಶಿವಯೋಗಿ ಮಹಾರಾಜರು ಸೇರಿ ಹಲವು ಗಣ್ಯ​ರು, ವಿವಿಧ ಕನ್ನ​ಡಪರ ಸಂಘ​ಟ​ನೆ​ಗಳು ಪಾಲ್ಗೊಂಡಿ​ದ್ದ​ವು.

Follow Us:
Download App:
  • android
  • ios